ರಾಜಕೀಯ
ವಿಜಯಪುರ : ಸಂಸದರ ನಿಧಿಗೆ ಕನ್ನ ಹಾಕಿದ ಭೂಪ
ಸುದ್ದಿದಿನ ಡೆಸ್ಕ್ : ವಿಜಯಪುರ ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ತಯಾರಿಸಿ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿದ್ದಾನೆ ಭೂಪ.ಶಾಲಾ ಆಡಳಿತ ಮಂಡಳಿಯೊಂದರ ಪದಾಧಿಕಾರಿಯು ಈ ಕೃತ್ಯವನ್ನು ಎಸಗಿದ್ದಾನೆ.
ಈತ ವಿಜಯಪುರ ನಗರದ ಪ್ರತಿಷ್ಠಿತ ಬಂಜಾರಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಜಿ. ರಾಠೋಡ. ಇವನ ವಿರುದ್ಧ ಆರೋಪ, ದೂರು ದಾಖಲಾಗಿ್ದೆದೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ವತಃ ಬೆಚ್ಚಿ ಬಿದ್ದಿದ್ದಾರೆ ವಿಜಯಪುರ ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ. 2016 ರಿಂದ ಈವರೆಗೆ ಸುಮಾರು 6 ಕಾಮಗಾರಿಗಳನ್ನು ಸಚಿವರ ಲೆಟರ್ ಹಡ್ ನಲ್ಲಿ ಫೋರ್ಜರಿ ಮಾಡಿ ತನ್ನ ಶಿಕ್ಷಣ ಸಮಸ್ಥೆಯಲ್ಲಿ ಕೆಲಸ ಮಾಡಿಸಿಕೊಂಡ ಆರೋಪವೂ ವ್ಯಕ್ತವಾಗಿದೆ ಆರೋಪಿ ಕೆ. ಜಿ. ರಾಠೋಡ ಮೇಲೆ. ಈಗ ಈತ ಪೊಲೀಸರ ವಶದಲ್ಲಿದ್ದು,ತನಿಖೆಯ ನಂತರ ಮತ್ತಷ್ಟು ವಿಷಯ ಬಹಿರಂಗ ನಿರೀಕ್ಷೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401