ದಿನದ ಸುದ್ದಿ
ಮಹಿಳಾ ನ್ಯಾಯವಾದಿ | ಪತ್ನಿ ಕೊಂದ ಆರೋಪದಲ್ಲಿ ಪತಿ
ಸುದ್ದಿದಿನ ಡೆಸ್ಕ್ |ಸಾಂಸ್ಕೃತಿಕ ನಗರಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ರಾಜರಾಜೇಶ್ವರಿ ನಗರದ ಮನೆಯಲ್ಲಿ ಘಟನೆ ನಡೆದಿದ್ದು ಸೌಮ್ಯ (36) ಎಂಬುವವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗಂಡ ಶೈಲಾರಾಧ್ಯನಿಂದ ಪತ್ನಿಯನ್ನು ಕೊಲೆ ಮಾಡಿದ ಆರೋಪ ವ್ಯಕ್ತವಾಗಿದೆ. ಮಂಡ್ಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದ ಸೌಮ್ಯ
12 ವರ್ಷಗಳ ಹಿಂದೆ ಶೈಲಾರಾಧ್ಯ ಜೊತೆ ವಿವಾಹವಾಗಿದ್ದರು. ಆರಂಭದಿಂದಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಶೈಲಾರಾಧ್ಯ ಮದ್ಯವ್ಯಸನಿ ಅಗಿದ್ದ.
ನಿನ್ನೆ ರಾತ್ರಿ ಗಂಡ ಹೆಂಡತಿ ಮಧ್ಯೆ ಜಗಳ ನಡೆದು ಸೌಮ್ಯ ಮೇಲೆ ಹಲ್ಲೆ ನಡೆದಾಗ ಸಾವನ್ನಪ್ಪಿದ್ದಾರೆ.
ಘಟನೆ ಮರೆಮಾಚಲು ನೇಣು ಹಾಕಿರುವ ಪತಿ.
ಗಂಡನೇ ಕೊಲೆ ಮಾಡಿದ್ದಾನೆಂದು ತಂದೆಯಿಂದ ಪೊಲೀಸರಿಂದ ದೂರು ನೀಡಲಾಗಿದೆ.
ಸರಸ್ವತಿ ಪುರಂ ಪೊಲೀಸರ ವಶದಲ್ಲಿದ್ದಾರೆ ಕೊಲೆ ಆರೋಪಿ ಶೈಲಾರಾಧ್ಯ.