ರಾಜಕೀಯ

ಬಿಜೆಪಿಯವ್ರನ್ನ ಟಚ್ ಮಾಡಿದ್ರೆ ಹುಷಾರ್ : ಪ್ರತಾಪ್ ಸಿಂಹ

Published

on

ಸುದ್ದಿದಿನ, ಚಾಮರಾಜನಗರ : “ನಮ್ಮ‌‌ ಬಿಜೆಪಿ‌ ಕಾರ್ಯಕರ್ತರನ್ನ ಕುಮಾರಸ್ವಾಮಿ‌‌ ಸರ್ಕಾರ ಏನಾದ್ರೂ ಮುಟ್ಟಿದ್ರೆ, ನಾವು ಸುಮ್ಮನಿರೋಲ್ಲ, ಹುಷಾರ್” ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು.

ಶನಿವಾರ ಚಾಮರಾಜ ನಗರಲ್ಲಿ‌‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರನ್ನು ಟಚ್ ಮಾಡಿದ್ರೆ ನಾವು ಸುಮ್ಮನೆ ಕೂರೊಲ್ಲ. ಹಾಗೇ ನಾನು ಹಾಸನದಿಂದ ಎಂಪಿ‌ ಚುನಾವಣೆಗೆ ಸ್ಪರ್ಧಿಸೋದಿಲ್ಲ. ಅದು ಕೇವಲ ಊಹಾಪೂಹವಷ್ಟೆ. ಮೈಸೂರಿನಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಅದಕ್ಕಾಗಿ ಕೇಂದ್ರದಿಂದ ಹನ್ನೊಂದುವರೆ ಕೋಟಿ‌ ಬಿಡುಗಡೆ ಮಾಡಿಸಿದ್ದೇನೆ ಹಾಗಾಗಿ‌ ಮೈಸೂರಿನಿಂದಾನೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version