ದಿನದ ಸುದ್ದಿ
ಕಬಿನಿ ಹಿನ್ನೀರಿನಲ್ಲಿ ತೇಲಿ ಬಂದ ಹುಲಿ ಶವ !
ಸುದ್ದಿದಿನ ಡೆಸ್ಕ್: ಮೈಸೂರು ಭಾಗದ ಎಲ್ಲ ಜಲಾಶಯಗಳು ತುಂಬಿದ್ದು, ಪರಿಣಾಮವಾಗಿ ಒಂದಿಲ್ಲೊಂದು ಅನಾಹುತಗಳಾಗುತ್ತಿವೆ.
ಕಬಿನಿ ಜಲಾಶಯದಲ್ಲಿ ಹಿನ್ನೀರಿನಲ್ಲಿ ಹುಲಿ ಶವವೊಂದು ತೇಲಿಬಂದಿದ್ದು, ಇದು ಸುತ್ತಮುತ್ತಲಿನವರನ್ನು ಆತಂಕಕ್ಕೀಡುಮಾಡಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದ ಜಮೀನಿನಲ್ಲಿ ಹುಲಿ ಶವ ಕಂಡ ರೈತರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಹಿನ್ನೀರಿನ ಪ್ರವಾಹದಲ್ಲಿ ಪ್ರಾಣಿ ಶವ ತೇಲಿಬಂದಿರುವುದು ಇದೇ ಮೊದಲು.