/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಮದ್ದೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

Published

on

ಸುದ್ದಿದಿನ,ಮದ್ದೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಬೇಕು ರೈತರ ಎಲ್ಲಾ ಕೃಷಿ ಸಾಲ ಸ್ತ್ರೀ ಶಕ್ತಿ ಸಂಘಗಳ ಸಾಲಗಳ ಸಂಪೂರ್ಣ ಮನ್ನಾ ಮಾಡಿ ರೈತರಿಗೆ ಋಣಮುಕ್ತ ಪತ್ರ ಕೊಡಬೇಕೆಂದು ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಶಂಭುಗೌಡ ಮಾತನಾಡಿ ಕಳೆದ ಮೂರು ನಾಲ್ಕು ವರ್ಷಗಳ ನಿರಂತರ ಬರಗಾಲದಿಂದ ರೈತರ ಬದುಕು ಅತಂತ್ರವಾಗಿದೆ ಈಗಷ್ಟೇ ತಡವಾಗಿ ಮಳೆ ಬಂದು ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳು ನಡೆದಿಲ್ಲ ಹಾಗೂ ರೈತ ಸಾಲಬಾಧೆಯಿಂದ ರೈತ ಹೊರಬರಲು ಸಾಧ್ಯವಾಗಿಲ್ಲ ಹೀಗಾಗಿ ತಾಲೂಕು ಹಾಗೂ ಜಿಲ್ಲೆಯ ರಾಜ್ಯದಲ್ಲೇ ಅತಿ ಹೆಚ್ಚಿನ ರೈತರ ಆತ್ಮಹತ್ಯೆಗಳು ಸಂಭವಿಸುತ್ತಿದ್ದು ರಾಜ್ಯ ಸರ್ಕಾರ ಕೂಡಲೇ ಮೇವು ಪಶು ಆಹಾರ ಬೆಲೆ ಸಾಕಾಣಿಕೆ ಮುಂತಾದ ಉತ್ಪನ್ನ ವೆಚ್ಚಗಳ ಪರಿಗಣಿಸಿ ಹಾಲಿಗೆ ಲೀಟರ್ಗೆ ಕನಿಷ್ಠ 30 ಗುರು ಕಲೆ ನಿಗದಿ ಮಾಡಬೇಕು ಕಳೆದ ಆರು ತಿಂಗಳಿಂದ ನಿಲ್ಲಿಸಿರುವ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರೇಷ್ಮೆ ಬೆಲೆ ಕುಸಿದು ರೇಷ್ಮೆಗೆ ಪ್ರತಿ ಕೆಜಿಗೆ ಕನಿಷ್ಠ ಐನೂರು ನಿಗದಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ರೇಷ್ಮೆ ಬೆಲೆ ತಾರತಮ್ಯ ಮಾಡದೇ ಎಲ್ಲ ತಳಿಯ ರೇಷ್ಮೆಗೆ ಕೆಜಿಗೆ ಕನಿಷ್ಠ ಐವತ್ತು ರೂಪ ಸಾಧನ ನೀಡಬೇಕು ಹಾಗೂ ಡಾಕ್ಟರ್ ಬಸವರಾಜ್ ಸಮಿತಿ ಶಿಫಾರಸ್ಸನ್ನು ಅನುಷ್ಠಾನಗೊಳಿಸಬೇಕು ಮತ್ತ ಕುಟ್ಟಲೇಕೆ ಎರಡು ಸಾವಿರದ ಇನ್ನೂರು ದರ ನಿಗದಿ ಮಾಡಬೇಕು ಒಣಗಿದ ತೆಂಗಿನ ಮರಗಳಿಗೆ ಪರಿಹಾರ ನೀಡಲು ಸರ್ಕಾರ ಅರ್ಜಿ ಪಡೆದು ಎರಡು ವರ್ಷಗಳಾದರೂ ಪರಿಹಾರ ಹಣ ಬಂದಿಲ್ಲ ಕೂಡಲೇ ಹಣ ಬಿಡುಗಡೆ ಮಾಡಬೇಕು ತಾಲ್ಲೂಕಿನ ಎಲ್ಲ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಒತ್ತುವರಿಯಾಗಿರುವ ಕೆರೆಗಳ ಅಳತೆ ಮಾಡಿಸಿ ಕೆರೆಗಳಿಗೆ ಅಭಿವೃದ್ಧಿಪಡಿಸಬೇಕು ಕಳೆದ ಹಿಂಗಾರು ಹಂಗಾಮಿನ ಭತ್ತವನ್ನು ಖರೀದಿ ಕೇಂದ್ರಕ್ಕೆ ಸರಬರಾಜು ಮಾಡಿದ ರೈತರಿಗೆ ಭತ್ತದ ಹಣ ಪಾವತಿ ಮಾಡಬೇಕು ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅದನ್ನು ಕಡಿವಾಣ ಹಾಕಲು ಮುಂದಾಗಬೇಕು ಇಲ್ಲದಿದ್ದರೆ ಹಗಲು ರಾತ್ರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನಂತರ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬೋರಾಪುರ ಶಂಕರೇಗೌಡ ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಮೇಶ್ ಪ್ರಧಾನ ಕಾರ್ಯದರ್ಶಿ ವೈಕೆ ರಾಮೇಗೌಡ.ದೇಸಿ ಪ್ರಕಾಶ್ ಕೆಜಿ ಉಮೇಶ್ ಪ್ರಭುಲಿಂಗು ತಮ್ಮೇಗೌಡ ಲಿಂಗೇಗೌಡ ಕೆಂಪೇಗೌಡ ತಮ್ಮನಗೌಡ ಶ್ರೀಧರ ಮಾದೇಗೌಡ ಬಸವರಾಜು ರಾಮಲಿಂಗೇ ಮಹೇಶ ಗಣೇಶ ಚಂದ್ರು ಗದ್ದ ಲಿಂಗೇಗೌಡ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version