ರಾಜಕೀಯ
ಶಿವಸೇನೆ ಬಂಡಾಯ ಶಾಸಕರನ್ನ ಭೇಟಿ ಮಾಡಿದ ಆಸ್ಸಾಂ ನ ಬಿಜೆಪಿ ಸಚಿವ
ಸುದ್ದಿದಿನ,ಗುವಾಹಟಿ: ಮಹಾರಾಷ್ಟ್ರದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಗುವಾಹಟಿಯಲ್ಲಿರುವ ಶಿವಸೇನೆ ಪಕ್ಷದ ಏಕನಾಥ್ ಶಿಂಧೆ ಬಣದ 36 ಶಾಸಕರಿರುವ ಹೋಟೆಲ್’ಗೆ ಅಸ್ಸಾಂ ಬಿಜೆಪಿ ಸಚಿವರು ಭೇಟಿ ನೀಡಿದ್ದಾರೆ.
ಮಹಾರಾಷ್ಟ್ರದ ಬಂಡಾಯ ಶಾಸಕರೊಂದಿಗೆ ಅಸ್ಸಾಂನ ಬಿಜೆಪಿ ಸಚಿವರು ಸರಣಿ ಸಭೆಗಳನ್ನು ನಡೆಸಿದ್ದು, ಎರಡು ದಿನಗಳ ಅವಧಿಯಲ್ಲಿ ಅಸ್ಸಾಂ’ನ ವಸತಿ-ನಗರ ವ್ಯವಹಾರಗಳ ಸಚಿವ ಸಿಂಘಾಲ್ ಮೂರನೇ ಬಾರಿಗೆ ಶಾಸಕರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243