ದಿನದ ಸುದ್ದಿ
ದೇವಸ್ಥಾನದ ಹುಂಡಿ ಕದ್ದ ಕಳ್ಳರು..!
ಸುದ್ದಿದಿನ,ಕೋಲಾರ : ದೇವಾಲಯದ ಹುಂಡಿಯನ್ನ ಕಳ್ಳರು ಕದ್ದ ಘಟನೆ ಕೋಲಾರ ತಾಲೂಕು ಬಸವನತ್ತ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಬಸವನತ್ತ ಗ್ರಾಮದ ಗಂಗಮ್ಮ ದೇವಾಲಯದ ಹುಂಡಿ ಕದ್ದು, ಹುಂಡಿಯಲ್ಲಿನ ಹಣ ತೆಗದುಕೊಂಡು, ತಾಲೂಕಿನ ಕೋಡಿರಾಮಸಂದ್ರದ ಬಳಿ ಬಿಸಾಡಿ ಹೋಗಿರುವ ಕಳ್ಳರು, ದೇವಾಲಯದ ಕಬ್ಬಿಣದ ಗೇಟ್ ಸೇರಿದಂತೆ ಬಾಗಿಲನ್ನ ಧ್ವಂಸಗೊಳಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401