ರಾಜಕೀಯ
ಸಗಣಿ ಎತ್ತೋರು ನಿಜವಾದ ರೈತರು ; ತುಪ್ಪ ತಿನ್ನೋರು ಗೋಮಾತೆ ಹೆಸರಲ್ಲಿ ರಾಜಕೀಯ ಮಾಡೋರು : ಸಿದ್ದರಾಮಯ್ಯ ಕಿಡಿ
ಸುದ್ದಿದಿನ,ಬಳ್ಳಾರಿ : ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪಶ್ಚಿಮ ಕಾಲುವೆ ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು,
‘ಗೋಮಾತೆಯ ನಿಜವಾದ ಸೇವಕರು ರೈತರು. ರೈತರು ಸಗಣಿ ಮಾತ್ರ ಎತ್ತುತ್ತಾರೆ, ತುಪ್ಪ ತಿನ್ನುವವರು ಮಾತ್ರ ಗೋಮಾತೆ ಹೆಸರು ಹೇಳಿಕೊಂಡು ರಾಜಕಾರಣ ಮಾಡುವವರು ಎಂದು ಕಿಡಿಕಾರಿದರು.
ಜಾತಿ ವ್ಯವಸ್ಥೆಯ ಬಗ್ಗೆ ಅವಮಾನ ಅನುಭವಿಸಿದ್ದ ಬಸವಣ್ಣ, ಕನಕ, ಅಂಬೇಡ್ಕರ್ ಅವರಂತಹ ಮಹಾಪುರುಷರು ಹೊಸ ಸಮಾಜದ ಕನಸು ಕಂಡಿದ್ದರು. ಶರಣರು, ಮಹಾತ್ಮರು ಬೋಧಿಸಿದ ತತ್ವಗಳ ಅಡಿಯಲ್ಲೇ ನಮ್ಮ ಸಂವಿಧಾನ ರೂಪುಗೊಂಡಿದೆ ಎಂದರು.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪಶ್ಚಿಮ ಕಾಲುವೆ ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. pic.twitter.com/WX6xPlkn7t
— Siddaramaiah (@siddaramaiah) November 22, 2018
‘ಗೋಮಾತೆಯ ನಿಜವಾದ ಸೇವಕರು ರೈತರು. ರೈತರು ಸಗಣಿ ಮಾತ್ರ ಎತ್ತುತ್ತಾರೆ, ತುಪ್ಪ ತಿನ್ನುವವರು ಮಾತ್ರ ಗೋಮಾತೆ ಹೆಸರು ಹೇಳಿಕೊಂಡು ರಾಜಕಾರಣ ಮಾಡುವವರು’ #ಬೀರಲಿಂಗೇಶ್ವರದೇವಸ್ಥಾನಉದ್ಘಾಟನೆ
— Siddaramaiah (@siddaramaiah) November 22, 2018
ಜಾತಿ ವ್ಯವಸ್ಥೆಯ ಬಗ್ಗೆ ಅವಮಾನ ಅನುಭವಿಸಿದ್ದ ಬಸವಣ್ಣ, ಕನಕ, ಅಂಬೇಡ್ಕರ್ ಅವರಂತಹ ಮಹಾಪುರುಷರು ಹೊಸ ಸಮಾಜದ ಕನಸು ಕಂಡಿದ್ದರು. ಶರಣರು, ಮಹಾತ್ಮರು ಬೋಧಿಸಿದ ತತ್ವಗಳ ಅಡಿಯಲ್ಲೇ ನಮ್ಮ ಸಂವಿಧಾನ ರೂಪುಗೊಂಡಿದೆ.#ಬೀರಲಿಂಗೇಶ್ವರದೇವಸ್ಥಾನಉದ್ಘಾಟನೆ
— Siddaramaiah (@siddaramaiah) November 22, 2018
ಸುದ್ದಿದಿನ.ಕಾಂ|ವಾಟ್ಸಾಪ್|9986715401