ದಿನದ ಸುದ್ದಿ

‘ಸೂಟು-ಬೂಟಿನ ಸರದಾರ’ನಂತೆ ಯೂರೋಪ್ ಪ್ರವಾಸಕ್ಕೆ ತೆರಳಿದ ಸಿದ್ದು..!

Published

on

ಸುದ್ದಿದಿನ, ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ನಗರದ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಯೂರೋಪ್ ಪ್ರವಾಸಕ್ಕೆ ಹೊರಟರು. ಈ ಸಂದರ್ಭದಲ್ಲಿ ಸಿದ್ದು ಆತ್ಮೀಯರು ಹಾಗೂ ಕಾಂಗ್ರಸ್ ಮುಖಂಡರು ಅವರನ್ನು ಸಂತೋಷದಿಂದ ಬೀಳ್ಕೊಟ್ಟರು.

ಸೂಟು,ಬೂಟು ಧರಿಸಿದ್ದ ಸಿದ್ದರಾಮಯ್ಯರವರನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ಸಿದ್ದು ಅದರ ಮದ್ಯವೇ ನಗೆ ಚಟಾಕಿ ಹಾರಿಸುತ್ತಿದ್ದರು. ಪ್ರವಾಸದಲ್ಲಿ ಸಿದ್ದು ಪುತ್ರ ಯತೀಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಕೂಡ ಅವರ ಜೊತೆಗೂಡಿದರು.

ಕೆಂಪೇಗೌಡ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಎಂಬ್ರೇಷ್ ಫ್ಲೈಟ್ ನಲ್ಲಿ ದುಬೈಮಾರ್ಗವಾಗಿ ರಷ್ಯಾಗೆ ಹೋಗಲಿರುವ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹಾಗೂ ಶಾಸಕ ಬಿ.ಸಿ.ಪಾಟೀಲ್ ಸೇರಿದಂತೆ ಹಲವರು ಶುಭಹಾರೈಸಿ ಬೀಳ್ಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version