ರಾಜಕೀಯ
ಮೌಲ್ಯಾಧಾರಿತ ರಾಜಕಾರಣ ಕ್ಷೀಣಿಸುತ್ತಿದೆ | ಸಿದ್ದು ಅಸಮಾಧಾನ
ಸುದ್ದಿದಿನ, ಬೆಂಗಳೂರು | ಪ್ರಸ್ತುತ ದಿನಗಳಲ್ಲಿ ಮೌಲ್ಯಾಧಾರಿತ ರಾಜಕಾರಣ ಇಲ್ಲವಾಗುತ್ತಿದೆ. ರಾಜಕೀಯ ಚಾಣಾಕ್ಣತನವೂ ಕ್ಷೀಣಿಸುತ್ತಾ ಬರುತ್ತಿದೆ. ಬದ್ಧತೆ ಇಲ್ಲದ ರಾಜಕಾರಣ ಉತ್ತುಂಗ ಸ್ಥಿತಿಯಲ್ಲಿದ್ದು, ರಾಜರು ಬಿಕಾರಿಗಳಾಗುತ್ತಿದ್ದಾರೆ, ಬಿಕಾರಿಗಳು ರಾಜರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ರಾಜಕಾರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ (ಜುಲೈ 20) ನಗರದ ಪುರಭವನದಲ್ಲಿ ಮಾಜಿ ಸಚಿವ ದಿ.ಬಿ.ಎ.ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಆತ್ಮಕತೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ರಾಜಕಾರಣದ ಬಗ್ಗೆ ಅಸಮಾನದ ದನಿಯಲ್ಲಿ ಮಾತನಾಡಿದ ಅವರು, ಆತ್ಮಕತೆಯ ಕೆಲವು ಭಾಗಗಳನ್ನು ಉಲ್ಲೇಖಿಸಿ ಬಿಜೆಪಿ ಸರ್ಕಾರದ ನಡವಳಿಕೆಯ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮುಸ್ಲಿಂ ಅಗಿ ಜನಿಸಿದ್ದರೂ ಮೊಹಿದೀನ್ ಅವರು ಧರ್ಮಾತೀತ ಜನನಾಯಕನಾಗಿ ಕಾರ್ಯನಿರ್ವಹಿಸಿದ್ದರು ಎಂದು ಗುಣಗಾನ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401