ದಿನದ ಸುದ್ದಿ
ಆತ್ಮನಿರ್ಭರ ಭಾರತ ಕನಸು ಸಾಕಾರಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿದ್ಯಾರ್ಥಿಗಳಿಗೆ ಕರೆ
ಸುದ್ದಿದಿನ ಡೆಸ್ಕ್ : ನಾಗ್ಪುರದ ಇಂಡಿಯನ್ ಇನ್ಸ್ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಿಸ್ತೃತ ಕಟ್ಟಡವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಲೋಕಾರ್ಪಣೆ ಮಾಡಿದರು.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಯಾರಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಧರ್ಮೇಂದ್ರ ಪ್ರಧಾನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾತನಾಡಿ ಆತ್ಮನಿರ್ಭರ ಭಾರತ ಯೋಜನೆಯಡಿ ಅನ್ವೇಷಣೆ ಮತ್ತು ಅನುಸಂಶೋಧನೆಗೆ ವಿದ್ಯಾರ್ಥಿಗಳು ಒತ್ತು ನೀಡಿದ್ದಲ್ಲಿ, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಹಾರಾಷ್ಟ್ರ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕೇಂದ್ರವಾಗಿರು ನಾಗ್ಪರ್ ಅಂಬೇಡ್ಕರ್ ಅವರ ಧರ್ಮಚಕ್ರ ಪರಿವರ್ತನಾ ಕೇಂದ್ರವೂ ಆಗಿದೆ ಎಂದು ಅವರು ಪ್ರತಿಪಾದಿಸಿದರು.
ನಾಗ್ಪುರ ನಗರದ ವಾರ್ಧಾ ರಸ್ತೆಯಲ್ಲಿರುವ ಮಿಹಾನ್ ಪ್ರದೇಶದಲ್ಲಿ ಸುಮಾರು 132 ಎಕರೆ ಭೂಮಿಯಲ್ಲಿ ನಾಗ್ಪುರ್ ಇಂಡಿಯನ್ ಇನ್ಸ್ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನೂತನ ವಿಸ್ತೀರಣ ಕಟ್ಟಡವನ್ನು ಉದ್ಘಾಟಿಸಲಾಯಿತು. ಈ ಸಂಸ್ಥೆಯಲ್ಲಿ ಪ್ರಸ್ತುತ 668ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಶಿಕ್ಷಣ ಪಡೆಯುತ್ತಿದ್ದಾರೆ.
President Ram Nath Kovind inaugurated the permanent campus of the Indian Institute of Management, Nagpur.
Details: https://t.co/dwIZVIM2l9 pic.twitter.com/FDsM8TPTjK
— President of India (@rashtrapatibhvn) May 8, 2022
This new campus of IIM, Nagpur is the cradle for our young minds who would be soon stepping out in the world of new opportunities and accomplishments. pic.twitter.com/JjtIOAuHMy
— President of India (@rashtrapatibhvn) May 8, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243