ದಿನದ ಸುದ್ದಿ
ಚನ್ನಗಿರಿ | ‘ರೇಣುಕ ಮಾದರ್’ ಅತ್ಯಾಚಾರ, ಕೊಲೆ ಖಂಡಿಸಿ ಡಿ ಎಸ್ ಎಸ್ ನಿಂದ ಪ್ರತಿಭಟನೆ
ಸುದ್ದಿದಿನ, ಚನ್ನಗಿರಿ : ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ವಿಜಯಪುರ ಜಿಲ್ಲೆಯ ದೇವರಹಿಪ್ಪರಿಗಿ ತಾಲ್ಲೂಕ್ ಅಸಂತಾಪುರ ಗ್ರಾಮದ ಪ್ರಥಮ ಪಿ.ಯು.ಸಿ ಓದುತ್ತಿದ್ದ ವಿದ್ಯಾರ್ಥಿನಿ ರೇಣುಕಾ ಮಾದರ್ ರವರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಮಾಡಿರುವುದನ್ನು ಖಂಡಿಸಿ ಇಂದು ಚನ್ನಗಿರಿಯಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ತಾಲ್ಲೂಕ್ ಸಂಚಾಲಕರಾದ ನವಿಲೆಹಾಲ್ ಕೃಷ್ಣಪ್ಪ ,ತಾಲ್ಲೂಕ್ ಖಜಾಂಚಿ ಎಚ್.ಎನ್. ಮೂರ್ತಿ ತಿಪ್ಪಗೊಂಡನಹಳ್ಳಿ,ಇಟ್ಟಿಗಿ ತಿಮ್ಮಯ್ಯ,ನವೀನ್ ಬುಲುಸಾಗರ ,ಸ್ವಾಮಿ ದೋಣಿಹಳ್ಳಿ, ಸದಾನಂದಪ್ಪ,ನಾಗರಾಜ್ಬುಸೇನಹಳ್ಳಿ,ಹಾಲೇಶ್ ಹೀರೆವುಡ್,ಜಗದೀಶ್, ನಾಗರಾಜ್ ಗಾಂಧಿನಗರ,ನಾಗರಾಜ್, ವಿದ್ಯಾರ್ಥಿಗಳು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243