ಬಹಿರಂಗ

ವಿಜಯ ಕರ್ನಾಟಕದ ಈ ವರದಿಗಾರನ ಬುದ್ಧಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ

Published

on

  • ಹರ್ಷಕುಮಾರ್ ಕುಗ್ವೆ

ಒಂದು ಮುಖ್ಯ ಸುದ್ದಿಯನ್ನು ವರದಿ ಮಾಡುವಾಗ ತನಗೆ ತಿಳುವಳಿಕೆ ಇಲ್ಲದ ವಿಷಯಗಳನ್ನು ಕನಿಷ್ಠ ಅಧ್ಯಯನ ಮಾಡಿಯಾದರೂ ಆ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ವರದಿ ಮಾಡಬೇಕಲ್ಲವೇ? ವಿಜ್ಞಾನಿಗಳು ಹೇಳಿರುವ ವಿಷಯಗಳನ್ನು ತಮಗೆ ಬೇಕಾದ ಹಾಗೆ ತಿರುಚಿ ವರದಿ ಮಾಡಿರುವ ಪರಿಯನ್ನು ಇಲ್ಲಿ ನೋಡಿ.

ಮೊನ್ನೆ ಮತ್ತು ನೆನ್ನೆ ವಿಜ್ಞಾನಿಗಳು ರಾಖಿಗರಿ ಪಳೆಯುಳಿಕೆ ಕುರಿತ ಅತ್ಯಂತ ಮಹತ್ವದ ಮಾಹಿತಿಯನ್ನು ಪ್ರಕಟಿಸಿದರು. ಸಿಂಧೂ ನದಿ ನಾಗರಿಕತೆಯನ್ನು ಕಟ್ಟಿದ್ದು ದಕ್ಷಿಣ ಏಷಿಯನ್ನರು ಎಂಬ ಸಂಗತಿ ಅದು. ಈ ದಕ್ಷಿಣ ಏಷಿಯನ್ನರು ಎಂದರೆ ಯಾರು ಎಂಬುದನ್ನು ಸಹ ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ. ಈ ದಕ್ಷಿಣ ಏಷಿಯನ್ನರಲ್ಲಿ ಆರ್ಯರು ಇರಲಿಲ್ಲ ಎಂಬ ಸಂಗತಿಯನ್ನು ಸಹ ವಿಜ್ಞಾನಿಗಳು ತಮ್ಮ ಅಧ್ಯಯನದ ಮೂಲಕ ತಿಳಿಸಿದ್ದಾರೆ. ಆದರೆ ವಿಜಯ ಕರ್ನಾಟದ ಈ  ವರದಿಗಾರ “ದಕ್ಷಿಣ ಏಷಿಯಾದ ಮೂಲ ನಿವಾಸಿಗಳೇ ಆರ್ಯರು” ಎಂದು ಬರೆದಿದ್ದಾನೆ.

ಇದೇ ವರದಿಗಾರ “ಹರಪ್ಪ ನಾಗರಿಕತೆಯ ಜಿನೋಮ್ ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳು ಅಥವಾ ಇರಾನಿ ಕೃಷಿಕ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ” ಎಂದು ವಿಜ್ಞಾನಿಗಳು ಹೇಳಿದ್ದನ್ನು ಸರಿಯಾಗಿ ದಾಖಲಿಸಿದ್ದಾನೆ. ಆದರೆ ಇವನಿಗೆ ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳೇ ಆರ್ಯರು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಕಳೆದ ಕೆಲವಾರು ವರ್ಷಗಳಿಂದ ಮನುಷ್ಯನ ಜಿನೋಮ್ ಕುರಿತು ಸಂಶೋಧನೆ ನಡೆಸುತ್ತಿರುವ ಸ್ಟೆಪ್ ಮೂಲದ ಆರ್ಯರಿಗೆ R1a1 ಎಂಬ ಸಂಕೇತವನ್ನೂ ನೀಡಿದ್ದಾರೆ. ಹಾಗೂ ಈ ಆರ್ಯರು ಭಾರತಕ್ಕೆ ವಲಸೆ ಬಂದಿದ್ದು ಸಿಂಧೂ ನದಿ ನಾಗರಿಕತೆಯ ಅವಸಾನದ ಸಮಯದಲ್ಲಿ ಎಂದೂ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಆರ್ಯರು ಭಾರತಕ್ಕೆ ಕುರ್ಗನ್ ಸಂಸ್ಕೃತಿ ಅಥವಾ ಯೂರೇಷಿಯಾದ ಪಾಂಟಿಕ್ ಸ್ಟೆಪ್ ಹುಲ್ಲುಗಾವಲಿನಲ್ಲಿ ವಿಕಾಸಗೊಂಡ ಯಾಮ್ನಾಯ ಸಂಸ್ಕೃತಿಯನ್ನು ತಂದವರು; ಭಾರತದ ಜನಸಂಖ್ಯೆಯಲ್ಲಿ ಕೆಲವು ಬ್ರಾಹ್ಮಣ ಪಂಗಡಗಳು ಈ ಸಂಸ್ಕೃತಿಯನ್ನು ಈಗಲೂ ಉಳಿಸಿಕೊಂಡಿದ್ದಾರೆ ಎಂಬ ಸಂಗತಿಯನ್ನು ಪ್ರಖ್ಯಾತ ತಳಿ ವಿಜ್ಞಾನಿ ಡೇವಿಡ್ ರೀಚ್ ಅವರೇ ತಿಳಿಸಿದ್ದಾರೆ.

ವಂಶವಾಹಿಗಳ ಅಧ್ಯಯನದ ಮೂಲಕ ವಿಜ್ಞಾನಿಗಳು ಭಾರತದ ಪ್ರಾಚೀನ ನಾಗರಿಕತೆಯಲ್ಲಿ ಆರ್ಯರ ಪಾತ್ರವೇ ಇಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ಸಿಂಧೂ ನದಿ ನಾಗರಿಕತೆಯಲ್ಲಿ ಆರ್ಯರ ಪಾತ್ರ ಇತ್ತು ಎಂಬಂತೆ ತಿರುಚಿ ಬರೆಯು ಪತ್ರಕರ್ತರ ಉದ್ದೇಶವಾದರೂ ಏನಾಗಿರಬಹುದು?

ಹೆಚ್ಚಿನ ಮಾಹಿತಿಗೆ ಇದನ್ನೂ ಓದಿ

https://kannada.truthindia.news/2019/09/06/scientists-finally-reveal-rakhigarhi-findings/

ಓದು ಪ್ರಕಾಶನ ಪ್ರಕಟಿಸಿದ ಪುಸ್ತಕ ‘ಹರಪ್ಪ‌ ಡಿ ಎನ್ ಎ ನುಡಿದ ಸತ್ಯ’

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version