ದಿನದ ಸುದ್ದಿ

ರಾಜ್ಯದ ಜಿಎಸ್ ಟಿ ತೆರಿಗೆ ಪಾಲು ನಮ್ಮ ರಾಜ್ಯದ ಹಕ್ಕು, ಕೇಂದ್ರ ಸರ್ಕಾರ ಕೊಡುವ ಭಿಕ್ಷೆ ಅಲ್ಲ : ಶಶಿಧರ್ ಪಾಟೀಲ್

Published

on

ಸುದ್ದಿದಿನ,ದಾವಣಗೆರೆ : ನಮ್ಮ ಪಾಲಿನ ಹಣವನ್ನ ನಾವು ಕೇಳಿದರೆ ರಿಸರ್ವ್ ಬ್ಯಾಂಕ್ ಬಳಿ ಸಾಲ ಕೇಳಿ ಅಂತಿದೆ ನರೇಂದ್ರ ಮೋದಿ ಸರ್ಕಾರ.ಈ ರೀತಿಯ ವರ್ತನೆ ಬಿಟ್ಟು ಕೇಂದ್ರ ಸರ್ಕಾರ ಈ ಕೂಡಲೇ ರಾಜ್ಯದ ಜಿಎಸ್ ಟಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಬೇಕು ಎಂದು ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಪಾಟೀಲ್ ಆಗ್ರಹಿಸಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾದ 25 ಬಿಜೆಪಿ ಸಂಸದರೇ ಈಗ ಎಲ್ಲಿದ್ದೀರಿ? ಅಂಜುಬುರುಕತನ ಬಿಟ್ಟು ಕನಿಷ್ಠ ಪ್ರಧಾನಿ ಬಳಿ ಮಾತನಾಡಿ ನಮ್ಮ ಪಾಲಿನ ತೆರಿಗೆ ಹಣ ಕೊಡಿಸಿ ನ್ಯಾಯ ಒದಗಿಸಿ. ರಾಜ್ಯದಿಂದ ತೆರಿಗೆ ಬೇಕು ಅದರೆ ರಾಜ್ಯದ ತೆರಿಗೆಯನ್ನು ಬಿಡುಗಡೆಗೋಳಿಸುವಾಗ ಯಾಕೆ ತಾರತಮ್ಯ ಮಾಡುತ್ತೀರಾ ? ರಾಜ್ಯದ ಸಂಸದರು ಈ ಬಗ್ಗೆ ಕೇಂದ್ರದ ಬಳಿ ಧ್ವನಿ ಎತ್ತದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version