ದಿನದ ಸುದ್ದಿ
ಶಹಾಪುರ | ಜಿಲ್ಲಾ ‘ದಲಿತ ಸೇನೆ’ ಉಪಾಧ್ಯಕ್ಷರಾಗಿ ಟಿ.ರಂಗನಾಥ್ ಗುಂಡುಗುರ್ತಿ ಆಯ್ಕೆ
ಸುದ್ದಿದಿನ, ಶಹಾಪುರ : ದಲಿತ ಸೇನೆ ಸಂಘಟನೆ ಬಲಿಷ್ಠಗೊಳಿಸಲು ಟಿ ರಂಗನಾಥ್ ನಾನು ಗುಂಡುಗುರ್ತಿ ಅವರನ್ನು ಯಾದಗಿರಿ ಜಿಲ್ಲೆಯ ದಲಿತ ಸೇನೆಯ ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಅನಸೂಗುರ ನಾಯ್ಕಲ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ದಲಿತ ಸೇನೆಯ ಸಂಘಟನೆಗಾಗಿ ಎಲ್ಲರನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ರೀತಿಯಲ್ಲಿ ಸಂಘಟನೆಗಾಗಿ ಹೋರಾಟದ ರೂಪರೇಷಗಳು ಹಾಕಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ದಲ್ಲಿತ ಸೇನೆಯ ಅಧ್ಯಕ್ಷರಾದ ಅಶೋಕ್ ಗೋಗಿ ಹೊಸಮನೆ ಹಾಗೂ ಶಹಾಪುರ ತಾಲ್ಲೂಕು ದಲಿತ ಸೇನೆಯ ಪ್ರಧಾನ ಕಾರ್ಯದರ್ಶಿ ಶಿವು ಆಂದೋಲ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401