ದಿನದ ಸುದ್ದಿ
ಹಾವು ಕಚ್ವಿ ಬಾಲಕ ಸಾವು
ಸುದ್ದಿದಿನ,ತುಮಕೂರು: ಹಾವು ಕಚ್ವಿ ಹತ್ತು ವರ್ಷದ ಬಾಲಕ ಸಾವನ್ನಪ್ಪಿರುವ ದುರ್ಘಟನೆ ತಿಪಟೂರು ತಾಲೂಕಿನ ಕೋಟಿನಾಯಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೇಣುಗೋಪಾಲ್ ಎಂಬ ಹತ್ತು ವರ್ಷದ ಬಾಲಕ ಮೃತನಾಗಿದ್ದಾನೆ. ಮನೆಯ ಹತ್ತಿರ ಆಟವಾಡುತ್ತಿದ್ದ ಸಮಯದಲ್ಲಿ ಬಾಲಕನಿಗೆ ವಿಷಪೂರಿತ ಹಾವು ಕಚ್ಚಿದ್ದು, ಕೂಡಲೇ ಫೋಷಕರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವೇಣುಗೋಪಾಲ್ ಮೃತಪಟ್ಟಿದ್ದಾನೆ. ತಿಪಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243