ಲೋಕಾರೂಢಿ
ಕಸಾಪಕ್ಕೆ ಗ್ರಹಣ ಹಿಡಿದಿರುವ ‘ಮನು ಬಳೆಗಾರ’ ಬಗ್ಗೆ ನೀವು ಏನು ಹೇಳ್ತೀರಾ ?
ಬಿಡಿಗಾಸಿನ ಬೆಲೆಯೂ ಇಲ್ಲದ ಮನುಬಳೆಗಾರ್ ಅವರು ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬಹುತೇಕ ಎಲ್ಲಾ ರಾಜಕಾರಣಿಗಳ ನಾಡಿ ಹೃದಯ ಬಡಿತ ಡೊಂಕ-ಡಸ್ಕು ತಿಳಿದು ತಿಂದುಂಡುಕೊಂಡೇ ಬೆಳೆದುಕೊಂಡು ಬಂದಿರೋ ಮಹಾನುಭಾವರು.
ಹಣ ಅಧಿಕಾರದ ದುರಾಸೆಗೆ ಯಾರ ಬೂಟನ್ನೂ ನೆಕ್ಕಲೂ ಹೇಸದ ನೀಚ ಆಧಿಕಾರಿಗಳ ಸಾಲಿಗೆ ಸೇರಲು ಅರ್ಹತೆ ಇರುವವರು ಈ ಮಹಾಪುರುಷರು.
ನಮ್ಮ ಹಿರಿಕಿರಿ ಕನ್ನಡ ಸಾಹಿತಿಗಳಿಗೆ ಏನೆಲ್ಲಾ ಆಮಿಷ ತೋರಿಸಿ ಎಲ್ಲರ ಬಾಯಿ ಮುಚ್ಚಿಸಿ ಕಸಾಪ ಅಧ್ಯಕ್ಷರ ಅಧಿಕಾರಾವಧಿ 3 ವರ್ಷ ಇದ್ದದ್ದ ತಿದ್ದಿ 5 ವರ್ಷಗಳ ಮಾಡಿಕೊಂಡು ಸಾಗುತ್ತಿರುವ ಅತ್ಯಂತ ಚಾಲಾಕೀ ಮನುಷ್ಯ.
ವರ್ಷದಿಂದಲೂ ನಾನು ಮತ್ತು ಒಂದಷ್ಟು ಗೆಳೆಯರು ದಾವಣಗೆರೆಯಲ್ಲಿ ‘ಕಸಾಪ ಆಜೀವ ಸದಸ್ಯರ ಸಮಾನ ಮನಸ್ಕ ವೇದಿಕೆ’ ಕಟ್ಟಿಕೊಂಡು ಈತನ ವಿರುದ್ಧ ಜಿಲ್ಲಾ ಕೋರ್ಟ್, ಹೈಕೋರ್ಟ್ ಮೆಟ್ಟಿಲೇರಿ, ಕಾಲ ಕಾಸು ಕಳೆದುಕೊಂಡು ಎಷ್ಟೆಲ್ಲಾ ಹೋರಾಡುತ್ತಲೇ ಬರುತ್ತಿದ್ದೇವೆ. ಆದರೆ ಈ ಮತ್ತೇರಿದ ಸಲಗನಿಗೆ ಅಂಕುಶ ಹಾಕಲಾಗುತ್ತಿಲ್ಲ.
ನಮ್ಮನ್ನು ಯಾವ ಹಿರಿಕಿರಿ ಬರಹಗಾರನೂ ಬೆಂಬಲಿಸಲಿಲ್ಲ. ಕನಿಷ್ಟ ನೈತಿಕ ಬೆಂಬಲ ಸಹ ನೀಡಲಿಲ್ಲ. ಇವರೆಲ್ಲರಿಗೂ ಬಳೆಗಾರ್ ಅದೇನೇನು ಆಮಿಷ ಒಡ್ಡಿದ್ದರೋ ಏನೋ ಆ ಭುವನೇಶ್ವರಿಯೇ ಬಲ್ಲಳು. ನಮ್ಮೊಡನಿದ್ದವರೂ ಮೆಲ್ಲಗೆ ಜಾರಿಕೊಂಡು ಈತನ ಪಟಾಲಂ ತೋರುವ ಆಮಿಷಗಳಿಗೆ ಬಲಿಯಾಗಿ ಹೋದರು.
ಈಗ ಶತಭಂಡತನದಿಂದ ಕಲ್ಬುರ್ಗಿಯಲ್ಲಿ 85 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಹೊರಟಿರುವ ಈ ಮನು ವ್ಯಾದಿ ಸರ್ವಾಧಿಕಾರಿಗೆ ಸರಕಾರವು ಕೋಟಿಗಟ್ಟಳೆ ನೀಡುವ ಇಡುಗಂಟ ಮೇಲೇ ಕಣ್ಣಿದೆ.
ಈ 85 ಪುಸ್ತಕಗಳ ಪ್ರಕಟಿಸಿದರೆ ತನ್ನ ಬೊಕ್ಕಸಕ್ಕೆ ಕನಿಷ್ಟ ಒಂದು ಕೋಟಿಯಷ್ಟು ನಿಧಿ ಕಡಿಮೆಯಾಗುತ್ತದೆ ಎಂಬ ಸತ್ಯ ತಿಳಿದು ಪುಸ್ತಕ ಪ್ರಕಟಣೆಗೇ ಎಳ್ಳು ನೀರು ಬಿಟ್ಟಿದ್ದಾರೆ.
ಈತನ ಹಿಂದೆ 30 ಜಿಲ್ಲೆಗಳ ಅಧ್ಯಕ್ಷರುಗಳು ತಾಳ ಗೋಣು ಹಾಕುತ್ತ ಸಾಲುಗಟ್ಟಿ ನಿಂತಿದ್ದಾರೆ. ಪಾಪ ಅವರಿಗೆ ಈತ ಅದೇನು ಆಮಿಷ ಒಡ್ಡಿ ಬಾಯಿ ಮುಚ್ಚಿಸಿದ್ದಾರೊ ಏನೋ ಯಾರುಬಲ್ಲರು?! ಅವಧಿ ಮುಗಿದ ಮೇಲೆ ತಿಳಿಯುತ್ತದೆ ನಿಜಬಣ್ಣ.
ಈ ಸರ್ವಾಧಿಕಾರಿ ಮನುವನ್ನು ಹಿಡಿದು ನಿಲ್ಲಿಸಿ ಕೇಳುವವರು ಯಾರೂ ಇಲ್ಲದಾಗಿದೆ. ಬಹುತೇಕ ಎಲ್ಲ ರಾಜಕಾರಣಿಗಳ ಹುಳುಕನ್ನೂ ಬಲ್ಲ ಈತ ಯಾರಿಗೆ ಹೇಗೆ ಚಳ್ಳೆ ಹಣ್ಣು ತಿನ್ನಿಸಬೇಕೆಂಬುದ ಚೆನ್ನಾಗಿ ಬಲ್ಲ ನಿಸ್ಸೀಮ.
ನಮ್ಮ ಕನ್ನಡ ಸಾಹಿತ್ಯಲೋಕದ ವಾರಸುದಾರರಿಗೆ ಇದೀಗ ಜ್ಣಾನೋದಯವಾದಂತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರಕಟಣೆ ಮಾಡುವುದಿಲ್ಲ ಎಂಬ ಹೇ(ಸಿ)ಳಿಕೆ ಹೊರಬೀಳುತ್ತಿದ್ದಂತೆಯೇ ಬಳೆಗಾರ ತಮ್ಮ ಮೂಗಿಗೆ ಹಚ್ಚಿದ್ದ ತುಪ್ಪ ವಾಸನೆ ಬರತೊಡಗಿದೆ.
ಯಾವುದೇ ಪ್ರಶಸ್ತಿ ಸನ್ಮಾನ ಮಾಡದೆ, ಕವಿಗೋಷ್ಠಿ ಅಧ್ತಕ್ಷ, ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡದೇ ಇರುವ ಕಾರಣ ಕೆಲವು ಸಾಹಿತಿಗಳು ತಮ್ಮ ಜಾಣ ನಿದ್ದೆಯಿಂದೆದ್ದು ಆಕಳಿಸುತ್ತ ಮನುವಿನ ಬೊಗಳೆತನದ ವಿರುದ್ಧ ಬಾಯಿ ಬಿಡುತ್ತಿದ್ದಾರೆ. ತಮಗೆ ಲಾಭವಾಗಿದ್ದರೆ ತೆಪ್ಪಗೆ ಅನುಭವಿಸಿ ಹೊಗಳುತ್ತಿದ್ದರು ಅನಿಸುತ್ತೆ.
ವೈಯಕ್ತಿಕ ಲಾಭಕ್ಕಾಗಿ ಕಸಾಪ ಮರ್ಯಾದೆ ತೆಗೆಯಲು ಮೂಖಸಾಕ್ಷಿಗಳಾಗಿ ನಿಂತ ಎಲ್ಲಾ ಸಾಹಿತ್ಯ ವೃಂದಕ್ಕೆ ಹಾಗೂ ಕಸಾಪ ಆಜೀವ ಸದಸ್ಯರಿಗೆ ಎನೆನ್ನಬೇಕು? ಕನ್ನಡ ಸಾಹಿತ್ಯ ಅಭಿಮಾನಿಗಳೆನ್ನೋಣವೋ ? ಅವಕಾಶವಾದಿಗಳೆನ್ನೋಣವೋ? ನಿರಭಿಮಾನಿಗಳೆನ್ನೋಣವೋ? ವೈಯಕ್ತಿಕ ಲಾಭ, ಸ್ವಾರ್ಥಸಾಧನೆಯ ಸಮಯಸಾಧಕತನವೆನ್ನೋಣವೋ?! ಕನ್ನಡ ನಾಡುನುಡಿಯ ಶಾರದಾ ಮಂದಿರ ಕಸಾಪಕ್ಕೆ ಗ್ರಹಣದಂತೆ ಹಿಡಿದಿರುವ ಮನು ಬಳೆಗಾರ ಬಗ್ಗೆ ನೀವು ಏನು ಹೇಳ್ತೀರಾ ?
ಆರ್. ಶಿವಕುಮಾರಸ್ವಾಮಿ ಕುರ್ಕಿ
ಮೊ: 8970948221
ಸುದ್ದಿದಿನ.ಕಾಂ|ವಾಟ್ಸಾಪ್|9980346243