ನೆಲದನಿ

ಯಕ್ಷಗಾನ ಕಲಾವಿದ ಮಹಾಬಲ ನಾಯ್ಕ ಬೇಳಂಜೆ ಬದುಕಿನ ಸಂಕಥನ

Published

on

ಭೂಮಿಯ ಮೇಲೆ ಮಾನವನ ಉಗಮದೊಂದಿಗೆ ಕಲೆಗಳು ಕೂಡ ಮಾನವನ ಬದುಕಿನ ಭಾಗವಾಗಿ ಬೆಳೆದುಕೊಂಡು ಬಂದಿವೆ. ಹೀಗಾಗಿ ಮಾನವ ಮತ್ತು ಕಲೆಗೂ ಭಾವನಾತ್ಮಕವಾದ ನಂಟು ಬೆಳೆದುಬಂದಿದೆ. ಮಾನವನ ನಿರಂತರವಾದ ವಿಕಾಸದಲ್ಲಿ ಈ ಜನಪದ ಕಲೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ತಳ ಸಮುದಾಯಗಳಲ್ಲಿ. ಹೀಗಾಗಿ ಭಾರತದ ಬಹುತೇಕ ಜನಪದ ಕಲೆಗಳು ತಳ ಸಮುದಾಯಗಳಿಂದಲೆ ಜೀವಂತಿಕೆಯನ್ನು ಪಡೆದುಕೊಂಡಿವೆ. ಈಗಲೂ ಈ ಕಲೆಗಳು ತನ್ನ ಜೀವಂತಿಕೆಯನ್ನು ಪಡೆದುಕೊಂಡಿರುವುದು ಬಡತನದ ಬದುಕಿನಲ್ಲಿಯೇ. ಹೀಗಾಗಿ ಬಡತನ ಹಾಗೂ ಜನಪದ ಕಲೆಗಳಿಗೆ ನಿಕಟವಾದ ಸಂಬಂಧವೊಂದು ಬಿಡದ ನಂಟಾಗಿ ಬೆಳೆದುಕೊಂಡು ಬಂದಿದೆ. ಇಂತಹ ಜಾನಪದ ಕಲೆಗಳಲ್ಲಿ ಯಕ್ಷಗಾನವು ಒಂದು ಪ್ರಮುಖ ಕಲೆಯಾಗಿ ಬೆಳೆದುಕೊಂಡು ಬಂದಿದೆ. ಯಕ್ಷಗಾನವು ಮೂಲತಃ ಶೂದ್ರಾತಿ ಶೂದ್ರರ ಕಲೆಯಾಗಿ ಬೆಳೆದು ಬಂದಿದೆ. ಇಂತಹ ಸಾಮಾಜಿಕ ಸಮಾನತೆಯಿಂದ ವಂಚಿತವಾದ ಸಮುದಾಯವೊಂದು ಪಾಲಿಸಿ, ಪೋಷಿಸಿಕೊಂಡು ಬಂದ ಜನಪದ ಕಲೆಯೊಂದು ಇಂದು ಜಾಗತಿಕ ಮಟ್ಟದಲ್ಲಿ ತನ್ನ ಅನನ್ಯತೆಯನ್ನು, ಕೀರ್ತಿಯನ್ನು ಗಳಿಸಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಇಂತಹ ಕಲೆಯ ಶ್ರೀಮಂತಿಕೆ ಹಲವಾರು ತಳಸಮುದಾಯದ ಕಲಾವಿದರು ತಮ್ಮ ಶ್ರಮವನ್ನು ಧಾರೆಯೆರೆಯುತ್ತಿದ್ದಾರೆ. ಇಂತಹ ತಳಸಮುದಾಯದ ಬಡಗುತಿಟ್ಟು ಯಕ್ಷಗಾನ ಕಲಾವಿದರಲ್ಲಿ ಬೇಳಂಜೆ ಮಹಾಬಲ ನಾಯ್ಕರು ಒಬ್ಬರಾಗಿದ್ದಾರೆ.

ಶ್ರೀಯುತ ಮಹಾಬಲ ನಾಯ್ಕರು ಹಿರಿಯ ಮದ್ದಳೆ ಕಲಾವಿದರಾದ ಶ್ರೀ ಬೇಳಂಜೆ ತಿಮ್ಮಪ್ಪ ನಾಯ್ಕ ಹಾಗೂ ಶ್ರೀಮತಿ ವೇದಾವತಿ ಅವರ ಸುಪುತ್ರರಾಗಿ 13 ಜುಲೈ 1958 ರಲ್ಲಿ ಕಾರ್ಕಳ ತಾಲ್ಲೂಕಿನ ಬೇಳಂಜೆ ಎಂಬಲ್ಲಿ ಜನಿಸಿದರು. ಶ್ರೀಯುತ ಮಹಾಬಲ ನಾಯ್ಕರು ತಮ್ಮ ವಿದ್ಯಾಭ್ಯಾಸವನ್ನು ಆರನೇ ತರಗತಿಗೆ ಮೊಟಕುಗೊಳಿಸಿ, ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಬದುಕಿನೆಡೆಗೆ ಸಾಗದರು. ಮಹಾಬಲ ನಾಯ್ಕರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಜಾತಿಯಲ್ಲಿ ‘ಮರಾಠಿ’ಗೆ ಸೇರಿದ್ದು, ತಳ ಸಮುದಾಯದಿಂದ ಬಂದವರಾಗಿದ್ದಾರೆ. ತಳ ಸಮುದಾಯಗಳಿಗೂ ಮತ್ತು ಜನಪದ ಕಲೆಗಳಿಗೆ ಒಂದು ಅನ್ಯೋನ್ಯವಾದ ಸಂಬಂಧವು ಚರಿತ್ರೆಯುದ್ಧಕ್ಕೂ ಬೆಳೆದುಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ತಳ ಸಮುದಾಯಗಳು ಕಲೆಯ ಉಳಿವಿಗಾಗಿ ಅವಿರತವಾದ ಶ್ರಮವನ್ನು ವ್ಯಕ್ತಪಡಿಸುವ ಮೂಲಕವಾಗಿ ಹಲವಾರು ಕಲೆಗಳ ಶ್ರೀಮಂತಿಕೆ ಕಾರಣೀಭೂತರಾಗಿದ್ದಾರೆ. ಇಲ್ಲಿ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ಕಲೆಯೊಂದಿಗೆ ಒಡನಾಟವನ್ನು ಬೆಳೆಸಿಕೊಂಡು ಬಂದಿರುವುದು ಕೂಡ ಇದೆ ಹಾದಿಯಲ್ಲಿ. ಶೂದ್ರಾತಿ ಶೂದ್ರರ ಕಲೆಯೆಂದೆ ಗುರುತಿಸಿಕೊಂಡು ಬಂದಿರುವ ಯಕ್ಷಗಾನವು ಇಂದು ತನ್ನ ಅನನ್ಯತೆಯನ್ನು ಕಾಯ್ದುಕೊಂಡಿರುವುದು ತಳ ಸಮುದಾಯಗಳ ಮೂಲಕವಾಗಿಯೇ. ಈ ಕಲೆಯು ಇಂದಿನ ಜಾಗತಿಕ ಕ್ಷೇತ್ರಕ್ಕೆ ತನ್ನನ್ನು ತೆರೆದುಕೊಂಡು ದೇಶ, ವಿದೇಶಗಳಲ್ಲಿ ತನ್ನ ಅಸ್ಮಿತೆಯನ್ನು ಮೆರೆದಿರುವುದಕ್ಕೆ ಹಾಗೂ ರಾರಾಜಿಸುವುದಕ್ಕೆ ಈ ತಳ ಸಮುದಾಯಗಳ ಶ್ರಮವು ಮಹತ್ತರವಾದುದಾಗಿದೆ.

ಶ್ರೀಯುತ ಮಹಾಬಲ ನಾಯ್ಕರು ಈ ಕಲೆಯನ್ನು ಒಂದು ಹವ್ಯಾಸವಾಗಿ ಬಾಲ್ಯದ ದಿನಮಾನಗಳಲ್ಲಿ ಮೈಗೂಡಿಸಿಕೊಂಡರು. ಇದಕ್ಕೆ ಶ್ರೀಯುತ ಮಹಾಬಲ ನಾಯ್ಕ ಅವರ ತಂದೆಯವರಾದ ಬೇಳಂಜೆ ತಿಮ್ಮಪ್ಪ ನಾಯ್ಕರು ಪ್ರಮುಖ ಕಾರಣಕರ್ತರಾಗಿದ್ದಾರೆ. ಬೇಳಂಜೆ ತಿಮ್ಮಪ್ಪ ನಾಯ್ಕರು ಹೆಸರಾಂತ ಮದ್ದಳೆಗಾರರಾಗಿ ಕರಾವಳಿ ಭಾಗದಲ್ಲಿ ಹೆಸರು ಮಾಡಿದವರು. ಇವರು ಯಕ್ಷಗಾನದ ದಿಗ್ಗಜರೆಂದು ಗುರುತಿಸಿಕೊಂಡಿರುವ ‘ಕಾಳಿಂಗ ನಾವಡ’ ಅವರ ಗುರುಗಳಾಗಿಯೂ ತಮ್ಮ ಸೇವೆಯನ್ನು ಮುನ್ನಡೆಸಿಕೊಂಡು ಬಂದವರು. ಶ್ರೀಯುತ ತಿಮ್ಮಪ್ಪ ನಾಯ್ಕರು 1978 ರಲ್ಲಿಯೇ ಕಾಳಿಂಗ ನಾವಡರ ಸಹಭಾಗಿತ್ವದಲ್ಲಿ ‘ಹಂಗರಕಟ್ಟೆ ಕಲಾ ಮೇಳ’ವನ್ನು ಆರಂಭಿಸುವ ಮೂಲಕವಾಗಿ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದವರು. ಆ ಮೂಲಕವಾಗಿ ಯಕ್ಷಗಾನ ರಂಗಕ್ಷೇತ್ರದಲ್ಲಿ ತಿಮ್ಮಪ್ಪ ನಾಯ್ಕ ಅವರ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ ಕಾರಣ ತಂದೆಯವರ ಹಾದಿಯಲ್ಲಿಯೇ ಮುನ್ನಡೆದ ಇವರಿಗೆ ಈ ಕಲೆಯು ಬಂದು ಹವ್ಯಾಸವಾಗಿ ನಂತರದಲ್ಲಿ ಪ್ರವೃತ್ತಿಯಾಗಿ ಬೆಳೆದು ಬಂದಿದೆ.

ಪ್ರೇರಣೆ ಮತ್ತು ಪ್ರಭಾವ

ಶ್ರೀಯುತ ಮಹಾಬಲ ನಾಯ್ಕ ಅವರ ಯಕ್ಷಗಾನ ರಂಗಕಲೆಗೆ ಪ್ರಮುಖವಾಗಿ ಪ್ರೇರಣೆಯಾದವರು ಇವರ ತಂದೆಯವರಾದ ಬೇಳಂಜೆ ತಿಮ್ಮಪ್ಪ ನಾಯ್ಕರು. ಬೇಳಂಜೆ ತಿಮ್ಮಪ್ಪ ನಾಯ್ಕರು ಹೆಸರಾಂತ ಮದ್ದಳೆಗಾರರಾಗಿ ಕರಾವಳಿ ಭಾಗದಲ್ಲಿ ತನ್ನದೆ ಆದ ಛಾಪು ಮೂಡಿಸಿದವರು. ಇವರು ಯಕ್ಷಗಾನದ ದಿಗ್ಗಜರೆಂದು ಗುರುತಿಸಿಕೊಂಡಿರುವ ‘ಕಾಳಿಂಗ ನಾವಡ’ ಅವರ ಗುರುಗಳಾಗಿಯೂ ತಮ್ಮ ಸೇವೆಯನ್ನು ಮುನ್ನಡೆಸಿಕೊಂಡು ಬಂದವರು. ಶ್ರೀಯುತ ತಿಮ್ಮಪ್ಪ ನಾಯ್ಕರು 1978 ರಲ್ಲಿಯೇ ಕಾಳಿಂಗ ನಾವಡರ ಸಹಭಾಗಿತ್ವದಲ್ಲಿ ‘ಹಂಗರಕಟ್ಟೆ ಕಲಾ ಮೇಳ’ವನ್ನು ಆರಂಭಿಸುವ ಮೂಲಕವಾಗಿ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ತಿಮ್ಮಪ್ಪ ನಾಯ್ಕರು ತಮ್ಮ ಕಡು ಬಡತನದ ನಡುವೆಯೇ ಯಕ್ಷಗಾನ ರಂಗಕಲೆಯ ಮೇಲಿನ ಕಾಳಜಿ ಹಾಗೂ ಶ್ರದ್ಧೆಯಿಂದಾಗಿ ತಮ್ಮದೇ ಆದ ಪ್ರತ್ಯೇಕ ಕಲಾಮೇಳವನ್ನು ತೆರೆಯುವ ಮುಖಾಂತರ ವೃತ್ತಿ ರಂಗಭೂಮಿಯನ್ನು ಆರಂಭಿಸಿದರು. ಆ ಮೂಲಕವಾಗಿ ಯಕ್ಷಗಾನ ರಂಗಕ್ಷೇತ್ರದಲ್ಲಿ ತಿಮ್ಮಪ್ಪ ನಾಯ್ಕ ಅವರ ಹೆಸರು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ ಕಾರಣ ತಂದೆಯವರ ಹಾದಿಯಲ್ಲಿಯೇ ಮುನ್ನಡೆದ ಇವರಿಗೆ ಈ ಕಲೆಯು ಬಂದು ಹವ್ಯಾಸವಾಗಿ ನಂತರದಲ್ಲಿ ಪ್ರವೃತ್ತಿಯಾಗಿ ಬೆಳೆದು ಬಂದಿದ್ದು ಮಾತ್ರವಲ್ಲದೆ, ಇದೊಂದು ವೃತ್ತಿಯಾಗಿಯೂ ಮುಂದುವರೆಯಿತು.
ಶ್ರೀಯುತ ಮಹಾಬಲ ನಾಯ್ಕರು ಈ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸಿದ್ಧಗೊಳ್ಳಲು ಹಲವಾರು ಗುರು ಮಹಾಶಯರು ಕಾರಣೀಭೂತರಾಗಿದ್ದಾರೆ. ಇವರ ತಂದೆಯವರಾದ ತಿಮ್ಮಪ್ಪ ನಾಯ್ಕರಿಂದ ಯಕ್ಷಗಾನ ಕ್ಷೇತ್ರದ ಬಗೆಗೆ ಆಸಕ್ತಿಯನ್ನು ರೂಡಿಸಿಕೊಂಡರು ಸಹ, ಇವರು ತಂದೆಯಂತೆ ಸಂಗೀತ ಪ್ರಕಾರವಾದ ಮದ್ದಳೆ ಕ್ಷೇತ್ರವನ್ನು ತಮ್ಮ ವೃತ್ತಿಯಾಗಿ ಮತ್ತು ಹವ್ಯಾಸವಾಗಿ ಮುಂದುವರೆಸಲಿಲ್ಲ. ಇವರಿಗೆ ಹೆಚ್ಚು ಆಕರ್ಷಣಿಯವಾದ ಪ್ರಕಾರವೆಂದರೆ ಅದು ವೇಷಗಾರಿಕೆ. ಆದ್ದರಿಂದ ಶ್ರೀಯುತ ಮಹಾಬಲ ನಾಯ್ಕರಿಗೆ ಪೌರಾಣಿಕವಾದ ಹಲವಾರು ಪಾತ್ರಗಳಲ್ಲಿ ವಿಶೇಷವಾದ ಆಸಕ್ತಿಯಿತ್ತು. ಆದ ಕಾರಣ ಇವರು ಸಂಗೀತ ಪ್ರಕಾರದಿಂದ ದೂರ ಸರಿದು ಪಾತ್ರಧಾರಿಯಾಗಿ ತಮ್ಮನ್ನು ಗುರುತಿಸಿಕೊಂಡರು. ಈ ಪಾತ್ರಧಾರಿಕೆಯಲ್ಲಿ ಪರಿಣಿತಿಯನ್ನು ಗಳಿಸಲು ಹಲವಾರು ಗುರುಗಳ ಮಾರ್ಗದರ್ಶನವನ್ನು ಪಡೆದಿದ್ದಾರೆ.

ಶ್ರೀಯುತ ಮಹಾಬಲ ನಾಯ್ಕರು ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಳ್ಳಲು ಮುಂದಾದಾಗ ಈ ಕಲೆಯನ್ನು ಮೈಗೂಡಿಸಿಕೊಳ್ಳಲು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದ ತರುವಾಯದಲ್ಲಿ ದಶಾವತಾರಿ ಗರು ವೀರಭದ್ರನಾಯಕ್ ಇವರ ಮಾರ್ಗದರ್ಶನದಲ್ಲಿ ಕಲಾ ಬದುಕಿಗೆ ಪಾದಾರ್ಪಣೆ ಮಾಡಿದರು. ಹೀಗೆ ಆರಂಭವಾದ ಇವರ ಕಲಾ ದೀಕ್ಷೇಯು ನಂತರದಲ್ಲಿ ನೀಲಾವರ ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಕಲೆಯ ಬಗೆಗಿನ ಸೂಕ್ಷ್ಮ ಸನ್ನೀವೇಶಗಳ ಕುರಿತು ತರಬೇತಿ ಪಡೆದರು. ನಂತರದಲ್ಲಿ ಹಿರಿಯಡಕ ಗೋಪಾಲರಾಯರ ಶಿಷ್ಯರಾಗಿಯೂ ಸೇವೆಯನ್ನು ಮುಂದುವರೆಸಿದ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ರಂಗಕಲೆಯಲ್ಲಿ ಅಭೂತಪೂರ್ವವಾದ ಸಿದ್ಧಿಯನ್ನು ಮೈಗೂಡಿಸಿಕೊಂಡರು. ಈ ಎಲ್ಲಾ ಗುರು ಮಹಾಶಯರಿಂದ ಶಿಷ್ಯನಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕ ಅವರು ತಮ್ಮ ತಂದೆಯವರಾದ ಶ್ರೀಯುತ ತಿಮ್ಮಪ್ಪ ನಾಯ್ಕರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪೂರ್ಣ ಪ್ರಮಾಣದ ಕಲಾ ಬದುಕಿಗೆ ತಮ್ಮನ್ನು ತೆರೆದುಕೊಂಡು, ಸುಮಾರು ನಲವತ್ತೇಲು ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಅನುಪಮವಾದ ಸಾಧನೆ ಮಾಡುತ್ತ ಬಂದಿದ್ದಾರೆ. ಹೀಗೆ ಹಲವಾರು ಗುರುಗಳ ಶಿಷ್ಯತ್ವದಲ್ಲಿ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಾ ಸೇವೆ ಮತ್ತು ವೃತ್ತಿ ಜೀವನ

ಶ್ರೀಯುತ ಮಹಾಬಲ ನಾಯ್ಕರು ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಳ್ಳಲು ಮುಂದಾದಾಗ ಈ ಕಲೆಯನ್ನು ಮೈಗೂಡಿಸಿಕೊಳ್ಳಲು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಇಲ್ಲಿ ದಶಾವತಾರಿ ಗರು ವೀರಭದ್ರನಾಯಕ್ ಇವರ ಮಾರ್ಗದರ್ಶನದಲ್ಲಿ ಕಲಾ ಬದುಕಿಗೆ ಪಾದಾರ್ಪಣೆ ಮಾಡಿ, ನೀಲಾವರ ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಕಲೆಯ ಬಗೆಗಿನ ಸೂಕ್ಷ್ಮ ಸನ್ನೀವೇಶಗಳ ಕುರಿತು ತರಬೇತಿ ಪಡೆದರು. ನಂತರದಲ್ಲಿ ಹಿರಿಯಡಕ ಗೋಪಾಲರಾಯರ ಶಿಷ್ಯರಾಗಿಯೂ ಸೇವೆಯನ್ನು ಮುಂದುವರೆಸಿದ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ರಂಗಕಲೆಯಲ್ಲಿ ಅಭೂತಪೂರ್ವವಾದ ಸಿದ್ಧಿಯನ್ನು ಮೈಗೂಡಿಸಿಕೊಂಡರು. ಈ ಎಲ್ಲಾ ಗುರು ಮಹಾಶಯರಿಂದ ಶಿಷ್ಯನಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕ ಅವರು ತಮ್ಮ ತಂದೆಯವರಾದ ಶ್ರೀಯುತ ತಿಮ್ಮಪ್ಪ ನಾಯ್ಕರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪೂರ್ಣ ಪ್ರಮಾಣದ ಕಲಾ ಬದುಕಿಗೆ ತಮ್ಮನ್ನು ತೆರೆದುಕೊಂಡು, ಸುಮಾರು ನಲವತ್ತೇಲು ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಅನುಪಮವಾದ ಸಾಧನೆ ಮಾಡುತ್ತ ಬಂದಿದ್ದಾರೆ.
ಹೀಗೆ ಆರಂಭವಾದ ಶ್ರೀಯುತ ಮಹಾಬಲ ನಾಯ್ಕರ ನಿರಂತರ ಕಲಾ ಸೇವೆಯು ಹಲವಾರು ಕಲಾ ಮೇಳಗಳಲ್ಲಿ ಮುಂದುವರೆದಿದೆ. ಶ್ರೀಯುತ ಮಹಾಬಲ ನಾಯ್ಕರು ಸೇವೆಗೈದ ಕ್ಷೇತ್ರ ಹಾಗೂ ಮೇಳಗಳು ಈ ಮುಂದಿನಂತಿವೆ; ಆರಂಭದಲ್ಲಿ ಅಮೃತೇಶ್ವರಿ ಕಲಾ ಮೇಳದ ಮೂಲಕವಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ರೀಯುತ ಮಹಾಬಲ ನಾಯ್ಕರು ಹಿರಿಯಡಕ, ಪೆರ್ಡೂರು ಕಲಾ ಮೇಳದಲ್ಲಿ ಒಂದು ವರ್ಷ ಸೇವೆಯನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ಮಾರಣಕಟ್ಟೆ ಕಲಾ ಮೇಳದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ಕಲಾವಿದರಾಗಿ ಬಣ್ಣದ ಲೋಕದಲ್ಲಿ ರಂಜಿಸಿರುತ್ತಾರೆ. ಹಾಗೆಯೇ ಆರಂಭಿಕ ಹಂತದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಅಮೃತೇಶ್ವರಿ ಕಲಾ ಮೇಳದಲ್ಲಿ ಸುಮಾರು ಐದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವ ಮೂಲಕವಾಗಿ ಸಾಕಷ್ಟು ವಿದ್ವತ್ತನ್ನು ಗಳಿಸಿರುತ್ತಾರೆ. ನಂತರದಲ್ಲಿ ಸೌಕೂರು ಕಲಾ ಮೇಳದಲ್ಲಿ ಎರಡು ವರ್ಷಗಳ ಕಾಲ ಕಲಾವಿದರಾಗಿ ತನ್ನ ಸೇವೆಯನ್ನು ಸಲ್ಲಿಸಿರುತ್ತಾರೆ. ಹಾಗೆಯೇ ಮಡಾಮಕ್ಕಿ ಕಲಾ ಮೇಳದಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಕಲಾವಿದರಾಗಿ ಬಣ್ಣದ ಲೋಕದಲ್ಲಿ ಮೆರೆದಿರುತ್ತಾರೆ. ಹೀಗೆ ಹಲವಾರು ಕಡೆಗಳಲ್ಲಿ ತಮ್ಮ ಸಾಧನೆಗೈದ ಶ್ರೀಯುತ ಮಹಾಬಲ ನಾಯ್ಕರು ಮಂದಾರ್ತಿ ಕಲಾ ಮೇಳದಲ್ಲಿ ಸುಮಾರು ಇಪ್ಪತೈದು ವರ್ಷಗಳ ಕಲಾ ಸೇವೆಯಲ್ಲಿ ಮುಂದುವರೆದಿದ್ದು, ಇಂದಿಗೂ ಇದೇ ಮಂದಾರ್ತಿ ಕಲಾ ಮೇಳದಲ್ಲಿ ಕಲಾವಿದರಾಗಿ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಾ ಬಂದಿದ್ದಾರೆ. ಹೀಗೆ ವಿವಿಧ ಕಲಾಮೇಳಗಳಲ್ಲಿ ಶ್ರೀಯುತ ಮಹಾಬಲ ನಾಯ್ಕರು ತಮ್ಮ ನಲವತ್ತೇಳು ವರ್ಷಗಳ ಕಾಲದ ಯಕ್ಷಕೃಷಿಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.

ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ಕ್ಷೇತ್ರದಲ್ಲಿನ ತಮ್ಮ ನಿರಂತರ ಹೋರಾಟದಲ್ಲಿ ಹಲವು ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕವಾಗಿ ಜೀವ ತುಂಬಿದ್ದಾರೆ. ಇಂತಹ ಪಾತ್ರಗಳಲ್ಲಿ ಪೌರಾಣಿಕ ಪಾತ್ರಗಳೆ ಹೆಚ್ಚಾಗಿವೆ. ಶ್ರೀಯುತ ಮಹಾಬಲ ನಾಯ್ಕರು ನಿರ್ವಹಿಸಿದ ಪ್ರಮುಖವಾದ ಪಾತ್ರಗಳೆಂದರೆ ಬಬ್ರುವಾಹನ, ಅಭಿಮನ್ಯು, ವೃಷಸೇನ, ಲವ-ಕುಶ, ಶ್ರೀಕೃಷ್ಣ, ವಿದ್ಯುನ್ಮಾಲಿ, ಆಂಜನೇಯ ಹಾಗೂ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀಯುತ ಮಹಾಬಲ ನಾಯ್ಕರು ತಮ್ಮಲ್ಲಿನ ಆಳಂಗ, ತಾರಕಸ್ವರತ್ರಾಣ ಹಾಗೂ ಚುರುಕಿನ ಪದಗತಿಗಳಿಂದ ಕಲಾಭಿಮಾನಿಗಳು, ಕಲಾ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಹೀಗೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕವಾಗಿ ಸುಮಾರು ಐದು ದಶಕಗಳ ಕಾಲ ನಿರಂತರವಾದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಶ್ರೀಯುತ ಮಹಾಬಲ ನಾಯ್ಕರು ತಮ್ಮ ಅರವತ್ತು ವಯಸ್ಸಿನ ಗಡಿಯಲ್ಲಿಯೂ ತುಂಬು ಹುಮ್ಮಸ್ಸಿನಿಂದ ಕಲಾ ಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ.

ಗೌರವ, ಸನ್ಮಾನ ಹಾಗೂ ಪ್ರಶಸ್ತಿ

ಶ್ರೀಯುತ ಮಹಾಬಲ ನಾಯ್ಕರು ತಮ್ಮ ನಿರಂತರವಾದ ನಲವತ್ತೇಳು ವರ್ಷಗಳ ಕಲಾ ಸೇವೆಯಿಂದಾಗಿ ಈ ಕ್ಷೇತ್ರದ ಪ್ರಬುದ್ಧ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಈ ಕಲಾ ಸೇವೆಯನ್ನು ಗಮನಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಹಲವಾರು ಸಂಘ ಸಂಸ್ಥೆಗಳು ಹಲವಾರು ಸನ್ಮಾನ, ಗೌರವ ಹಾಗೂ ಪುರಸ್ಕಾರವನ್ನು ನೀಡಿ ಇವರನ್ನು ಗೌರವಿಸುತ್ತ ಬಂದಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಕಾರ್ಕಳದ ಜೇಸೀ ಸಪ್ತಾಹ ಹಾಗೂ ಹೆಬ್ರಿಯ ಮರಾಠಿ ಸಂಘದ ವತಿಯಿಂದ ಇವರಿಗೆ ಗೌರವ ಹಾಗೂ ಪುರಸ್ಕಾರಗಳು ಲಭಿಸಿವೆ. ಶ್ರೀಯುತ ಮಹಾಬಲ ನಾಯ್ಕರು ಇಂದು ತಮ್ಮ ಧರ್ಮಪತ್ನಿ ಬೇಬಿ, ಮಕ್ಕಳಾದ ದಿವ್ಯಾ, ದೀಪಾ ಹಾಗೂ ದಿವಾಕರ ಇವರ ಜೊತೆಗೆ ಕೌಟುಂಬಿಕ ಜೀವನವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇವರೊಂದಿಗೆ ಯಕ್ಷಗಾನ ಕೃಷಿಯಲ್ಲಿ ನಿರಂತರವಾದ ಸಾಧನೆಯಲ್ಲಿ ಮುಂದುವರೆಯುತ್ತಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version