ದಿನದ ಸುದ್ದಿ

ರಾಜ್ಯಮಟ್ಟದ ಕವಿಗೋಷ್ಠಿಗೆ ಸ್ವ ರಚಿತ ಕವನಗಳ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ (ರಿ )ದಾವಣಗೆರೆ ಇವರ ವತಿಯಿಂದಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡು ವಿಶ್ವಮಾನವ ಸಂದೇಶ ನೀಡಿದ. ಕನ್ನಡದ ಮೊಟ್ಟ ಮೊದಲ ಜ್ಞಾನ ಪೀಠ ಪ್ರಶಸ್ತಿ ವಿಜೇತರು , ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎರಡನೇ ರಾಷ್ಟ ಕವಿ ಎಂಬ ಖ್ಯಾತಿಯನ್ನು ಮುಕುಟ್ಟಕ್ಕೆರಿಸಿಕೊಂಡ ವೈಚಾರಿಕ ಕವಿಯಾದ ಕುಂವೆಂಪುರವರ 118ನೇ ವಿಶ್ವಮಾನವ ಜನ್ಮ ದಿನಾಚರಣೆಯನ್ನು ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿರುತ್ತದೆ.

ಇವರ ಸ್ಮರಣೆಯ ಅಂಗವಾಗಿ ಕುಂವೆಂಪು ಸಾಹಿತ್ಯವನ್ನು ಕುರಿತು ಪ್ರಾಧ್ಯಾಪಕರುಗಳಾದ ಡಾ. ವಿಜಯ್ ಕುಮಾರ್ ಹೆಚ್. ಜಿ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಡಾ. ಶುಭ ಮರವಂತೆ ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ಇವರುಗಳ ವಿಶೇಷ ಉಪನ್ಯಾಸ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಆಸಕ್ತ ಬರಹಗಾರರು ಮತ್ತು ಕವಿಗಳು ಸ್ವ ರಚಿತ ಕವನಗಳನ್ನು ದಿನಾಂಕ 25.12.22ರ ಒಳಗಾಗಿ ಕಳಿಸುವುದು ಕವನಗಳ ಪರಿಶೀಲನಾ ಸಮಿತಿಯಲ್ಲಿ ಆಯ್ಕೆಯಾದ ಕವನಗಳ ಕವಿಗಳನ್ನು ಮಾತ್ರ ಆಹ್ವಾನಿಸಲಾಗುವುದು. ಆಯ್ಕೆಗೊಂಡ ಕವನಗಳು ISBN ಸಂಖ್ಯೆಯೊಂದಿಗೆ ಪುಸ್ತಕ ರೂಪದಲ್ಲಿ ತಂದು ಕಳಿಸಿಕೊಡಲಾಗುವುದು.ಕೊನೆ ದಿನಾಂಕದ ನಂತರ ಬಂದ ಕವನಗಳನ್ನು ತಿರಸ್ಕರಿಸಲಾಗುವುದು.ಕವನಗಳನ್ನು ನುಡಿ ತಂತ್ರಾಂಶ (4.0)ಪಿಡಿ.ಎಫ್ ಮೂಲಕ ಕಳಿಸುವುದು.

ಸ್ವ ರಚಿತ ಕವಿತೆಗಳು ಈ ಕೆಳಕಂಡ ಆಶಯಗಳನ್ನು ಹೊಂದಿರಲಿ…

ಕನ್ನಡ ನಾಡು ನುಡಿ ಭಾಷೆ ದೇಶಪ್ರೇಮ, ಪ್ರಕೃತಿ, ವೈಚಾರಿಕತೆ, ಆಧ್ಯಾತ್ಮ , ಮೂಢನಂಬಿಕೆ, ಡಂಬಾಚಾರ ಜಾತಿ ಪದ್ಧತಿ, ಮತ್ತು ಪ್ರಸ್ತುತ ವಿದ್ಯಾಮಾನಗಳ ಕುರಿತು ಇರಲಿ

ಕವಿತೆಗಳನ್ನು ಕಳಿಸಬೇಕಾದ ವಿಳಾಸ

ಡಾ. ಷಕೀಬ್ ಎಸ್ ಕಣದ್ಮನೆ
ಅಧ್ಯಕ್ಷರು
ಕನ್ನಡ ಸಾಂಸ್ಕೃತಿಕ ಗತ ವೈಭವ ಅಕಾಡೆಮಿ ದಾವಣಗೆರೆ.
ಮೊ ಸಂಖ್ಯೆ :(ವಾಟ್ಸಪ್ )
9743930178
9980421671
8880006939

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version