ದಿನದ ಸುದ್ದಿ
ಮಹಿಳಾ ಸಾಧಕರ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್
ಸುದ್ದಿದಿನ ಡೆಸ್ಕ್ : ಒಟಿಟಿ ಫ್ಲಾಟ್ಫಾರಂ ನೆಟ್ಫ್ಲಿಕ್ಸ್ ಸಹಯೋಗದಲ್ಲಿ ವಿಡಿಯೋ ಸಂಗ್ರಹಗಳ ಸಾಕ್ಷ್ಯಚಿತ್ರ ಆಜಾದಿ ಕ ಅಮೃತ್ ಕಹಾನಿಯಾನ್ ಅನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ದೆಹಲಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
ಯಾರೂ ಊಹಿಸಲಾಗದಂತಹ ವಿಶಿಷ್ಟ ವ್ಯಕ್ತಿತ್ವದ ಏಳು ಮಂದಿ ಭಾರತೀಯ ಮಹಿಳಾ ಸಾಧಕರ ಸರಣಿ ಕತೆಗಳನ್ನೊಳಗೊಂಡ ಸಾಕ್ಷ್ಯಚಿತ್ರ ಇದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಠಾಕೂರ್, ಭಾರತೀಯರ ಸ್ಫೂರ್ತಿದಾಯಕ ಕತೆಗಳನ್ನೊಳಗೊಂಡ ಈ ಸಾಕ್ಷ್ಯಚಿತ್ರದಿಂದ ಹೆಚ್ಚು ಜನರಿಗೆ ಪ್ರೇರಣಾದಾಯಕವಾಗಲಿದ್ದು, ಅವರೂ ಸಹ ಅತ್ಯುನ್ನತ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದು ಆಶಿಸಿದರು.
ನೆಟ್ಫ್ಲಿಕ್ಸ್ ಸಂಸ್ಥೆಯೊಂದಿಗೆ ದೀರ್ಘಕಾಲಿನ ಪಾಲುದಾರಿಕೆಯನ್ನು ಹೊಂದಿದ್ದು, ಹಲವು ವೈಶಿಷ್ಟ್ಯಪೂರ್ಣ ವಿಷಯಗಳನ್ನು ಕುರಿತ ಸಾಕ್ಷ್ಯಚಿತ್ರಗಳನ್ನು ಹೊರತರಲಾಗುವುದು. ಮಹಿಳಾ ಸಬಲೀಕರಣ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ವಿವಿಧ ವಿಷಯಗಳನ್ನೊಳಗೊಂಡ 25ಸಾಕ್ಷ್ಯಚಿತ್ರಗಳನ್ನು ತಯಾರಿಲಾಗುತ್ತಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
In India, If you look at the best of the talent in films or sports, they come from smaller towns or cities
We will surely see a lot of young people coming into the content creation and production in the coming years
Union Minister @ianuragthakur pic.twitter.com/ENCBR1ApOJ
— PIB India (@PIB_India) April 26, 2022
India now has started using technology in films. With the rich culture and history, India has, we have a lot to showcase and tell the world.
India could be the AVGC hub, post-production hub, and I am sure we are going to do well in that direction
Union Minister @ianuragthakur pic.twitter.com/m0UpCuxkws
— PIB India (@PIB_India) April 26, 2022
We are already doing the post-production work for Hollywood movies. India with the new policy changes could be the new film making destination for the world
Union Minister @ianuragthakur pic.twitter.com/2ukkJgu0Iq
— PIB India (@PIB_India) April 26, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243