ದಿನದ ಸುದ್ದಿ
ಶಿವಮೊಗ್ಗ : ‘ಭಾವ ಸಂಗಮ’ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾಗಮ
ಸುದ್ದಿದಿನ,ಶಿವಮೊಗ್ಗ : ಇಲ್ಲಿನ ಬಿ.ಎಚ್.ರಸ್ತೆಯಲ್ಲಿರುವ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಗಸ್ಟ್ 18 ರಂದು ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ರಾಜ್ಯಮಟ್ಟದ ಭಾವ ಸಂಗಮ ಸಾಂಸ್ಕೃತಿಕ ಸಮಾಗಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಹರೀಶ್ ಬೇದ್ರೆ , ಶೀಲಾ ಸುರೇಶ್ ಮತ್ತು ವಿಜಯಾ ಆರ್ ಬಾಯರಿ ತಿಳಿಸಿದ್ದಾರೆ.
ಭಾವ ಸಂಗಮ ಸಮಾಗಮದಲ್ಲಿ ಕವಿಗೋಷ್ಠಿ, ಹಾಸ್ಯರಸಗವಳ, ಕವನ ರಚನಾ ಸ್ಪರ್ಧೆ,ಸಾಧಕರಿಗೆ ಸನ್ಮಾನ, ವ್ಯಂಗ್ಯಚಿತ್ರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಸಮಾಗಮ ಮತ್ತು ಕವಿಗೋಷ್ಠಿಯಲ್ಲಿ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಯಸುವವರು ಇದೇ ಜೂನ್ 30 ರೊಳಗೆ ತಮ್ಮ ಹೆಸರು ಮತ್ತಿತರ ಮಾಹಿತಿಯೊಂದಿಗೆ ವಾಟ್ಸಾಪ್ ನಂಬರ್ 9591323453 ಗೆ ಮೆಸೇಜ್ ಕಳುಹಿಸಿ ಹೆಸರು ನೋಂದಾಯಿಸಲು ಕೋರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243