ರಾಜಕೀಯ

ಅಸ್ಥಿರತೆ- ಮರುಚುನಾವಣೆ ಬಗ್ಗೆ ಸಿರಿಗೆರೆ ಶ್ರೀಗಳ ಅಸಮಾಧಾನ; ಸರ್ಕಾರ ಉಳಿಸಿಕೊಳ್ಳುವಲ್ಲಿ ರಾಜಕಾರಣಿಗಳು ಮಗ್ನ

Published

on

ಸುದ್ದಿದಿನ ಚಿತ್ರದುರ್ಗ: ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಬೃಹನ್ಮಠದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಶ್ರದ್ಧಾಂಜಲಿ ಸಮಾರಂಭದ ಕೊನೆಯ ದಿನದ ಸಮಾರಂಭದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸರ್ಕಾರ ಸ್ಥಿರತೆ ಕಾಪಾಡುವುದು ಮತ್ತು ಮರು ಚುನಾವಣಾ ಪದ್ಧತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಿಂದಲೂ ಸರ್ಕಾರದ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಮರುಚುನಾವಣೆ ನಡೆಸುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಹಾಗಾಗಿ ಮರುಚುನಾವಣೆ ನಡೆಸುವ ಪದ್ಧತಿ ಕೈಬಿಡಬೇಕೆಂದು ಅಭಿಪ್ರಾಯಪಟ್ಟರು.

Trending

Exit mobile version