ದಿನದ ಸುದ್ದಿ

‘300 ಮೊಬೈಲ್​’ಗಳನ್ನ ಮರಗಳು ಬಳಸುತ್ತಿದ್ವಾ? : ರಾಜನಾಥ್ ಸಿಂಗ್​​ ವ್ಯಂಗ್ಯ

Published

on

ಸುದ್ದಿದಿನ ಡೆಸ್ಕ್ : ಪಾಕಿಸ್ತಾನದ ಬಾಲಾಕೋಟ್​​ನಲ್ಲಿ ಜೈಷ್​​ ಶಿಬಿರಗಳ ಮೇಲೆ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಚರ್ಚೆ ನಡೆಯುತ್ತಿರೋ ಹಿನ್ನೆಲೆ ಗೃಹಸಚಿವ ರಾಜನಾಥ್​​ ಸಿಂಗ್​​​ ಕಾಂಗ್ರೆಸ್​​ಗೆ ಟಾಂಗ್ ನೀಡಿದ್ದಾರೆ.

ವಾಯುಸೇನೆಯ ಮಿರಾಜ್​​ 2000 ಯುದ್ಧವಿಮಾನ ಬಾಂಬ್​​ ದಾಳಿ ನಡೆಸುವುದಕ್ಕೂ ಮುನ್ನ ಜೈಷ್​ ಶಿಬಿರದಲ್ಲಿ ಸುಮಾರು 300 ಮೊಬೈಲ್​​ ಫೋನ್​ಗಳು ಆ್ಯಕ್ಟೀವ್​ ಆಗಿದ್ದವು ಎಂದು ನ್ಯಾಷನಲ್​​ ಟೆಕ್ನಿಕಲ್​​​ ರಿಸರ್ಚ್​ ಆರ್ಗನೈಸೇಷನ್(ಎನ್​ಆರ್​ಟಿಓ)​​​ ಹೇಳಿದೆ.

ಎನ್​ಆರ್​ಟಿಓ ದೇಶದ ಟಾಪ್​​​ ಟೆಕ್ನಿಕಲ್​​​ ಅನಾಲಿಸಿಸ್​​​ ಮತ್ತು ಗುಪ್ತಚರ ಮಾಹಿತಿ ಸಂಗ್ರಹ ಏಜೆನ್ಸಿ. ಸುಮಾರು 300 ಮೊಬೈಲ್​​​ ಫೋನ್​ಗಳು ಆ್ಯಕ್ಟೀವ್​ ಆಗಿದ್ದವು ಎಂದು ಎನ್​ಆರ್​ಟಿಓ ಹೇಳಿದೆ. ಹಾಗಾದ್ರೆ ಈ ಫೋನ್​​ಗಳನ್ನ ಮರಗಳು ಬಳಸುತ್ತಿದ್ವಾ? ಅಂತ ಪ್ರಶ್ನಿಸಿದ್ದಾರೆ. ಸಾವನ್ನಪ್ಪಿದವರ ನಿರ್ದಿಷ್ಟ ಸಂಖ್ಯೆ ಗೊತ್ತಾಗಬೇಕಾದ್ರೆ ಕಾಂಗ್ರೆಸ್​ ಪಾಕಿಸ್ತಾನಕ್ಕೆ ಹೋಗಿ ಲೆಕ್ಕ ಹಾಕಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version