ದಿನದ ಸುದ್ದಿ

ಜ.30 ರಂದು ದಾವಣಗೆರೆ ವಿವಿ ಯಲ್ಲಿ ರಂಗ ವಿಮರ್ಶಾ ಕಮ್ಮಟ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಆಸಕ್ತ ಬರಹಗಾರರಿಗಾಗಿ ರಂಗ ವಿಮರ್ಶಾ ಕಮ್ಮಟವನ್ನು ಜ.30 ರಂದು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ಜಿಲ್ಲಾ ವರದಿಗಾರರ ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಜ.30 ರ ಬೆಳಿಗ್ಗೆ 10.30 ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಬಿ.ಎ ಸಭಾಂಗಣದಲ್ಲಿ ರಂಗ ವಿಮರ್ಶಾ ಕಮ್ಮಟವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 10.30 ಕ್ಕೆ ಒಂದನೇ ಗೋಷ್ಟಿಯಲ್ಲಿ ಲಿಖಿತ ಪಠ್ಯ-ರಂಗ ಪಠ್ಯ ಮತ್ತು ವಿಮರ್ಶೆಯ ಹಾದಿ ವಿಷಯ ಕುರಿತು ರಂಗತಜ್ಞರು, ಸಿನೆಮಾ ನಿರ್ದೇಶಕರು ಹಾಗೂ ರಂಗ ವಿಮರ್ಶಾ ಕಮ್ಮಟದ ನಿರ್ದೇಶಕರಾದ ಬಿ.ಸುರೇಶ್ ವಿಷಯ ಮಂಡನೆ ಮಾಡುವರು. ಹಿರಿಯ ಸಾಹಿತಿಗಳು ಮತ್ತು ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರಾದ ಬಿ.ಎನ್.ಮಲ್ಲೇಶ್, ಟಿವಿ9 ಜಿಲ್ಲಾ ವರದಿಗಾರರಾದ ಬಸವರಾಜ ದೊಡ್ಡಮನಿ, ಸಂಯುಕ್ತ ಕರ್ನಾಟಕ ದಾವಣಗೆರೆ ಬ್ಯೂರೋ ಮುಖ್ಯಸ್ಥರಾದ ಮಂಜುನಾಥ ಗೌರಕ್ಕಳವರ್, ವಿಜಯ ಕರ್ನಾಟಕ ಉಪ ಸಂಪಾದಕ ಯಳನಾಡು ಮಂಜುನಾಥ, ರಂಗವೈಭವದ ಉಪಸಂಪಾದಕ ಬಸವರಾಜ್ ಐರಣಿ, ಆ.ವಿ.ಎವಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅನುರಾಧ ಬಕ್ಕಪ್ಪ ಸಂವಾದದಲ್ಲಿ ಪಾಲ್ಗೊಳ್ಳುವರು.

ಮಧ್ಯಾಹ್ನ 12.30 ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಸ್.ವಿ.ಹಲಸೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಭೀಮಸೇನ.ಆರ್ ಅಧ್ಯಕ್ಷತೆ ವಹಿಸುವರು. ರಂಗತಜ್ಞರು ಹಾಗೂ ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಜಿ.ಎಂ.ಆರ್.ಆರಾಧ್ಯ, ವಾರ್ತಾಧಿಕಾರಿ ಅಶೋಕಕುಮಾರ್.ಡಿ, ರಂಗಸಮಾಜದ ಸದಸ್ಯರಾದ ಪ್ರಭುದೇವ ಕಪ್ಪಗಲ್ಲು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮಧ್ಯಾಹ್ನ 2.30 ಕ್ಕೆ ಎರಡನೇ ಗೋಷ್ಟಿಯಲ್ಲಿ ನೀನಾಸಮ್ ತಿರುಗಾಟ 2018 ಇವರಿಂದ ಆಶ್ಚರ್ಯ ಚೂಡಾಮಣಿ ನಾಟಕದ ವಿಡಿಯೋ ಪ್ರದರ್ಶನವಿರುತ್ತದೆ. ಹಾಗೂ ಪ್ರದರ್ಶನದ ದೃಶ್ಯ ಭಾಷೆ ಮತ್ತು ಮೌಲ್ಯ ನಿಗದಿಪಡಿಸುವ ಬಗೆ ಕುರಿತು ರಂಗತಜ್ಞರು, ಸಿನೆಮಾ ನಿರ್ದೇಶಕರು ಹಾಗೂ ರಂಗ ವಿಮರ್ಶಾ ಕಮ್ಮಟದ ನಿರ್ದೇಶಕರಾದ ಬಿ.ಸುರೇಶ್ ವಿಷಯ ಮಂಡನೆ ಮಾಡುವರು. ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ವಿಶಾಖ.ಎನ್, , ಕನ್ನಡಪ್ರಭ ಪತ್ರಿಕೆಯ ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ್ ಬಡದಾಳ್, ಏಷಿಯಾನೆಟ್ ಸುರ್ವಣ 24*7 ಜಿಲ್ಲಾ ವರದಿಗಾರ ಡಾ.ವರದರಾಜ್, ದಾವಿವಿ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿ ವಿಶ್ವನಾಥ್.ಹೆಚ್, ಕಥೆಗಾರ್ತಿ ಬಿ.ಟಿ.ಜಾಹ್ನವಿ, ರಂಗಕರ್ಮಿ ಸಿದ್ದರಾಜ.ಎಸ್.ಎಸ್ ಸಂವಾದದಲ್ಲಿ ಪಾಲ್ಗೊಳ್ಳುವರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವಿದ್ದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಬಸವರಾಜ ಬಣಕಾರ ಸಮಾರೋಪ ನುಡಿ ನುಡಿವರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಭೀಮಸೇನ.ಆರ್ ಅಧ್ಯಕ್ಷತೆ ವಹಿಸುವರು. ಲೇಖಕರು-ಹಿರಿಯ ಪತ್ರಕರ್ತರಾದ ಬಾ.ಮ.ಬಸವರಾಜಯ್ಯ ಪ್ರಮಾಣ ಪತ್ರ ವಿತರಣೆ ಮಾಡುವರು. ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೀರಪ್ಪ ಎಂ.ಭಾವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version