ದಿನದ ಸುದ್ದಿ

ಸೆ.4 ರಂದು ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ನವಿಲೇಹಾಳು ಅವರ ‘ಹಾಲಕ್ಕಿ ನುಡಿತೈತೆ’ ಕೃತಿ ಲೋಕಾರ್ಪಣೆ

Published

on

ಸುದ್ದಿದಿನ,ದಾವಣಗೆರೆ: ನವಿಲೇಹಾಳು ( Navilehal ) ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ( Nagendrappa C.H ) ರವರ ಚೊಚ್ಚಲ ಕೃತಿ ‘ಹಾಲಕ್ಕಿ ನುಡಿತೈತೆ‘ ಕವನ ಸಂಕಲನ (Halakki Nuditaite : collection of poem’s) ಸೆ.4ರಂದು ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಯಾಗಲಿದೆ.

ಕನ್ನಡ ಗತ ವೈಭವ ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶ ಸಂಸ್ಥೆ ಹಮ್ಮಿಕೊಂಡಿರುವ ಪ್ರಶಸ್ತಿ ಪ್ರಧಾನ, ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀಯುತರ ತಾಯಿ ಶ್ರೀಮತಿ ಚಂದ್ರಮ್ಮ ಚಿರಡೋಣಿ ಹಾಲಪ್ಪ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕನ್ನಡ ಸಾಂಸ್ಕೃತಿಕ ಗತವೈಭವ ಸಂಸ್ಥೆಯ ಅಧ್ಯಕ್ಷರರಾದ ಡಾ.ಷಕೀಬ್ ಕಣದ್ಮನೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version