ದಿನದ ಸುದ್ದಿ
ಹೃದಯಾಘಾತದಿಂದ ಯೋಧ ಸಾವು
ಸುದ್ದಿದಿನ ಡೆಸ್ಕ್ : ದೆಹಲಿಯ ಎಂಇಜಿ ಕೌಲ ಇಂಜಿನಿಯರಿಂಗ್ ರೆಜಿಮೆಂಟ್ ಆರ್ಮಿ ಫೋರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿನಾಯಕ ರುದ್ರಪ್ಪ ನಾಯ್ಕರ (36) ಎಂಬ ಯೋಧ ಹೃದಯಾಘಾತದಿಂದ ಭಾನುವಾರ (ಜುಲೈ 8) ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.
ಬೈಹೊಂಗಲ ತಾಲೂಕಿನ ಮರಕೀಂಬಾವಿ ಗ್ರಾಮದ ನಿವಾಸಿಯಾದ ಇವರು ದೆಹಲಿಯ ಮಿಲಿಟರಿಯಲ್ಲಿ ಲಾಂಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಯೋಧನ ಪಾರ್ಥೀವ ಶರೀರವನ್ನು ಮಂಗಳವಾರ (ಜುಲೈ 10) ಅವರ ಸ್ವಗ್ರಾಮಕ್ಕೆ ತರಲಿದ್ದು ಸಕಲ ಸರ್ಕಾರಿ ಗೌರವದೊಂದಿದೆ ಅಂತ್ಯಕ್ರಿಯೆ ನಡೆಸಲಾಗುವುದು.
ಮೃತ ಯೋಧರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್| 9986715401