ಸಿನಿ ಸುದ್ದಿ

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು : ಬೆಂಕಿ ನಂದಿಸಲು ಅಭಿಮಾನಿಗಳಿಗೆ ಕೈ ಜೋಡಿಸಲು ಮನವಿ ಮಾಡಿದ ‘ಡಿ ಬಾಸ್’

Published

on

ಸುದ್ದಿದಿನ ಡೆಸ್ಕ್ : ಶನಿವಾರ ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಪರಿಣಾಮ ನೋರಾರು ಎಕರೆ ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ.

ಕಾಡ್ಗಿಚ್ಚಿನ ಬೆಂಕಿ ಕ್ಷಣಕ್ಷಣಕ್ಕೂ ತನ್ನ ಕೆನ್ನಾಲಗೆಯನ್ನು ಚಾಚುತ್ತಿದೆ. ಇಂತಹ ವೇಳೆಯಲ್ಲಿ ಈ ಕಾಡ್ಗಿಚ್ಚನ್ನು ತಡೆಯುವ ಕೆಲಸವೂ ನಿರಂತರವಾಗಿ ಸಾಗಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಡ್ಗಿಚ್ಚಿನ ಬಗ್ಗೆ ವಿಷಾದ ವ್ಯಕ್ತ ಪಡಿಸಿ ಟ್ಟೀಟ್ ಮಾಡಿದ್ದಾರೆ.

ಕಾಡ್ಗಿಚ್ಚಿನ ಪರಿಣಾಮ ವನ್ಯಜೀವಿಗಳ ಸಂಕುಲಕ್ಕೆ ತೊಂದರೆತುಂಟಾಗಿದ್ದು, ಈ ಕಾಡ್ಗಿಚ್ಚನ್ನು ನಂದಿಸುವ ಹಾಗೂ ಈ ಅಭಯಾರಣ್ಯವನ್ನು ಸಾಧ್ಯವಾದಷ್ಟು ಪುನರ್ ನಿರ್ಮಾಣ ಮಾಡುವ ಕಾರ್ಯದಲ್ಲಿ ತಮ್ಮ ಅಭಿಮಾನಿಗಳು ಕೈ ಜೋಡಿಸುವುದರ ಮೂಲಕ ಸಹಾಯ ಮಾಡಬೇಕೆಂದು ಕರೆ ನೀಡಿದ್ದಾರೆ.

ದರ್ಶನ್ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version