ದಿನದ ಸುದ್ದಿ
ನಿವೇಶನಗಳಲ್ಲಿ ಕೊಳಚೆ ನೀರು ಕಳೆ ಗಿಡ ತ್ಯಾಜ್ಯ ಶೀಘ್ರ ತೆರವುಗೊಳಿಸಿ : ಮುಖ್ಯಾಧಿಕಾರಿ ಹೆಚ್.ಎನ್. ಬಜಕ್ಕನವರ್
ಸುದ್ದಿದಿನ,ಮಲೆಬೆನ್ನೂರು:ಪಟ್ಟಣದ ಎಲ್ಲಾ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳನ್ನು ತ್ಯಾಜ್ಯ ವಸ್ತುಗಳನ್ನು ಮಾಲೀಕರು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಇದರಿಂದ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಮಲೆಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಹೆಚ್.ಎನ್. ಬಜಕ್ಕವರ್ ಸೂಚನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೇಬೆನ್ನೂರು ಪಟ್ಟಣದ ಹಾಗೂ ಪಟ್ಟಣಕ್ಕೆ ಹೊಂದಿಕೊಂಡಿರುವ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿರುತ್ತದೆ ಕೊಳಚೆ ನೀರು ನಿಂತಿರುವುದು ಕಸ ಕಡ್ಡಿಗಳಂತಹ ತ್ಯಾಜ್ಯ ವಸ್ತುಗಳು ಇರುವುದು ಸ್ವಚ್ಛತೆ ಇಲ್ಲದೆ ಇರುವುದು ಡೆಂಗ್ಯೂ ಜ್ವರ ಹರಡಲು ಕಾರಣವಾಗುತ್ತಿದೆ ಇದರಿಂದ ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗ ತೊಡಗಿವೆ ಆದಕಾರಣ ಖಾಲಿ ನಿವೇಶನಗಳ ಮಾಲೀಕರು ಈ ಕೂಡಲೇ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೂಚನೆ ನೀಡಿದರು.
ಸ್ವಚ್ಛತೆ ನಿರ್ಲಕ್ಷಿಸಿದರೆ ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಆಗುತ್ತದೆ ಆದುದರಿಂದ ಡೆಂಗ್ಯೂ ಜ್ವರ ಹರಡಲು ಆಸ್ಪದ ಕೊಟ್ಟಂತಾಗುತ್ತದೆ ಎಂದಿದ್ದಾರೆ ಈ ಹಿನ್ನೆಲೆಯಲ್ಲಿ ಕೂಡಲೇ ಮಾಲೀಕರು ತಮ್ಮ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಇಲ್ಲವಾದಲ್ಲಿ ಪುರಸಭಾ ವತಿಯಿಂದಲೇ ಸ್ವಚ್ಛತೆ ಮಾಡಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಮಾಲೀಕರ ಖಾತೆಗೆ ಸೇರಿಸಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು
ಪಟ್ಟಣದ ಗುಜರಿ ವ್ಯಾಪಾರಿಗಳು ತಮ್ಮ ಗುಜರಿಗಳ ಒಳಗೆ ವಾಹನಗಳ ಟೈರ್ ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಅಂಗಡಿ ಮಾಲೀಕರು ಬೇಕರಿ ಮಾಲೀಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಗಮನಹರಿಸಬೇಕು, ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಖಾಲಿ ನಿವೇಶನಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಪುರಸಭೆ ವ್ಯಾಪ್ತಿಯ ಅನೇಕ ವಾರ್ಡ್ ಗಳ ಮನೆಗಳ ಮುಂದಿನ ನಳಗಳಿಗೆ ಟ್ಯಾಪ್ ಅಳವಡಿಸಿಲ್ಲ ಇದರಿಂದಾಗಿ ಪ್ರತಿನಿತ್ಯ ನೀರು ಪೋಲಾಗುತ್ತಿದೆ ಈ ಬಗ್ಗೆ ನಾಗರೀಕರು ಎಚ್ಚರ ವಹಿಸಬೇಕು ಕೂಡಲೇ ನಳಗಳ ಟ್ಯಾಪ್ ಅಳವಡಿಸಿ ನೀರು ಇತಮಿತವಾಗಿ ಬಳಸಬೇಕು ನಿರ್ಲಕ್ಷ ಮುಂದುವರೆದರೆ ಪುರಸಭೆ ಕಾಯ್ದೆ ಅನ್ವಯ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243