ದಿನದ ಸುದ್ದಿ
ಹಣಕಾಸು ನಿರ್ವಹಣೆ ಪ್ರಗತಿಗೆ ದಾರಿ : ತರಳಬಾಳು ಶ್ರೀ
ಸುದ್ದಿದಿನ,ಸಿರಿಗೆರೆ: ಒಂದು ಸಂಸ್ಥೆಯ ಆಡಳಿತದಲ್ಲಿ ಹಣಕಾಸು ನಿರ್ವಹಣೆ ಪ್ರಮುಖವಾಗಿರುತ್ತದೆ. ಲೆಕ್ಕ ನಿರ್ವಹಣೆ ಸರಿಯಿದ್ದರೆ ಸಂಸ್ಥೆಯ ಹಣಕಾಸು ನಿರ್ವಹಣೆಯೂ ಸುಗಮವಾಗಿರುತ್ತದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾಸಂಸ್ಥೆಗಳ ಲೆಕ್ಕಿಗರು ಲೆಕ್ಕ ನಿರ್ವಹಣೆಯಲ್ಲಿ ತಪ್ಪಾಗದಂತೆ ನೋಡಿಕೊಳ್ಳಬೇಕು. ಆಯವ್ಯಯ ಯೋಜನೆ ಮಂದಗತಿಯಲ್ಲಿ ಸಾಗಿದರೆ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಲೆಕ್ಕ ನಿರ್ವಹಣೆಗೆ ಕಂಪ್ಯೂಟರ್ ಬಳಸಿದರೆ ಶ್ರಮ, ಸಮಯ ಉಳಿಯುತ್ತದೆ ಎಂದರು.
ಸೇವಾವಧಿಯಲ್ಲಿ ಮೃತಪಟ್ಟ 9 ನೌಕರರ ಕುಟುಂಬಗಳಿಗೆ 11,40,625 ರೂ.ಗಳ ಅನುಕಂಪ ನಿಧಿ ವಿತರಿಸಿ ಸಂತಾಪ ಸೂಚಿಸಲಾಗಿದೆ ಎಂದರು.
ಸೇವಾವಧಿಯಲ್ಲಿ ಮೃತಪಟ್ಟ 9 ನೌಕರರ ಕುಟುಂಬಗಳಿಗೆ 11,40,625 ರೂ.ಗಳ ಅನುಕಂಪ ನಿಧಿ ವಿತರಿಸಿ ಸಂತಾಪ ಸೂಚಿಸಲಾಗಿದೆ ಎಂದರು. 23ರಂದು ನಡೆಯುವ ಹಿರಿಯ ವಿದ್ಯಾರ್ಥಿಗಳ ಸಮಾವೇಶಕ್ಕೆ ಐದು ಸಾವಿರ ಮಂದಿ ಭಾಗವಹಿಸಲಿದ್ದಾರೆ. ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಮೂರು ಸ್ಥಳಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸಿದ್ದಯ್ಯ, ಸದಸ್ಯರಾದ ಕೆ.ಆರ್. ಜಯದೇವಪ್ಪ, ಪ್ರೊ. ಎಸ್.ಬಿ. ರಂಗನಾಥ್, ಸಿ. ಸಿದ್ದಪ್ಪ, ಎಸ್.ಎಸ್. ಪಾಟೀಲ್, ಎಸ್.ವಿ. ಬಸವರಾಜು, ಜಿ.ಟಿ. ಬಸವರಾಜು ಇತರರಿದ್ದರು. ಕೆ.ಜಿ. ಶಿವಮೂರ್ತಿ ವರದಿ ವಾಚಿಸಿದರು. ಎಂ.ಎಚ್. ಶಿವಕುಮಾರ್ ಆಯವ್ಯಯ ಪತ್ರ ಅಂಗೀಕಾರ ಪಡೆದರು. ಡಾ.ಟಿ.ಎನ್. ದೇವರಾಜು ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401