ದಿನದ ಸುದ್ದಿ
ದೇಶದ ಪ್ರಗತಿಯಲ್ಲಿ ನವೋದ್ಯಮಗಳ ಪಾತ್ರ ಅನನ್ಯ ; ಮನ್-ಕಿ-ಬಾತ್ನಲ್ಲಿ ಪ್ರಧಾನಿ ಅಭಿಮತ
ಸುದ್ದಿದಿನ ಡೆಸ್ಕ್ : ವಿಭಿನ್ನ ಸಂಸ್ಕೃತಿ, ಪರಂಪರೆಯ ವೈವಿದ್ಯತೆಯೇ ದೇಶದ ದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಆಕಾಶವಾಣಿಯ ಮನ್-ಕಿ-ಬಾತ್ ಸರಣಿಯಲ್ಲಿಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಹಾಗೂ ಮೈಸೂರು, ವಿಶೇಷವಾಗಿ ಭಾರತದ ಮುಂದಿನ ಭವಿಷ್ಯ ರೂಪಿಸುವಲ್ಲಿ ನವೋದ್ಯಮಗಳ ಪಾತ್ರವನ್ನು ಪ್ರಮುಖವಾಗಿ ಒತ್ತಿ ಹೇಳಿದ್ದಾರೆ.
’ಏಕ್ ಭಾರತ್ ಶ್ರೇಷ್ಠ್ ಭಾರತ್’ನ ಪೂರ್ಣ ಸ್ಪೂರ್ತಿ ಹೊಂದಿರುವ ಕರ್ನಾಟಕದ ಕಲ್ಪನಾ ಅವರನ್ನು ಉಲ್ಲೇಖಿಸಿ ಇತ್ತೀಚೆಗೆ 10ನೇ ತರಗತಿ ಉತ್ತೀರ್ಣರಾದ ಆಕೆಯ ಸಾಧನೆ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ದೇಶದಲ್ಲಿ ಯೂನಿಕಾರ್ನ್ಗಳ ಸಂಖ್ಯೆ ನೂರನ್ನು ತಲುಪಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿ, ಯೂನಿಕಾರ್ನ್ಗಳ ಒಟ್ಟು ಮೌಲ್ಯ 330ಶತಕೋಟಿ ಡಾಲರ್ ಅಂದರೆ 25ಲಕ್ಷಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದರು.
ಯೂನಿಕಾರ್ನ್, ಒಂದು ನವೋದ್ಯಮವಾಗಿದ್ದು, ಇದು ಕನಿಷ್ಠ 7ಸಾವಿರದ 500 ಕೋಟಿರೂಪಾಯಿ ಮೌಲ್ಯ ಹೊಂದಿರುತ್ತದೆ. ಕಳೆದ ವರ್ಷದಲ್ಲಿ 44 ಯೂನಿಕಾರ್ನ್ಗಳು ಸ್ಥಾಪನೆಯಾಗಿವೆ. ಭಾರತೀಯ ನವೋದ್ಯಮ ಪರಿಸರವು ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗದೆ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲೂ ಹೊಸ ಉದ್ಯಮ ಶೀಲರು ಹೊರಹೊಮ್ಮುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಜೂನ್ 21ರಂದು 8ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯ ’ಮನುಕುಲಕ್ಕೆ ಯೋಗ’ ಎಂಬುದಾಗಿದ್ದು, ಪ್ರತಿಯೊಬ್ಬರೂ ಯೋಗ ದಿನವನ್ನು ಹೆಚ್ಚು ಉತ್ಸಾಹದಿಂದ ಆಚರಿಸಬೇಕು ಎಂದು ಪ್ರಧಾನಿ ಮನ್-ಕಿ-ಬಾತ್ನಲ್ಲಿ ಹೇಳಿದರು.
During today’s #MannKiBaat, had the opportunity to discuss India’s rise in the world of StartUps. Also touched upon an key dimension – that of good mentors to nurture StartUps. pic.twitter.com/LpEOHPrDfY
— Narendra Modi (@narendramodi) May 29, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243