ದಿನದ ಸುದ್ದಿ
ಭಾರತದ ರಾಜಕಾರಣದಲ್ಲಿ ಯುವಕರ ಪಾತ್ರ ಮೇರು ಶಿಖರ..!
- ಶೈಲಜಾ ಸಿ, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಂದಾಕ್ಷಣ ನಮ್ಮ ಮನದಲ್ಲಿ ಒಂದು ಸಂಚಲನ ಮೂಡುವುದು. ಅಟ್ ದಿ ಸೆಮ್ ಟೈಮ್ ಗೊಂದಲವು ಮೂಡುವುದು. ಅದೇನಂದರೇ, ಯುವಕರು ರಾಜಕೀಯ ಪ್ರವೇಶ ಮಾಡಬೇಕೋ.. ಬೇಡವೋ.. ಅನ್ನುವ ಆಯ್ಕೆ ನಮ್ಮ ಮುಂದೆ ಹಾದು ಹೋಗುವುದು ಖಂಡಿತ. ಕಾರಣ ಭಾರತದ ರಾಜಕಾರಣವನ್ನ ಜಡ್ಜ್ ಮಾಡವುದು ತುಂಬಾ ಕಠಿಣವಾಗುತ್ತದೆ. ಜಗತ್ತಿನ ಹಲವು ದೇಶಗಳ ರಾಜಕಾರಣ ಒಂದೆಡೆಯಿಂದ ಆದರೆ, ಭಾರತದ ರಾಜಕಾರಣವೇ ಬೇರೆಯಾಗಿದೆ.
ಯಾಕೆಂದರೆ ನಾವು ಇಲ್ಲಿನ ರಾಜಕಾರಣಿಗಳಲ್ಲಿ ದಕ್ಷತೆಯಿಂದ ಜನ ಸಮೂಹಗಳಿಗೆ ಏನಾದರು ಮಾಡಲು ತುಡಿತ ಹೊಂದಿರುವವರು ಇದ್ದಾರೆ. ಅದೇ ರೀತಿಯಲ್ಲಿ ಭ್ರಷ್ಟರು ಇದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪುಂಡರು ಕೂಡ ರಾಜಕೀಯಕ್ಕೆ ಲಗ್ಗೆ ಇಟ್ಟಿರುವುದು ನಮ್ಮ ಕಣ್ಣ ಮುಂದಿದೆ. ಈ ಕೆಲವೇ ಕೆಲವು ಕಾರಣಗಳಿಂದ ನಮ್ಮ ಯುವಕರು ಆದಂತ ಯುವಕ-ಯುವತಿಯರು ಈ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಆದರೆ, ನಮ್ಮ ಯುವಕರು ರಾಜಕೀಯ ಪ್ರವೇಶ ಮಾಡಬೇಕು ಎಂಬುದು ನನ್ನ ಬಯಕೆ. ಯಾಕೆಂದರೆ ಭಾರತ (ರಾಷ್ಟ್ರದಂತಹ) ನಿರ್ಮಾಣದಲ್ಲಿ ರಾಜಕೀಯ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ನಗರದಲ್ಲಿ ಒಂದು ಸಣ್ಣ ಗ್ರಂಥಾಲಯದಿಂದ ದೊಡ್ಡ ದೊಡ್ಡ ಕಾಮಗಾರಿಗಳಿಗೆ ಅಲ್ಲಿನ ಸ್ಥಳೀಯ ನಾಯಕರ ಪ್ರಭಾವ ಮತ್ತು ಸತತ ಪ್ರಯತ್ನ ಬಹಳ ಅತ್ಯವಶ್ಯಕವಾಗಲಿದೆ. ಆದ್ದರಿಂದ ನಮ್ಮ ಯುವಕರು ಈ ಮೂಲಕ ಭಾರತದ ಏಳಿಗೆಗೆ ಪಾತ್ರರಾಗಬೇಕು. ನಾವು ರಾಜಕೀಯ ಪ್ರವೇಶ ಮಾಡದಿದ್ದರೆ ನಮಗೆ ನಷ್ಟ ಹೊರತು ಬೇರೆ ಯಾರಿಗೂ ಅಲ್ಲ. ಜ್ಞಾನ ಜಗತ್ತನ್ನು ಆಳುತ್ತದೆ ಎಂಬುದು ನೂರಕ್ಕೆ ನೂರು ಸತ್ಯ.
ಆದರೆ ನಮ್ಮ ಭಾರತವನ್ನು ರಾಜಕೀಯ ಆಳುತ್ತದೆ ಎನ್ನುತ್ತೇನೆ. ಕಾರಣ ನೀವು ಎಂಜಿನಿಯರ್ ಆದರೆ, ಹೆಚ್ಚೆಂದರೆ ನಿಮ್ಮನ್ನ ಪ್ರಧಾನ ಮಂತ್ರಿಯ ಟ್ವಿಟರ್ ಆ್ಯಂಡಲ್ ಮಾಡಲು ನೇಮಿಸಿ ಕೊಳ್ಳುತ್ತಾರೆ , ನೀವು ಐಎಎಸ್, ಐಪಿಎಸ್ ಮುಂತಾದ ಪರೀಕ್ಷೆಯಲ್ಲಿ ಅರ್ಹತೆಯನ್ನು ದಟ್ಟಿದರೆ ಇಂಥವರನ್ನು ಹೆಚ್ಚೆಂದರೆ ಮಂತ್ರಿಗಳ ಪಿಎಸ್ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಾರೆ. ನೀವು ದೊಡ್ಡ ಉದ್ಯಮಿ ಆದರೆ, ರಾಜಕಾರಣಿಗಳು ನಿಮ್ಮ ಹೆಗಲ ಮೇಲೆ ಕೈ ಹಾಕಿ ಫೋಟೋಗಳಲ್ಲಿ ನೀಡಬಹುದು.
ಭಾರತ ಭಾಗ್ಯವಿಧಾತ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರು ಇಡೀ ಜಗತ್ತಿನಲ್ಲೇ ಅತಿ ಉಪಯುಕ್ತವಾದ ಜನ ಸಮೂಹಗಳಿಗೆ ಅತ್ಯಂತ ಪ್ರರೇಣೆಯಿಂದ ಇಂದಿಗೂ ಕೂಡ ನಾವೆಲ್ಲರೂ ಸಂವಿಧಾನದಿಂದ ಭಾರತದ ಪ್ರಜೆಗಳಿಗೆ ಎಲ್ಲ ರಂಗಗಳಲ್ಲಿ ಮುನ್ನೆಲ್ಲೆ ಬರಲು ಸಹಾಯಕವಾಗಿದೆ.
ಅದೇ ರೀತಿಯ ಹಣವಂತರು, ಸ್ಥಿತಿವಂತರು ಅಲ್ಲದ ಸಾಮಾನ್ಯ ವ್ಯಕ್ತಿಯು ಕೂಡ ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರುವ ಅವಕಾಶ ನೀಡಿದೆ. ಇದಕ್ಕೆ ಮುಖ್ಯ ಕಾರಣವೇ ಯುವ ಶಕ್ತಿಯಾಗಿದೆ.
ಇಂದಿನ ಯುವ ಪೀಳಿಗೆಯು ಪ್ರಸ್ತುತ ರಾಜಕಾರಣದಲ್ಲಿ ಪಾಲ್ಗೊಂಡು ನಮ್ಮ ಪೂರ್ವಜರಾದ ಬಾಬಾಸಾಹೇವ್ ಡಾ. ಬಿ.ಆರ್. ಅಂಬೇಡ್ಕರ್ ರವರು, ದಾದಾಸಾಹೇಬ್ ಕಾನ್ಷೀರಾಮ್, ಬುದ್ಧ, ಬಸವಣ್ಣ, ಜ್ಯೋತಿ ಭಾ ಫುಲೆ, ಸಾವಿತ್ರಿ ಭಾ ಫುಲೆ, ನಾರಾಯಣ್ ಗುರು, ಎಂ.ಕೆ. ಗಾಂಧಿ ಹಾಗೆಯೇ ಇನ್ನು ಹಲವಾರು ಮುಂತಾದ ಮಹಾನ್ ಸಾಧಕರಿಂದ ನಮ್ಮ ಕನಸಿನ ಭಾರತ ನಿರ್ಮಾಣ ಮಾಡುವಲ್ಲಿ ಯಶಸ್ವಿ ಸಾಧಿಸಬೇಕು. ಎಂಬುದು ಪ್ರತಿಯೊಬ್ಬರ ಮಹಾನ್ ಹಂಬಲವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243