ದಿನದ ಸುದ್ದಿ

ರಂಗ ಕುಸುಮ ಪ್ರಕಾಶನ ಮತ್ತು ಕಲಾಕೇಂದ್ರದ 18 ನೇ ವರ್ಷಾಚರಣೆ | ಪುಸ್ತಕ ಲೋಕಾರ್ಪಣೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

Published

on

ಸುದ್ದಿದಿನ,ರಾಣೆಬೆನ್ನೂರು : ರಾಣೆಬೇನ್ನೂರಿನ ರಂಗ ಕುಸುಮ ಪ್ರಕಾಶನ ಮತ್ತು ಕಲಾಕೇಂದ್ರದ (ರಿ)18 ನೇ ವರ್ಷಾಚರಣೆ ನಿಮಿತ್ತ 16 ಅಕ್ಟೋಬರ್ 2022ರ ಭಾನುವಾರದಂದು ‘ಸಾಹಿತ್ಯ ಸಂಗಮ – ರಂಗ ಸಂಭ್ರಮ’ ಶೀರ್ಷಿಕೆಯಡಿ ರಾಣೆಬೇನ್ನೂರಿನ ವಾಗೀಶ ನಗರದಲ್ಲಿರುವ ಕಸಾಪ ಭವನದಲ್ಲಿ ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ,ಕಿರು ನಾಟಕ ಸ್ಪರ್ಧೆಯಲ್ಲಿ ವಿಜೇತರುಗೆ ಬಹುಮಾನ ವಿತರರಣೆ ಮತ್ತು ಕವಿಗೋಷ್ಠಿ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ರಂಗ ಕರ್ಮಿ ಶಿಕ್ಷಕ ವೆಂಕಟೇಶ ಈಡಿಗರ ಹೇಳಿದ್ದಾರೆ.

‘ಸಾಹಿತ್ಯ ಸಂಗಮ – ರಂಗ ಸಂಭ್ರಮ’ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿರುವ ‘ಶಿವಲೀಲಾಮೃತ’ ಮತ್ತು ‘ಸಂಕ್ರಾಂತಿ ಸಂಪ್ರೀತಿ’ ಕೃತಿಗಳನ್ನು ಶಿವಾನಂದ ಸೊಂಡುರು ಹಾಗೂ ದೇವರಾಜ ಹುಣಸಿಕಟ್ಟೆಯವರು ಪರಿಚಯ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಪ್ರಾಧ್ಯಾಪಕರಾದ ಡಾ. ಶಿವಕುಮಾರ ಎಂ.ಇ.ವಹಿಸಲಿದ್ದು; ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕೆ.ರವೀಂದ್ರನಾಥ ಇವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗಿರುವ ಸಮಾರಂಭದಲ್ಲಿ ಕಾರ್ಯಕ್ರಮ ಸಂಘಟಕ ವೆಂಕಟೇಶ ಈಡಿಗರ ಪ್ರಾಸ್ತಾವಿಕ ಮಾತುಗಳಿಗೆ ಧ್ವನಿಯಾಗಲಿದ್ದಾರೆ.’ಕನ್ನಡ ರಂಗಭೂಮಿ ಅಂದು -ಇಂದು’ ವಿಷಯದ ಕುರಿತು ಉಡುಪಿಯ ಗಣೇಶರಾವ್ ಎಲ್ಲೂರು ಉಪನ್ಯಾಸ ನಿಡಲಿದ್ದು; ‘ಕನ್ನಡ ಸಾಹಿತ್ಯದ ಮಹತ್ವ’ ವಿಷದ ಬಗ್ಗೆ ವೆಂಕಟೇಶ ಕುಲಕರ್ಣಿ ಉಪನ್ಯಾಸ ನೀಡುವರು.

ಮೈಸೂರಿನ ರಂಗಕರ್ಮಿ ನಾಗಚಂದ್ರ, ಬೆಂಗಳೂರಿನ ರಾಮಕೃಷ್ಣ ಬೆಳತೂಕ,ಗದಗಿನ ದತ್ತ ಪ್ರಸನ್ನ ಪಾಟೀಲ,ಬಸವ ಟಿ. ವಿ ಮುಖ್ಯ ಕಾರ್ಯನಿರ್ವಾಹಕ ಮಹೇಶ ಬೆಂಗಳೂರು ಇವರು ‘ಕರ್ನಾಟಕ ಕಲಾನಿಧಿ’ ಪ್ರಶಸ್ತಿಗೆ ಭಾಜನರಾದರೆ ಮಂಜುನಾಥ ಮಣಿಕಂಠ, ರಾಘವೇಂದ್ರ ಹಳಿ ಪೇಟ, ಸುಖದೇವ ಕಾಂಬ್ಳೆ, ಶ್ರೀಶೈಲ ಗುತ್ತೇದಾರ ಹಾಗೂ ಸುರೇಶ ಮಲ್ಲಾಡದ ಇವರು ‘ರಂಗ ಕುಸುಮ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದು; ಸುನಿತ ಪ್ರಕಾಶ, ಪಾರ್ವತಿಬಾಯಿ ಕಾಶಿಕರ, ಮಹೇಶ ಕೆರೂರ, ಹಾಲ್ಯಾ ನಾಯ್ಕ, ಚನ್ನಬಸಪ್ಪ ಮಲ್ಲೂರ, ವೈಚಾರಿಕ ಸಾಹಿತಿ ಸುಭಾಷ್ ಹೇಮಣ್ಣಾ ಚವ್ಹಾಣ ಈ ಮಹನೀಯರಿಗೆ ‘ರಂಗಕಾವ್ಯ ಸಾಹಿತ್ಯ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಿರುನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ ಇದೇ ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡಲಾಗುವುದು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಸರು ನೊಂದಾಯಿಸಿಕೊಂಡಿರುವ ಸುಮಾರು ೪೫ ಕವಿ ಕವಯತ್ರಿಯವರು ಸ್ಪರ್ಧಾ ಸ್ವರೂಪದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಜಯಕಾಂತ ಪಾಟೀಲರು ವಹಿಸಿದ್ದು; ಮಖ್ಯ ಅತಿಥಿಗಳಾಗಿ ಉಮಾದೇವಿ ಐರಣಿಯವರು ಆಗಮಿಸುವರು.

ಕವಿ ಚಂದ್ರಪ್ಪ ಬಾರಂಗಿ, ಆನಂದ ಹಕ್ಕೆನ್ನವರ ನಿರೂಪಿಸಲಿದ್ದು; ಶಕುಂತಲಾ ಅರ್ಕಾಚಾರಿ ಪ್ರಾರ್ಥಿಸಿದರೆ, ದಾವಲ ಮಲಿಕ ಸ್ವಾಗತಿಸುವರು. ಕವಯತ್ರಿ ದ್ರಾಕ್ಷಾಯಣಿ ಉದಗಟ್ಟಿ, ಲಕ್ಷ್ಮಿ ಅಡಕೆ,ಚನ್ನಬಸಪ್ಪ ನಾಡರ, ಪುಷ್ಷಾ ಮಂಜುನಾಥ ನಿರ್ವಹಿಸುವರು. ಬಸಮ್ಮ ಏಗಿನಗೌಡ್ರ,ಕಾವ್ಯಶ್ರೀ ಅಂಗಡಿ ವಂದಿಸುವರು.ಸಾಹಿತ್ಯ ಮತ್ತು ರಂಗಭೂಮಿ ಆಸಕ್ತ ಸಹೃದಯ ಶೋತೃ ಬಂಧು-ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version