ರಾಜಕೀಯ
ರಾಹು- ಕೇತು -ಶನಿ ಒಂದಾಗಿ ನನ್ನ ಸೋಲಾಯ್ತು : ಸಿದ್ದು ಸಿಡಿಮಿಡಿ
ಸುದ್ದಿದಿನ, ಮೈಸೂರು : ಚುನಾವಣೆ ಕಳೆದು ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ್ರು ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನ ಅರಗಿಸಿಕೊಳ್ಳಲಾಗದ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯಪುತ್ರ ಶಾಸಕರಾಗಿರುವ ವರುಣಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ವಿವರಿಸಿದರು.
ರಾಜ್ಯದಲ್ಲಿ ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೆ, ಆದ್ರೆ ಎಲ್ಲರು ಒಂದಾಗಿ ನನ್ನನ್ನ ಸೋಲಿಸಿದ್ರು, ಹೊಟ್ಟೆಕಿಚ್ಚಿಗೆ ಎಲ್ಲಾದ್ರು ಔಷದಿ ಇದ್ಯಾ? ಅಂತಾ ಪ್ರಶ್ನೆ ಮಾಡಿದರು ಮಾಜಿ ಸಿ ಎಂ ಸಿದ್ದರಾಮಯ್ಯ. ನಂತರ ಮಾತನಾಡಿದ ಅವರುಬಬಿಜೆಪಿ ,ಜೆಡಿಎಸ್ ಹಾಗೂ ಕೆಲ ಸ್ವಪಕ್ಷದ ಮುಖಂಡರೆ ನನ್ನ ಸೋಲಿಗೆ ಕಾರಣ ಆದ್ರು ಅಂತ ಸಿಡಿಮಿಡಿಗೊಂಡರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401