ದಿನದ ಸುದ್ದಿ
ತುಮಕೂರು :’ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ಕಾರ್ಯಾಗಾರ’ ದಲ್ಲಿ ಪತ್ರಕರ್ತ ಪಿ. ಸಾಯಿನಾಥ್
ಸುದ್ದಿದಿನ,ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆಯು ನಿರ್ದಿಷ್ಟ ವಿಷಯಾಧಾರಿತ ಕಾರ್ಯಗಾರ ಮತ್ತು ಸಂವಾದಗಳ ಮೂಲಕ ಯುವ ಸಾಂಸ್ಕೃತಿಕ ನಾಯಕತ್ವವನ್ನು ಬೆಳೆಸುವ ಉದ್ದೇಶ ಹೊಂದಿದ್ದು ಇದರ ಭಾಗವಾಗಿ ಇಂದು ತುಮಕೂರಿನಲ್ಲಿ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ಎಂಬ ರಾಜ್ಯ ಮಟ್ಟದ ಕಾರ್ಯಗಾರವನ್ನು ಏರ್ಪಡಿಸಿಲಾಗಿತ್ತು.
ರಾಜ್ಯಾದ್ಯಂತ ಸಾಕಷ್ಟು ಯುವ ಪ್ರತಿನಿಧಿಗಳನ್ನು ಒಳಗೊಂಡ ಈ ಕಾರ್ಯಗಾರವನ್ನು ಬಂಡಾಯದ ಬರಹಗಾರಾದ ಪ್ರೊ. ಬರಗೂರು ರಾಮ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ
ದೇಶದ ಹೆಸರಾಂತ ಪತ್ರಕರ್ತರೂ ಮತ್ತು ಚಿಂತಕರೂ ಆದ ಪಿ ಸಾಯಿನಾಥ್ ಉದ್ಘಾಟಿಸಿ, ಪತ್ರಿಕೆ, ಚಲನ ಚಿತ್ರ, ರಂಗಭೂಮಿ, ಜನಪದ ಕಲೆ, ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಾಮಾಜಿಕ ಹೊಣೆ ಮತ್ತು ಸ್ಥಿತ್ಯಂತರದ ಸ್ಥಿತಿಗಳನ್ನ ಕುರಿತು ವಿಷಯ ಮಂಡನೆ ಮತ್ತು ಸಂವಾದಗಳ ಜೊತೆಗೆ “ಸಮೂಹ ಮಾಧ್ಯಮ ಮತ್ತು ಮಹಿಳೆ” ಹಾಗೂ ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ವಿಶೇಷ ಉಪನ್ಯಾಸ ಮಾಡಲಾಯಿತು.
ಎಲ್ಲಾ ವಿಷಯಗಳ ಬಗ್ಗೆಯೂ ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಸಿ. ಬಸವಲಿಂಗಯ್ಯ (ರಂಗಭೂಮಿ). ಜಿ. ಎನ್. ಮೋಹನ್ (ವಿದ್ಯುನ್ಮಾನ). ಅರುಣ ಜೋಳದ ಕೂಡ್ಲಿಗಿ (ಜನಪದ ಕಲೆ). ಚಂದ್ರಕಾಂತ ವಡ್ಡು (ಪತ್ರಕೆ). ಗಂಗಾಧರ ಮೊದಲಿಯಾರ್ (ಚಲನಚಿತ್ರ). ಗೀತಾ ವಸಂತ್ (ಮಾಧ್ಯಮ ಮತ್ತು ಮಹಿಳೆ).
ಚ. ಹ. ರಘುನಾಥ್ (ಅಭಿವ್ಯಕ್ತಿ ಸ್ವಾತಂತ್ರ್ಯ). ದಿನೇಶ್ ಆಮಿನ್ ಮಟ್ಟು ಸಮಾರೋಪ ನುಡಿಗಳನ್ನಾಡಿದರು.
ರಾಜ್ಯದ ವಿವಿಧ ಕಡೆಯಿಂದ ವೈ. ಬಿ. ಹಿಮ್ಮಡಿ. ಆರ್ ಜಿ ಹಳ್ಳಿ ನಾಗರಾಜ್. ಗಡಿ ಹಳ್ಳಿ ನಾಗರಾಜ್. ರಂಗಾರೆಡ್ಡಿ ರಾಜಶೇಖರ ಮೂರ್ತಿ ಜ್ಯೋತಿ. ಪ್ರದೀಪ್ ಮಾಲ್ಗುಡಿ. ಮಲ್ಲಿಕಾರ್ಜುನ ಮಾನ್ಪಡೆ. ಸ್ಥಳಿಯ ಕವಿ ಕೆ ಬಿ ಸಿದ್ದಲಿಂಗ. ದೊರೆ ರಾಜ್. ಪ್ರೊ ಶ್ರೀನಿವಾಸಯ್ಯ. ಸೋಮಣ್ಣ. ಬೂವನ ಹಳ್ಳಿನಾಗರಾಜ್. ಬಾ ಹ ರಮಾಕೂಮಾರಿ. ಎಸ್ ರಮೇಶ್. ಲಕ್ಷ್ಮಣ್ ದಾಸ್. ಶೈಲ ನಾಗರಾಜ್. ಅಂತಮೂರ್ತಿ. ಹೊನ್ನಾಗಾನಹಳ್ಳಿ ಕರಿಯಣ್ಣ. ಸೈಯ್ಯದ್ ಮುಜೀಬ್. ರಘು ಎಸ್ ಎಲ್. ಹಫಿಜ್. ನಾಗರಾಜ ಎಂ. ಷಕೀಬ್ ಎಸ್ ಕಣದ್ಮನೆ. ಸತೀಶ್ ಶಿವಪ್ಪಯ್ಯನಮಠ. ಶಂಭನಗೌಡ. ಸಕ್ರಿಯವಾಗಿಭಾಗವಹಿಸಿದ್ದರು.
ಡಾ. ರಾಜಪ್ಪ ದಳವಾಯಿ ಮತ್ತು ಡಾ. ಸುಕನ್ಯ ಮಾರುತಿಯವರು ಕಾರ್ಯಗಾರದ ನಿರ್ದೇಶಕರಾಗಿ ಮತ್ತು ಜಿಲ್ಲಾ ಸಂಚಾಲಕರಾದ ನಾಗಭೂಷಣ ಬಗ್ಗನಡು. ಓ ನಾಗರಾಜ್ ಇವರ ನೇತೃತ್ವದಲ್ಲಿ ಕಾರ್ಯಗಾರವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401