ದಿನದ ಸುದ್ದಿ
ಕುಡಚಿ ಶಾಸಕ ಪಿ. ರಾಜೀವ್ ಅವರಿಗೆ ಮಂತ್ರಿಸ್ಥಾನ ನೀಡದಿದ್ದರೆ ಉಗ್ರ ಹೋರಾಟ : ಬಂಜಾರ ಸಮುದಾಯ ರಾಜ್ಯಾಧ್ಯಕ್ಷೆ ಸವಿತಾ ಬಾಯಿ ಮಲ್ಲೇಶ ನಾಯ್ಕ ಎಚ್ಚರಿಕೆ
ಸುದ್ದಿದಿನ, ಚಿತ್ರದುರ್ಗ : ಕುಡಚಿ ಶಾಸಕರಾದ ಪಿ. ರಾಜೀವ್ ಇವರಿಗೆ ಮಂತ್ರಿಸ್ಥಾನವನ್ನು ಕೊಡಲೇಬೇಕು. ಇಲ್ಲವಾದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ನಮ್ಮಬಂಜಾರ ಸಮುದಾಯದಿಂದ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ರಾಜ್ಯ ಬಂಜಾರ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸವಿತಾ ಬಾಯಿ, ಮಲ್ಲೇಶನಾಯ್ಕ (ಮಹಿಳಾ ಘಟಕ), ಅವರು ಎಚ್ಚರಿಕೆ ನೀಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಭಾಜಪ ಸರ್ಕಾರದವರು ನಿರ್ಲಕ್ಷಿಸಿ ತಮ್ಮ ಪುರಾತನ ಕಾಲದ ಜಾತಿಯತೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರವು ಮೇಲ್ದಾತಿಯ ಜನರಿಗೆ ತಮಗೆ ಬೇಕಾದ ಎಲ್ಲಾ ಖಾತೆಗಳನ್ನು ಕೊಟ್ಟು ನಮ್ಮ 3300 ತಾಂಡಗಳಲ್ಲಿ ಬಂಜಾರ ಜನಾಂಗದವರಿಗೆ ಕೇವಲ ಒಂದೇ ಒಂದು ಖಾತೆಯನ್ನು ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ 30 ರಿಂದ 35 ಲಕ್ಷ ಜನಗತಿಯಿದ್ದು ನಮ್ಮ ಜಾತಿಯ ಕೇವಲ ಒಬ್ಬರಿಗೆ ಮಾತ್ರ ತೂರಿಕೆಯ ರೀತಿಯಲ್ಲಿ ಮಂತ್ರಿ ಪದವಿಕೊಟ್ಟು ಉಳಿದಂತಹ ಕೇವಲ 3 ರಿಂದ 4 ಲಕ್ಷ ಜನಗತಿಯ ಮೇಲ್ದಾತಿಯವರಿಗೆ ಎರಡು ಮಂತ್ರಿ ಸ್ಥಾನವನ್ನು ಕೊಟ್ಟು ತಾರತಮ್ಯ ಮತ್ತು ಜಾತೀಯತೆಯನ್ನು ತೋರಿಸಿದ್ದಾರೆ ಎಂದರು.
ನಮ್ಮ ಹಿಂದುಳಿದ ಜನರಿಗೆ ಇನ್ನೊಂದು ಮಂತ್ರಿಸ್ಥಾನ ಕೊಟ್ಟು ತಮ್ಮ ಜಾತೀಯತೆ ಸಂಸ್ಕೃತಿಗೆ ಪರದೆ ಎಳೆಯಬೇಕು ಹಾಗೂ ನಮ್ಮ ಸಮಾಜಕ್ಕೆ ಸರಿಸಮನಾದ ಹಕ್ಕುಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ಸರ್ಕಾರ ನಮ್ಮ ತಾಂಡ, ಅಭಿವೃದ್ಧಿ ನಿಗಮಕ್ಕೆ 250 ರಿಂದ 500 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಿದ್ದರು. ಆದರೆ ಇಂದಿನ ಮೇಲ್ವಾತಿ ವರ್ಷದ ಬಿಜೆಪಿ ಸರ್ಕಾರ ಕೇವಲ 25 ಕೋಟಿ ಅನುದಾನ ನೀಡುತ್ತೇವೆಂದು ಹೇಳಿ ಇದುವರೆಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿರುರುವುದಿಲ್ಲ. ಹಾಗೂ ಅವರು ಬಿಡುಗಡೆ ಮಾಡುತ್ತೇವೆ ಎಂದು ಅನುದಾನವು ನಮ್ಮ ಕಛೇರಿಯ ಖರ್ಚು ವೆಚ್ಚಗಳಿಗೆ ಸಾಲುವುದಿಲ್ಲ. ಇನ್ನೂ ತಾಂಡ ಅಭಿವೃದ್ಧಿ ಕಷ್ಟ ಸಾಧ್ಯ ಹಾಗೂ ಇದು ಒಂದು ಕನಸೋ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243