ದಿನದ ಸುದ್ದಿ
ಶಹಾಪುರ : ನಾಳೆ ದಲಿತ ಸೇನೆಯಿಂದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹುಟ್ಟು ಹಬ್ಬ ಆಚರಣೆ
ಸುದ್ದಿದಿನ,ಶಹಾಪುರ : ನಾಳೆ (ಜುಲೈ 5) ದಲಿತ ಸೇನೆ ಸಂಸ್ಥಾಪಕರು ಹಾಗೂ ಭಾರತ ಸರ್ಕಾರದ ಸಚಿವರಾಗಿರುವ,ದಲಿತ ಹೋರಾಟಗಾರ ರಾಮ್ ವಿಲಾಸ್ ಪಾಸ್ವಾನ್ ರವರ 73 ನೇ ವರ್ಷದ ಹುಟ್ಟು ಹಬ್ಬವನ್ನು ದಲಿತ ಸೇನೆ ಶಹಾಪುರ ತಾಲೂಕು ವತಿಯಿಂದ ನಡೆಸಲಾಗುವುದೆಂದು ತಾಲೂಕು ಪ್ರಧಾನ ಕಾರ್ಯದರ್ಶಿ ಶಿವು ಆಂದೋಲಾ ತಿಳಿಸಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಗೂ ಮಲ್ಲಿಕಾರ್ಜುನ ಅನಾಥ ಆಶ್ರಮ ದ ಮಕ್ಕಳಿಗೆ ಹಣ್ಣು ಮತ್ತು ಹಾಲು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243