ದಿನದ ಸುದ್ದಿ
ವಡಗೇರಾ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಕರವೇ ಪ್ರತಿಭಟನೆ
- ವರದಿ : ನಿಂಗಣ್ಣ
ಸುದ್ದಿದಿನ,ವಡಗೇರಾ : ವಡಗೇರಾ ನೂತನ ತಾಲೂಕು ಕೇಂದ್ರವಾಗಿ ಎರಡು ವರ್ಷ ಕಳೆದರೂ ಅಭಿವೃದ್ಧಿಮರೀಚಿಕೆಯಾಗಿದೆ. ತಹಶೀಲ್ದಾರ್ ಕಾರ್ಯಲಯ ಬಿಟ್ಟು ಇನ್ನುಳಿದ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಂದು ಕರವೇ ಜಿಲ್ಲಾ ಘಟಕ ಸೋಮವಾರ ಪ್ರತಿಭಟನೆ ನಡೆಸಿತು.
ವಡಗೇರಾ ಬಂದ್ ಹಿನ್ನಲೆ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮತ್ತು ಅಂಗಡಿ ಮುಂಗಟ್ಟುಗಳು ಮತ್ತುಮುಚ್ಚಲಾಗಿತ್ತು. ಸ್ಥಳೀಯ ವ್ಯಾಪಾರಿಗಳು ಭಾರಿ ಗಾತ್ರದ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಯದಂತೆ ರಸ್ತೆ ತಡೆದು ಕ.ರ.ವೇ ವತಿಯಿಂದ ಬೃಹತ್ ಪತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ವಾಲ್ಮೀಕಿ ಚೌಕದವರೆಗೋ ರಾಜ್ಯ ಸರ್ಕಾರ ದ ವಿರುದ್ಧ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೋಗುತ್ತಾ
ವಾಲ್ಮೀಕಿ ಚೌಕದಲ್ಲಿ ಧರಣಿ ಕೂತು
ವಡಗೇರಾ ತಾಲೂಕಿನ ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ದಿನ ನಿತ್ಯದ ಕೆಲಸಕ್ಕಾಗಿ ವಡಗೇರಾ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಬಡ ಕಾರ್ಮಿಕರು, ವಿದ್ಯಾರ್ಥಿಗಳು,ಮಹಿಳೆಯರು, ವೃದ್ಧರು,ಅಂಗವಿಕಲರು, ಒಂದು ಸಣ್ಣ ಕೆಲಸಕ್ಕಾಗಿ ಹಳೆ ತಾಲೂಕಾದ ಶಹಾಪುರ ಪಟ್ಟಣಕ್ಕೆ ಹೋಗಬೇಕಾದ ದುಃಸ್ಥಿತಿ ಬಂದಿದೆ ಎಂದು ವಾಸ್ತವ ತೆರೆದಿಟ್ಟರು.
ವಡಗೇರಾ ತಾಲೂಕ ಹಿಂದುಳಿದ ಸಾಮಾನ್ಯ ಬಡ ಜನರ ತಾಲೂಕು ಆಗಿದ್ದು ತಮ್ಮ ಕೆಲಸ ಕಾರ್ಯಗಳು ಬಿಟ್ಟು ಹೋಗುವುದರಿಂದ ಒಂದು ದಿನ ವ್ಯರ್ಥವಾಗುತ್ತದೆ ಇದಕ್ಕೆ ನೇರ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಎಂದು ಆರೋಪಿಸಿದರು.
ಜನಪ್ರತಿನಿಧಿಗಳು ಜಿಲ್ಲಾಡಳಿತದ ನಿಷ್ಕಾಳಜಿ ತನ ದಿವ್ಯ ನಿರ್ಲಕ್ಷತನ ತೋರಿಸುತ್ತದೆ ಹಿಂದುಳಿದ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮತ್ತು ತಕ್ಷಣದಿಂದಲೇ ಎಲ್ಲ ಇಲಾಖೆಗಳು ಪ್ರಾರಂಭಮಾಡಿ ಈ ಭಾಗದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಟಿ. ನಾರಾಯಣಗೌಡ ಬಣ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.
ಬೇಡಿಕೆಗಳು ಈ ರೀತಿಯಾಗಿವೆ
- ವಡಗೇರಾ ತಾಲ್ಲೂಕು ಎಲ್ಲಾ ಸರ್ಕಾರ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಬೇಕು.
- ಉಪಖಜಾನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಪ್ರಾರಂಭಿಸಬೇಕು.
- ತಾಲೂಕಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ತಾಲೂಕು ನ್ಯಾಯಾಲಯ ಸ್ಥಾಪಿಸಬೇಕು.
- ತಾಲೂಕು ಕೇಂದ್ರದಿಂದ ಹೋಗುವ ಎಲ್ಲಾ ಗ್ರಾಮಗಳಿಗೆ ರಸ್ತೆ ಸುಧಾರಣೆ ಮಾಡಬೇಕು.
- ಈ ಭಾಗದ ರೈತರಿಗೆ ಪದವಿಪೂರ್ವ ಕಾಲೇಜು ಮಹಾವಿದ್ಯಾಲಯ ಡಿಪ್ಲೋಮ್ ಡಿ.ಇ.ಡಿ. ಬಿ.ಇ.ಡಿ ಕಾಲೇಜು ಸ್ಥಾಪನೆ ಮಾಡಬೇಕು.
- ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರ ವಸತಿ ನಿಲಯವನ್ನು ಮಂಜೂರು ಮಾಡಬೇಕು.
- ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಬೇಕು.
- ತಾಲೂಕು ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು ಅದನ್ನು ತಾಲೂಕ ಆಸ್ಪತ್ರೆಯಾಗಿ ಮಾಡಬೇಕು.
- ಕದ್ರಾಪುರ ವಡಗೇರಾ ಕೃಷ್ಣ ಬ್ಯಾರೇಜ್ ನಿಂದ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
- ಕೃಷ್ಣ ಭಾಗ್ಯ ಜಲ ನಿಗಮದಿಂದ
ಕೈಗೆತ್ತಿಕೊಂಡಿರುವ ಕೊನೆಯ ಭಾಗದ ಕಾಲುವೆ ಕಾಮಗಾರಿಗಳು ಹಾಗೂ ನವೀಕರಣ ಕಾಮಗಾರಿಗಳು ಸಮರ್ಪಕವಾಗಿ ಮಾಡಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡಬೇಕು.
ಭೀಮ ನಾಯಕ್ ಕ.ರ.ವೇ ಜಿಲ್ಲಾಧ್ಯಕ್ಷರು ಯಾದಗಿರಿ ಅಫರ ಜಿಲ್ಲಾಧಿಕಾರಿಗಳಿಗೆ ಹಾಗೂ ವಡಗೇರಾ ತಹಶೀಲ್ದಾರ್ ಸಂತೋಷಿ ರಾಣಿ ಹಾಗೂ ವಡಗೇರಾ ಪಿ.ಎಸ್.ಐ.ಸಿದ್ದಾರಾಯ ಬೂಳರ್ಗಿ ಅವರಿಗೆ ಮನವಿ ಪತ್ರ ನೀಡುವ ಮುಖಾಂತರ ಪ್ರತಿಭಟನೆಯನ್ನು
ಮುಟುಕುಗೊಳಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ್ ಕೊಂಕಲ್ ತಾಲೂಕ್ ಅಧ್ಯಕ್ಷರು ವಡಗೇರಾ, ಅಬ್ದುಲ್ ಚಿಗನೂರ್ ಜಿಲ್ಲಾ ಉಪಾಧ್ಯಕ್ಷರು,ಚೌಡಯ್ಯ ಬಾವೂರ ಜಿಲ್ಲಾ ಗೌರವಾಧ್ಯಕ್ಷ, ಹನುಮಂತರಾಯ ತೇಕರಾಳ ಜಿಲ್ಲಾ ಸಂಚಾಲಕರು, ಮಲ್ಲು ಕಲ್ಮನಿ ಹಾಲಗೇರ ತಾ.ಯು.ಘ.ಅಧ್ಯಕ್ಷರು, ಬಸವರೆಡ್ಡಿ ಅಭಿಶಾಳ್ ತಾ.ಪ್ರ.ಕಾರ್ಯದರ್ಶಿ, ಶಿವರಾಜ್ ಗೋನಲ್ ವಲಯ ಅಧ್ಯಕ್ಷರು ವಡಗೇರಾ,ದೇವರಾಜ್ ಕುರುಕುಂದಿ ತಾ.ಯು.ಘ.ಪ್ರ.ಕಾರ್ಯದರ್ಶಿ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243