ದಿನದ ಸುದ್ದಿ
ದೇಗುಲ ವಿಷ ಪ್ರಸಾದ : ಮಹತ್ವದ ಸುಳಿವು ಲಭ್ಯ, ಸಾವಿನ ಸಂಖ್ಯೆ 14 ಕ್ಕೆ ಏರಿಕೆ ; ಪತಿ,ಪತ್ನಿ ಇಬ್ಬರೂ ಸಾವು
ಸುದ್ದಿದಿನ ಡೆಸ್ಕ್ : ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇಗುಲ ವಿಷ ಪ್ರಸಾದ ವಿಚಾರ ಮಹತ್ವದ ಸುಳಿವು ಲಭ್ಯವಾಗಿದ್ದು ಕಿಂಗ್ ಪಿನ್ ಗಾಗಿ ಶೋದಕಾರ್ಯನಡೆದಿದೆ. ಈ ಘಟನೆಯಲ್ಲಿ ಪ್ರಭಾವಿ ವ್ಯಕ್ತಿ ಕೈವಾಡ ಶಂಕೆ ವ್ಯಕ್ತವಾಗಿದ್ದು, ತಮಿಳುನಾಡು ಮೂಲದ ವ್ಯಕ್ತಿಗಾಗಿ ಶೋದ ಕಾರ್ಯವನ್ನು ಗಡಿಯಂಚಿನ ಗ್ರಾಮಗಳಲ್ಲಿ ರಾಜ್ಯ ಪೊಲೀಸರು ನಡೆಸಿದ್ದಾರೆ.
ಈ ಸಂಜೆವರೆಗೆ ಮತ್ತಷ್ಟು ಜನರ ಬಂಧನ ಸಾಧ್ಯತೆಯಿದ್ದು, ಬಂಧಿತರನ್ನ ನಿರಂತರ ವಿಚಾರಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳು
ತಡ ರಾತ್ರಿ ತಮಿಳುನಾಡಿನ ಧರ್ಮಪುರಿಗೆ ತೆರಳಿರುವ ರಾಜ್ಯ ಪೊಲೀಸರ ಏಳು ತಂಡಗಳಾಗಿ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆಗಿಳಿದಿವೆ.
ವಕಾಲತ್ತು ವಹಿಸದಂತೆ ವಕೀಲರ ಸಭೆ
ಅರೋಪಿಗಳ ಪರ ವಕಾಲತ್ತು ವಹಿಸದಿರುವ ಬಗ್ಗೆ ವಕೀಲರ ಸಭೆ ಇಂದು ಮದ್ಯಾಹ್ನ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು,ಸಂತಾಪ ಸೂಚಕ ಸಭೆಯಲ್ಲಿ ನಿರ್ಣಯ ಸಾಧ್ಯತೆ ಇದೆ ಎಂದುಚಾಮರಾಜನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಇಂದೂಶೇಖರ್ ಮಾಹಿತಿ ನೀಡಿದ್ದಾರೆ.
ಸುಳ್ವಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವನೆ ಪ್ರಕರಣ | ಮೂವರ ಸ್ಥಿತಿ ಗಂಭಿರ
ಕೆ.ಆರ್. ಆಸ್ಪತ್ರೆಯಲ್ಲಿರುವ ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ.ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿರುವ ಐವರ ಸ್ಥಿತಿಯೂ ಗಂಭೀರವಾಗಿದ್ದು,80ಕ್ಕೂ ಹೆಚ್ಚು ಅಸ್ವಸ್ಥರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಹಾಗೇ 13 ಮಕ್ಕಳ ಆರೋಗ್ಯದಲ್ಲೂ ಸ್ವಲ್ಪ ಚೇತರಿಕೆ ಕಾಣುತ್ತಿದ್ದು ಐಸಿಯುನಲ್ಲೇ ವೈದ್ಯರು ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.
ಪತ್ನಿಯೂ ಸಾವು
ಮಾರಮ್ಮ ದೇವಿ ವಿಷ ಪ್ರಸಾದ ಪ್ರಕರಣ ಸಾವಿನ ಸಂಖ್ಯೆ ಗೆ ಮತ್ತೊಂದು ಸೇರ್ಪಡೆಯಾಗಿದೆ. ಪತಿಯನ್ನ ಹಿಂಬಾಲಿಸಿದ ಪತ್ನಿ ಮೈಲಿ ಬಾಯಿ (38) ಇಂದು ಬೆಳಗ್ಗೆ 8:45 ಕ್ಕೆ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಮೈಸೂರು ಜೆಎಸ್ ಎಸ್ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಮೈಲಿ ಬಾಯಿಯ ಪತಿ ಶನಿವಾರವೇ ಸಾವನ್ನಪ್ಪಿದ್ದರು. ಈ ದಂಪತಿ ಪುತ್ರಿ ಪ್ರಿಯಾ ಅಸ್ವಸ್ಥಗೊಂಡು ಈಗ ಚೇತರಿಕೆಯಲ್ಲಿದ್ದು, ಸಿಎಂ ಕುಮಾರಸ್ವಾಮಿ ಬೇಟಿ ವೇಳೆ ಸಂಪೂರ್ಣ ವಿದ್ಯಾಬ್ಯಾಸ ಕೊಡಿಸಿ ಸರ್ಕಾರಿ ನೌಕರಿ ಭರವಸೆ ನೀಡಿದ್ದರು. ಕೃಷ್ಣ ನಾಯಕ್ ಮೈಲಿ ಬಾಯಿ ದಂಪತಿಗಳಿಗೆ ಇಬ್ಬರು ಪುತ್ರಿಯರು ಒಬ್ಬ ಪುತ್ರ ಇದ್ದಾರೆ. ಕೃಷ್ಣ ನಾಯಕ್ ಮೈಲಿ ಬಾಯಿ ಹನೂರು ತಾಲೋಕಿನ ಗ್ರಾಮ ಕೋಟೆಪೊದೈನಿವಾಸಿಗಳಾಗಿದ್ದಾರೆ.ಇದರೊಂದಿಗೆ ಪ್ರಕರಣದಲ್ಲಿ ಸತ್ತವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ವಿಷ ಪ್ರಸಾದ ಸೇವಿಸಿದ್ದ ಮಹಿಳೆ ಮೈಲಿ ಬಾಯಿ ಸಾವನ್ನಪ್ಪಿದ ಹಿನ್ನೆಲೆಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಭೇಟಿನೀಡಿ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401