ದಿನದ ಸುದ್ದಿ
ಸಾಮೂಹಿಕ ಅತ್ಯಚಾರಕ್ಕೆ ‘ದಲಿತ ಬಾಲಕಿ’ ಬಲಿ
ಬಾಬಸಾಹೇಬ ಅಂಬೇಡ್ಕರವರೆ ನೀವು ಬರೆದ ಸಂವಿಧಾನ ಯಥಾವತ್ತಾಗಿ ಜಾರಿಯಾಗಿದ್ದರೆ ಸಂವಿಧಾನ ಜಾರಿಯಾದ ಸಂವಿಧಾನ ದಿನಾಚರಣೆ (ಗಣರಾಜ್ಯೋತ್ಸವ) ಈ ದಿನದಂದು(24-01-2019 )ನನ್ನ ತಂಗಿ ಸಂಜನಾ ನಾಲ್ಕನೆ ಕ್ಲಾಸ್ ಹುಡುಗಿಗೆ ಸಾಮೂಹಿಕವಾಗಿ ಅತ್ಯಾಚಾರವಾಗಿ ಸಾಯುತ್ತಿರಲಿಲ್ಲವೇನೊ…? ಹೌದು ಸಂವಿಧಾನ ಜಾರಿಯಾಗಿ 60-70 ವರ್ಷ ವಾಯ್ತು ಎಂದು ಹೆಮ್ಮೆಯಿಂದ ಬೀಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ತಾಲ್ಲೂಕಿನ ಲಿಂಗದಹಳ್ಳಿ ಸಾ;;ಹೊವಿನಹಿಪ್ಪರಗಿ ಗ್ರಾಮದಲ್ಲಿ ದಲಿತ ಜಾತಿಗೆ ಸೇರಿದ ಆ ಕುಟುಂಬದವರಿಗೆ ಒಬ್ಬ ಮಗಳಿದ್ದಾಳೆ ಆಕೆಯ ಹೆಸರು ಕು.ಸಂಜನಾ ಅಂತ.ಆಕೆ ನಾಲ್ಕನೆ ತರಗತಿ ಓದುತ್ತಿದ್ದು ಇಡೀ ಶಾಲೆಗೆ ಓದುವುದರಲ್ಲಿ ನಂಬರ್ ಒನ್ ಆಗಿದ್ದಳು ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಅವಳನ್ನು ಯಾರು ಮೀರಿಸುತ್ತಿರಲಿಲ್ಲ.
ಅಂದು 24/01/2019 ರಂದು ಅವಳ ಬಾಳಲ್ಲ ನಡೆಯಬಾರದ ದುರಂತವೊದು ನಡೆಯಿತು. ಮನೆಯವರು ಕೂಲಿ ಮಾಡಲಿಕ್ಕೆ ಹೋದಾಗ ಆ ಬಾಲಕಿ ಒಬ್ಬಳೆ ಮನೆಯಲ್ಲುದ್ದು ಓದುತ್ತಿದ್ದಳು (ಪಾಪ ಆ ಮುಗ್ದ ಮಗು ಅದೆಷ್ಟು ಕನಸ್ಸಿಟ್ಟುಕೊಂಡಿತ್ತು ಯಾರು ಬಲ್ಲರು)ಆದರೆ ಈ ದೇಶದ ಜಾತಿ ಮನಸ್ಥಿತಿಯ ಮನುವಾದಿ ಸಂಸ್ಕೃತಿ ಯ ದಲಿತ (ಎಳೆ ಬಾಲಕಿ) ತುಂಬಾ ಕ್ರೌರ್ಯದಿಂದ ಚಿತ್ರಹಿಂಸೆಯಿಂದ ಸಾಮೂಹಿಕ ಅತ್ಯಚಾರ ಮಾಡಿರುವುದು ಭಾರತ ತಲೆತಗ್ಗಿಸುತಾಗಿದೆ.ಆಕೆಯ ಅತ್ಯಾಚಾರದ ವಿಷಯ ತಡವಾಗಿ ಬೆಳಕಿಗೆ ಬಂದರು ಪೋಲಿಸರಿಗೆ ದೂರು ಕೊಟ್ಟರು ಪೋಲಿಸರು ತಲೆ ಕೆಡಿಸಿಕೊಳ್ಳದೆ ಇರುವುದು ಅನುಮಾನವನ್ನು ಉಂಟು ಮಾಡುತ್ತದೆ.
ಯಾವೊದೊ ಸಣ್ಣಸಣ್ಣ ವಿಷಯವನ್ನು ದೊಡ್ಡದಾಗಿ ಬಿತ್ತರಿಸುವ ಮಾಧ್ಯಮಗಳು ಕಣ್ಮುಚ್ಚಿ ಕುಳಿತಿವೆ.. ಜಾತಿವಾದ ಹಾಗು ಗಂಡುಮಕ್ಕಳಿಲ್ಲದ ಆ ದೇವದಾಸಿ ಅನಿಷ್ಟ ಪದ್ದತಿಗೆ ಬಾಲಕಿ ಬಲಿಯಾಗಿದ್ದಾಳೆ. ಮಗಳು ಕ್ರೌರ್ಯಕಾಮದ ಅತ್ಯಾಚಾರದ ಕೂಪದಿಂದ ಸತ್ತಿದ್ದಾಳೆ. ಅದೇನೆ ಇರಲಿ ಸಂಜನಳ ಸಾವಿಗೆ ನ್ಯಾಯ ಸಿಗಬೇಕು.ಆದಷ್ಷು ಬೇಗ ಆಕ್ರೋರಿಗಳಿಗೆಗಲ್ಲುಶಿಕ್ಷೆಯಾಗಬೇಕು.ಇಲ್ಲವಾದರೆ ಸಂವಿಧಾನ ಸಮರ್ಪಣಾ ದಿನೋತ್ಸವಕ್ಕೆ ಯಾವುದೆ ಅರ್ಥ ಬರುವುದಿಲ್ಲ.ಬೇಟಿಬಚಾವೋ..ಬೇಟಿ ಬಡಾವೋಗಳಂತ ಸರ್ಕಾರದ ಯೋಜನೆಗಳು ಕೇವಲ ಶೋಕಿಸಿನ ಗೊಂಬೆಯಾಗುತ್ತವೆ.
– ಹುಚ್ಚಂಗಿ ಪ್ರಸಾದ್ ಸಂತೆಬೆನ್ನೂರು
ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401