ರಾಜಕೀಯ

ಶ್ರೀರಂಗಪಟ್ಟಣ : ಶಾಸಕ ರವೀಂದ್ರ ಶ್ರೀಕಂಠಯ್ಯರನ್ನು ಭೇಟಿಯಾದ ‘ನಿಖಿಲ್ ಕುಮಾರಸ್ವಾಮಿ’..!

Published

on

ಸುದ್ದಿದಿನ, ಮಂಡ್ಯ : ರಾಜಕೀಯ ಕ್ಷೇತ್ರದಲ್ಲಿ ಕಾಲಿಡುತ್ತಿರುವ ನನಗೆ ಎಲ್ಲ ಹಿರಿಯರ ಮತ್ತು ನಾಯಕರ ಮಾರ್ಗದರ್ಶನ ಮತ್ತು ಕಿವಿಮಾತು ದಾರಿದೀಪವಾಗಿದೆ. ಇಂದು ಬೆಳಿಗ್ಗೆ 8 ಘಂಟೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ನಿವಾಸಕ್ಕೆ ತೆರಳಿ, ಅವರನ್ನು ಭೇಟಿ ಮಾಡಿ ಅವರ ಮಾರ್ಗದರ್ಶನಕ್ಕಾಗಿ ಬೇಡಿದೆ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನಿಖಿಲ್ ಅವರ ಜೊತೆ ತಮ್ಮ ತಾಯಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಹಾಗು ಮಾಜಿ ಶಾಸಕರಾದ ಶ್ರೀಮತಿ ಪಾರ್ವತಮ್ಮ ಶೀಕಂಠಯ್ಯ, ಜೆಡಿಎಸ್ ಅಧ್ಯಕ್ಷರಾದ ಡಿ ರಮೇಶ್ ಮೊದಲಾದ ಮುಖಂಡರು, ಹಿರಿಯರು ಜೊತೆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version