ರಾಜಕೀಯ
ಬಿಗ್ ಬ್ರೇಕಿಂಗ್: ನವಜೋತ್ ಸಿಂಗ್ ಸಿದ್ದು ತಲೆ ಸರಿಯಿಲ್ಲ ಎಂದು ಟೀಕಿಸಿದ ಸುಬ್ರಮಣಿಯನ್ ಸ್ವಾಮಿ !
ಸುದ್ದಿದಿನ ಡೆಸ್ಕ್: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದುಗೆ ತೆಲೆ ಸರಿಯಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಪಾಕ್ ಗೆ ತೆರಳುತ್ತಿರುವ ಹಿನ್ನೆಲೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ದೂರಿದ್ದಾರೆ.
ಸಿದ್ದುಗೆ ತಲೆ ಸರಿ ಇಲ್ಲ, ಒಂದು ವೇಳೆ ಅವರ ತಲೆ ಇದ್ದರೆ ಅವರು ಪಾಕ್ ಗೆ ಹೋಗುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ಇದು ದೇಶದ್ರೋಹವಿದ್ದಂತೆ, ಜನರು ಕ್ಷಮಿಸುವುದಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.