ದಿನದ ಸುದ್ದಿ
ನಮ್ಮ ನಾಯಕರ ಜೊತೆ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ : ಸಚಿವ ಯು.ಟಿ.ಖಾದರ್
ಸುದ್ದಿದಿನ, ಮಂಗಳೂರು : ನಮ್ಮ ಹಿರಿಯ ನಾಯಕರ ಜೊತೆ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಯಾರು ಯಾರು ಇದ್ದಾರೆ ಅನ್ನೋದು ನಮ್ಮ ಮೇಲಿನ ನಾಯಕರಿಗೆ ಗೊತ್ತಿದೆ. ಆದ್ರೆ ನಾವು ಎಲ್ಲಿಯೂ ಆವೇಶ ತೋರಿಸಲು ಹೋಗಲ್ಲ ಎಂದು ಮಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಸಂಪರ್ಕದಲ್ಲಿ ಇದ್ದಾರೆ, ನನಗೆ ಗೊತ್ತಿಲ್ಲ, ಹಿರಿಯ ನಾಯಕರಿಗೆ ಗೊತ್ತಿದೆ. ಕಾಂಗ್ರೆಸ್ ಗೆ ಬಜೆಟ್ ಮಂಡನೆ ವೇಳೆ ಶಾಸಕರ ಗೈರು ಭೀತಿ ವಿಚಾರವಾಗಿ ನಮಗೆ ಯಾವುದೇ ಭೀತಿ ಇಲ್ಲ.ಬಿಜೆಪಿಯವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಜನರು ಅವರಿಗೆ ಸ್ಪಷ್ಟ ಬಹುಮತ ನೀಡಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಸಹಕಾರಕ್ಕೆ ಬೆಂಬಲ ಕೊಡುವುದು ಬಿಟ್ಟು, ಬಿಜೆಪಿಯು ಸರಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಕರ್ನಾಟಕಕ್ಕೆ ಅಗೌರವ ತರುವ ಪ್ರಯತ್ನ ನಡೆಸುತ್ತಿದೆ. ನಮಗೆ ಯಾವುದೇ ಭೀತಿ ಇಲ್ಲ, ಕುಮಾರಸ್ವಾಮಿ ಸುಭದ್ರ ಸರ್ಕಾರ ನಡೆಸ್ತಾರೆ ಎಂದು ವಿಶ್ವಾದ ವ್ಯಕ್ತ ಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401