ದಿನದ ಸುದ್ದಿ
ದಾವಣಗೆರೆ : ಲೀಡ್ನಿಂದ 07 ದಿನಗಳ ನಾಯಕತ್ವ ಶಿಬಿರ ಆಯೋಜನೆ
ಸುದ್ದಿದಿನ, ದಾವಣಗೆರೆ: ನಗರದ ದೇಶಪಾಂಡೆ ಫೌಂಡೇಶನ್ನ ಲೀರ್ಸ ಎಕ್ಸಲ್ರೇಟಿಂಗ ಡೆವಲೆಪಮೆಂಟ ಪ್ರೋಗ್ರಾಮ್ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮನೋಭಾವನೆಯನ್ನು ಮೂಡಿಸಲು ಲೀಡ್ ಲೀಡರ್ಶಿಪ್ ಶಿಬಿರ-2020 ರ ವಿಶೇಷ ನಾಯಕತ್ವ ಶಿಬಿರವನ್ನು ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಏಳು ದಿನಗಳ ವಿಶೇಷ ನಾಯಕತ್ವ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ನಾಯಕತ್ವ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಅಭಿವೃದ್ದಿ, ತಂಡದ ನಿರ್ವಹಣೆ, ಗುಂಪು ಚರ್ಚೆ, ಸಾರ್ವಜನಿಕ ಭಾಷಣ, ಪೇಂಟಿಂಗ್, ಕರಕುಶಲ ಮತ್ತು ಕ್ರಿಯಾತ್ಮಕ ಚಟುವಟಿಕೆ, ಸಮಯ ನಿರ್ವಹಣೆ, ಹಾಗೂ ವ್ಯಕ್ತಿತ್ವ ವಿಕಸನ ಕುರಿತ ವಿಷಯಗಳ ಮೇಲೆ ತರಬೇತಿ ನೀಡಲಾಗುದು.
ಆಸಕ್ತ ಕರ್ನಾಟಕದ ಪಿಯುಸಿ, ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲುhttps://www.leadcampus.org/llp/ ಲಿಂಕ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆ- 9900035216, 9686654748 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243