ಸಿನಿ ಸುದ್ದಿ
ದಾವಣಗೆರೆ : ವಾಲ್ಮೀಕಿ ಸ್ವಾಮೀಜಿ ಆಶೀರ್ವಾದ ಪಡೆದ ಕಿಚ್ಚ
ಸುದ್ದಿದಿನ ಡೆಸ್ಕ್ : ದಾವಣಗೆರೆ ನಗರಕ್ಕೆ ಇಂದು ಖ್ಯಾತ ಕನ್ನಡ ಚಿತ್ರರಂಗದ ಆಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬೆಂಗಳೂರಿನ ಎಚ್.ಎ.ಎಲ್ ಎಲಿಪ್ಯಾಡ್ ನಿಂದ ಎಲಿ ಕ್ಯಾಪ್ಟರನಲ್ಲಿ ದಾವಣಗೆರೆ ನಗರದ ಎಂಬಿಎಕಾಲೇಜ್ ನಲ್ಲಿ ನಿಲ್ದಾಣದಲ್ಲಿ ಬಂದು ಇಳಿದರು.
ನಂತರ ಹರಿಹರ ತಾಲ್ಲೂಕಿನ ಶ್ರೀ ಶ್ರೀ ವಾಲ್ಮೀಕಿ ಗುರುಪಿಠ ರಾಜನಹಳ್ಳಿ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾಂದ ಮಹಾಸ್ವಾಮಿಜೀಯವರ ಆರ್ಶಿವಾದ ಪಡೆದು ಕನ್ನಡ ಚಿತ್ರರಂಗದ ಹಾಗೂ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾಂದ ಮಹಾಸ್ವಾಮಿಜೀಯವರ ಜೋತೆ ಕೆಲವು ವಿಚಾರಗಳನ್ನು ಚರ್ಚಿಸಿದರು.
ನಂತರ ನಗರದ ಬಾಯ್ಸ್ ಹಾಸ್ಟೆಲ್ ರೋಡ್ ನಲ್ಲಿರಿವ ಕಿಚ್ಚ ಸುದೀಪ್ ದೊನ್ನೆ ಬಿರಿಯಾನಿ ದಾವಣಗೆರೆ ಮಂಜುನಾಥ ಮಾಲಿಕತ್ವದ ಹೊಟೇಲ್ ಉದ್ಘಾಟನೆ ಕಾರ್ಯಕ್ರಮವನ್ನು ನೆರೆವೆರಿಸಿದರು ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರು ಹಾಗೂ ನಂಧಕಿಶೋರ್ ಸರ್. ಆರ್,ಎಸ್, ರಾಕೇಶ್. ಶ್ರೀ ನಿವಾಸ ದಾಸಕರಿಯಪ್ಪ. ರಮೇಶ. ಶಾಮನೂರು ಪ್ರವೀಣ್ ಲಿಂಗರಾಜ್ ಪಣಿಯಾಪುರ ಇತರರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401