ರಾಜಕೀಯ

ದಾವೂದ್ ಹೆಸರಲ್ಲಿ ಶಾಸಕರಿಗೆ ಧಮಕಿ: ಯುವಕ ಸೆರೆ

Published

on

ಸುದ್ದಿದಿನ ಡೆಸ್ಕ್: ತಾನು ದಾವೂ ಇಬ್ರಾಂ ಎಂದು ಹೇಳಿಕೊಂಡು ಶಾಸಕರೊಬ್ಬರಿಗೆ ಕರೆ ಮಾಡಿ ಒಂದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಯುವಕನೊಬ್ಬನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ರಾಹುಲ್ ಕುಮಾರ್ ಗೌರ್ ಬಂಧಿತ ಯುವಕ. ಈತ ಉತ್ತರ ಪ್ರದೇಶದ ಬಿಎಸ್‍ಪಿ ಶಾಸಕ ಉಮಾ ಶಂಕರ್ ಅವರಿಗೆ ಇ ಮೇಲ್ ಮೂಲಕ ಧಮಕಿ ಹಾಕಿದ್ದ. ಒಂದು ಕೋಟಿ ರೂಪಾಯಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಉಮಾ ಶಂಕರ್ ಅವರು ಗೋಮತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನತ್ತಿದ್ದ ಪೊಲೀಸರು ಗುರು ಗಾಂವ್‍ನ ಮಾರುತಿ ಪಾರ್ಕಿಂಗ್ ಪ್ಲೇಸ್‍ನಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version