ದಿನದ ಸುದ್ದಿ

ಕಚೇರಿ ಕೆಲಸ ನಿರ್ವಹಣೆ ಯಶಸ್ಸಿಗೆ ಸಂಘಟಿತ ಪ್ರಜ್ಞೆ ಅಗತ್ಯ : ಎಸ್.ಕೆ.ಬಿ.ಪ್ರಸಾದ್

Published

on

ಸುದ್ದಿದಿನ,ಚಿತ್ರದುರ್ಗ: ಸಂಘಟಿತ ಪ್ರಜ್ಞೆಯೊಂದಿಗೆ ಸಮಷ್ಟಿಭಾವದಿಂದ ಒಗ್ಗೂಡಿ ಕೆಲಸ ನಿರ್ವಹಿಸಿದಾಗ ಕಚೇರಿ ಕೆಲಸಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಹೇಳಿದರು.

ನಗರದ ಡಯಟ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು(ಅಭಿವೃದ್ಧಿ) ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರಿಗೆ ಆಯೋಜಿಸಿದ್ದ ಕಾರ್ಯಕ್ಷಮತೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ವಿಷಯ ನಿರ್ವಾಹಕರಿಗೆ ಕಡತಗಳ ನಿರ್ವಹಣೆ ಮತ್ತು ವಿಲೇವಾರಿ ಮಾಡುವ ಜ್ಞಾನ ಅಗತ್ಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಕಂಪ್ಯೂಟರ್ ಜ್ಞಾನವು ಅಗತ್ಯವಿದ್ದು ಪತ್ರಗಳನ್ನು ತಯಾರಿಸುವಾಗ ತಪ್ಪಿಲ್ಲದಂತೆ ತಯಾರಿಸಿ ಗೊಂದಲಗಳಿಗೆ ಅವಕಾಶ ನೀಡದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ತರಬೇತಿ ನೀಡಿದ ನಂತರ ಕಾರ್ಯಕ್ಷಮತೆ ಕುರಿತು ಪರೀಕ್ಷೆ ನಡೆಸಲಾಗುವುದು. ಸದರಿ ಪರೀಕ್ಷೆಯಲ್ಲಿ ಶೇ ೫೦ ರಷ್ಟು ಅಂಕಗಳನ್ನು ಪಡೆಯಬೇಕು ಎಂದು ಮಾಹಿತಿ ನೀಡಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಪಿ.ವಿ ಸವಿತಾ ಮಾತನಾಡಿ, ಸಂಘಟನೆ ಎಂದರೆ ಶಕ್ತಿ. ಕಚೇರಿ ಎಂದರೆ ನಮ್ಮ ಮನೆ ಎಂಬ ಭಾವನೆ ಮೂಡಿಸಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ವೃತ್ತಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವುದು ಇಲಾಖೆಯ ಆಶಯವಾಗಿದೆ. ಕಾರ್ಯಕ್ಷಮತೆಯು ಬದ್ಧತೆ ಮತ್ತು ವಿಷಯ ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ದೊರೆಯುತ್ತದೆ. ವಿಷಯ ನಿರ್ವಾಹಕರು ತಮಗೆ ವಹಿಸಿದ ಕೆಲಸವನ್ನು ಮುಖ್ಯಸ್ಥರು ಮತ್ತು ಭಾಗಾಧಿಕಾರಿ(ಅಧೀಕ್ಷಕರು)ಗಳ ಮಾರ್ಗದರ್ಶನದಲ್ಲಿ ನಿರ್ವಹಿಸಬೇಕು. ಕಡತಗಳನ್ನು ನಿರ್ವಹಿಸುವ ನಿಯಮಗಳ ಜ್ಞಾನ ತಿಳಿದು ಪರಿಪೂರ್ಣತೆ, ತ್ವರಿತವಾಗಿ ನಿರಾತಂಕವಾಗಿ ಕೆಲಸ ನಡೆಯುವಂತೆ ಕಾರ್ಯಕ್ಷಮತೆ ಬೆಳೆಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಜಿ.ತ.ಸಂಸ್ಥೆಯ ಉಪ ಪ್ರಾಚಾರ್ಯ ಪಿ. ಚಂದ್ರಕಾAತ್, ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ಅಧಿಕಾರಿಗಳಾದ ಪ್ರಸಾದ್ ಬಾಬು, ಪ್ರಥಮ ದರ್ಜೆ ಸಹಾಯಕ ರಾಜಣ್ಣ, ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕರಾದ ಸಾಯಿಪ್ರಸಾದ್, ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ತರಬೇತಿಗೆ ಹಾಜರಾಗಿದ್ದ ಜಿಲ್ಲೆಯ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version