ಬಹಿರಂಗ
‘ಸನಾತನ ಧರ್ಮ’ದ ವಿರುದ್ದ ಬಂಡೆದ್ದ ಬಸವಣ್ಣ..!
ಕುರಿ ಕೋಳಿ ಕಿರಿಮೀನು ತಿಂಬುವರಿಗೆಲ್ಲ ಕುಲಜ ಕುಲಜರೆಂದಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?.
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ;
ಸಿದ್ದಲಿಕೆಯಾಯಿತು,
ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು,ಸಗ್ಗಳೆಯ ನೀರನು
ಶುದ್ದವೆಂದು ಕುಡಿವ ಬುದ್ದಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ;
ಉರಿಲಿಂಗಪೆದ್ದಿಗಳ ಅರಸು ಒಲ್ಲನವ್ವಾ.
ಹನ್ನೆರಡನೆಯ ಶತಮಾನದ ಬಸವಣ್ಣನ ಸಮಕಾಲಿನಳಾದ ಶರಣೆ ಬಂಡಾಯಗಾರ್ತಿ ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ
ಕಾಳವ್ವೆಯ ಈ ವಚನ ಬ್ರಾಹ್ಮಣರು ನಿರ್ಮಿಸಿದ ಸನಾತನ ಅಮಾನುಷ ಪರಂಪರೆಯ ಜಾತಿ ಸಂಕುರವನ್ನು ಪುಡಿಮಾಡುತ್ತಾದೆ.
ಒಬ್ಬ ಕೆಳ ಜಾತಿಯ ದಲಿತ ಮಹಿಳೆ ಈ ರೀತಿಯ ಜಾತಿಯನ್ನೆ ಪ್ರಶ್ನಿಸುತ್ತಾಳೆ ಎಂದರೆ ಅವತ್ತಿನ ಆ ಕಾಲದ ಚಳುವಳಿಯ ಧೈರ್ಯವನ್ನ ಮೆಚ್ಚಲೆಬೇಕಾಗುತ್ತದೆ.
ಇಡೀ ವಿಶ್ವದಲ್ಲೆ ಮೊತ್ತ ಮೊದಲು ಕಾಯಕಜೀವಿಗಳು.ಗುಲಾಮರು.ಮಹಿಳೆಯರು.ಶ್ರಮಿಕರು. ದಲಿತರು.ಹಿಂದುಳಿದವರು ಧೈರ್ಯದಿಂದ ಮಾತನಾಡಿದ್ದು.ಬರೆದಿದ್ದು.
ಪ್ರತಿರೋಧವನ್ನು ಒಡ್ಡಿದ್ದು ಎಂದರೆ ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಲ್ಯಾಣ ರಾಜ್ಯದಲ್ಲಿ.
ಜಾತಿಯ ತಳಪಾಯದಿಂದ ನಿಂತಿರುವ ಹಿಂದುಧರ್ಮದಲ್ಲಿ ಕುರಿ.ಕೋಳಿ.ಮೀನು.
ತಿನ್ನುವರನ್ನು ಸ್ವಲ್ಪ ಶ್ರೇಷ್ಠ ಜಾತಿಗಳೆನ್ನುತ್ತಾರೆ.ಆದರೆ ಶಿವನಿಗೆ ಪಂಚಾಮೃತ ಕೊಡುವ ಗೋವು ತಿಂದರೆ ಕೀಳುಮಾದಿಗ ಎನ್ನುವರು ಎಂದು ಬಂಡಾಯ ಸಾರುತ್ತಲೆ ಇಂತಹ ಕಟ್ಟುಪಾಡನ್ನು ಹೇರಿದ ಬ್ರಾಹ್ಮಣರ ಪಾಂಡಿತ್ಯಕ್ಕೆ ದಿಕ್ಕಾರ ಹೇಳುತ್ತಾಳೆ.
ಪ್ರಸ್ತುತ ದಿನಗಳಲ್ಲಿ ಗೋಹತ್ಯೆಯ ಹೇಸರಿನಲ್ಲಿ ಮುಗ್ದ ಅಮಾಯಕ ದಲಿತ ಹಾಗು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗೈಯ್ಯುವ ಮನುವಾದಿಗಳ ಮರ್ಮಕ್ಕೆ ಈ ವಚನ ಕೊಡಲಿ ಏಟು ಹಾಕುತ್ತದೆ.
ಶರಣರ ಕಾಲವೆಂದರೆ ಇಡೀ ಪ್ರಪಂಚದಲ್ಲಿ ಮೊತ್ತಮೊದಲು ಸಮಾನತೆ.ಸ್ವಾತಂತ್ರ್ಯ. ಸಹೋದರತೆ ಎಂಬ ತತ್ವಗಳು ತಲೆ ಎತ್ತಿದ ಕಾಲ.ಅಂದರೆ ಎಲ್ಲಾ ದೇಶಗಳಿಗಿಂತ ಮೊದಲು ಕಾಯಕ ವರ್ಗ ಸಮಾನತೆಗಾಗಿ ಒಂದೆಡೆ ಸೇರಿ ವೈಚಾರಿಕ ವೈಜ್ಞಾನಿಕವಾಗಿ ಸತ್ಯವನ್ನ ಶೋಧಿಸುತ್ತಲೇ ಅಮಾನವೀಯ ಜಾತಿವ್ಯವಸ್ಥೆ ಅಸಮಾನತೆಯ ವರ್ಣವ್ಯವಸ್ಥೆ ಅಜ್ಞಾನದ ಲಿಂಗ ತಾರತಮ್ಯ ಅವಿವೇಕದ ಮೌಡ್ಯಕಂದಚಾರಗಳಂತ ಬ್ರಾಹ್ಮಣರು ಸ್ಥಾಪಿಸಿದ್ದ ವಿಷವರ್ತುಲ ವ್ಯವಸ್ಥೆಯ ವಿರುದ್ದ ಚಳುವಳಿ ಮಾಡಿದ ಕ್ರಾಂತಿಕಾರಿ ದಿನಗಳವು.
ವೇದ ನಡುಗಿಸಿ ಶಾಸ್ತ್ರಕ್ಕೆ ನಿಗಳವನಿಕ್ಕಿದ ಬಸವಣ್ಣ ನೇರವಾಗಿ ಬ್ರಾಹ್ಮಣರ ಸನಾತನ ಸಂಪ್ರದಾಗಳನ್ನು ವಿರೋದಿಸುತ್ತಿದ್ದ ಅನುತ್ಪಾದಕರಾದ ಅಲ್ಪಸಂಖ್ಯಾತ ಬ್ರಾಹ್ಮಣರು ಉತ್ಪಾದಕವರ್ಗದ ಬಹುಸಂಖ್ಯಾತ ಶೂದ್ರರ ಮೇಲೆ ನಡೆಸುವ ಶೋಷಣೆಯನ್ನು ಖಂಡಿಸುತಿದ್ದರು. ಸೂಕ್ಮಮತಿಗಳಾದ ಬಸವಣ್ಣನವರು ಶೋಷಣೆಯ ವಿವಿಧ ಮೂಲಗಳನ್ನು ಅರಿತು ಬಹಳ ಎಚ್ಚರಿಕೆಯಿಂದ ಕಾಯಕ ಪರಂಪರೆಯ ಶ್ರಮಿಕರ ಬೆವರಿನ ಚಳುವಳಿಯನ್ನು ಆರಂಭಿಸಿದರು.ಬಸವಾದಿ ಶರಣರ ಚಳುವಳಿಯೆಂದರೆ ಶೂದ್ರಾತಿಶೂದ್ರ ಸಮುದಾಯಗಳು ಒಂದಾಗಿ ಮನುಷ್ಯತ್ವದ ಉಳಿವಿಗಾಗಿ ಮಾಡಿದ ದೊಡ್ಡ ಚಳುವಳಿಯಾಗಿದೆ. ಈ ಸತ್ಯವನ್ನು ಪ್ರತಿಯೊಬ್ಬರಿಗು ಅರ್ಥಮಾಡಿಸಬೇಕಿದೆ.
ಯುರೋಪಿನಲ್ಲಿ ಬಂಡವಾಳ ಶಾಹಿವ್ಯವಸ್ಥೆ ಜನ್ಮ ತಾಳಿದ್ದು 13 ನೇ ಶತಮಾನದಲ್ಲಿ.18ನೇಶತಮಾನದಲ್ಲಿ ಯೋರೋಪಿನ ಕೆಲವು ರಾಷ್ಟ್ರಗಳಲ್ಲಿ ಔದ್ಯೋಗಿಕ ಕ್ರಾಂತಿಯ ನಂತರ ಸಂಘಟಿತ ದುಡಿಯುವ ವರ್ಗ ರೂಪಗೊಂಡಿತು.ಕಾರ್ಲ್ ಮಾರ್ಕ್ .ಪ್ರೆಡೆರಿಕ್ ಎಂಗೆಲ್ಸ್ ಮುಂತಾದ ತತ್ವಜ್ಞಾನಿಗಳು ಶ್ರಮಿಕರ ಕಾಯಕಜೀವಿಗಳ ಹಾಗು ದುಡಿತುವ ವರ್ಗಗಳ ತತ್ವ ಸಿದ್ದಾಂತವನ್ನು ವೈಜ್ಞಾನಿಕವಾಗಿ ಬರೆದದ್ದು 19ನೇ ಶತಮಾನದಲ್ಲಿ.
ಅಲ್ಲದೆ ಬಂಡವಾಳಶಾಹಿಗಳ ವಿರುದ್ದ ಕಾರ್ಮಿಕರು ಹೋರಾಡುವ ಹಾಗು ಅಥವಾ ಉಳ್ಳವರು ಹಾಗು ಇಲ್ಲದವರ ನಡುವೆ ನಡೆದ ಅನೇಕ ಚಳುವಳಿಗಳು ಸಹ 19ನೇ ಶತಮಾನದಲ್ಲಿ.
ಆದರೆ ದುಡಿಯದೆ ಕಾಲಹರಣಮಾಡುತ್ತಾ ಹೋಮ.ಹವನ.ಯಜ್ಞ.
ಯಾಗಗಳೆಂಬ ಮೌಡ್ಯಕಂದಾಚಾರಗಳ ಮೂಲಕ ಜನರಲ್ಲಿ ಭಯಹುಟ್ಟಿಸಿ ವಸೂಲಿ ಮಾಡುತಿದ್ದ ಸಮುದಾಯದ ವಿರುದ್ದ ದುಡಿಯುವ ಕಾಯಕ ವರ್ಗ ಹೋರಾಡಿದ್ದು ಬಸವಣ್ಣನ ನೇತೃತ್ವದಲ್ಲಿ. ಸಮಾಜದ ಕಟ್ಟಕಡೆಯಲ್ಲಿ ಅಸ್ಪೃಶ್ಯತೆಗೊಳಗಾದ ದಲಿತಸಮುದಾಯಗಳಿಂದ ಹಿಡಿದು ಎಲ್ಲಾ ಕಾಯಕಜಾತಿಗಳನ್ನುಒಂದುಗೂಡಿಸಿ”ಕಾಯಕವೆ ಕೈಲಾಸ “ದ ತತ್ವದೊಂದಿಗೆ ಹೊಸಕ್ರಾಂತಿಗೆ ಮುನ್ನುಡಿ ಬರೆದ ವಿಶ್ವದ ಮೊದಲಿಗ ಎಂದರೆ ಬಸವಣ್ಣ.ಇಂತ ಕಾಯಕ ಗುಂಪಿನ ನಾಯಕನಾದ ಬಸವಣ್ಣ ಶತಶತಮಾನದಿಂದ ನೊಂದಬೆಂದ ಜನರಿಗೆ ನಗುವಾಗುತ್ತಾನೆ.
ಬಸವಣ್ಣನ ಈ ಕಾಯಕ ಚಳುವಳಿ ಅನೇಕ ಮಹತ್ತರವಾದ ಹೊಸಹೊಸ ಪರಿವರ್ತನೆಗೆ ಹಾಗು ವೈಚಾರಿಕ ಚಿಂತನೆಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತದೆ.
ಜಾತಿಸಂಕೋಲೆಗಳಿಂದ ಸಮಾನ ಹಕ್ಕುಗಳನ್ನು ಪಡೆಯುವ. ಛಿದ್ರಛಿದ್ರಗೊಂಡಿರುವ ವಿವಿಧ ಕಾಯಕ ಜಾತಿಗಳ ನುಡುವೆ ಒಗ್ಗಟ್ಟು.ಕಷ್ಟಸುಖದಲ್ಲಿ ಭಾಗಿಯಾಗುವ ಮಾನವೀಯಗುಣ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತ ಏಕದೇವ ಪ್ರಜ್ಞೆ. ಜ್ಞಾನದ ವೃದ್ದಿಗೆ ಅಕ್ಷರದ ಅರಿವು.ಸ್ತ್ರೀ ಪುರುಷ ಸಮಾನ.ಕಾಯಕ ಸಿದ್ದಾಂತಗಳೆಂಬ ಬದುಕಿನ ವಿಧಾನಗಾಳ ಮೌಲ್ಯವನ್ನು ಈ ಶರಣ ಚಳುವಳಿ ಕೊಡುತ್ತದೆ.
ಅಸ್ಪೃಶ್ಯ ಬಡವನಾಗಿ ಹುಟ್ಟುವುದು ಜನ್ಮಜನ್ಮದ ಮಹಾಪಾಪ ಎಂದು ಹೇಳುವ ವೈದಿಕರಿಗೆ ಬಸವಣ್ಣ” ಮನೆ ನೋಡ…ಬಡವರ ಮನ ನೋಡ..ಘನ ಕೂಡಲಸಂಗನಶರಣರು ಸ್ವತಂತ್ರಧೀರರು”ಎಂದು ಶೋಷಿತರ ಎದೆಯೊಳಗೆ ಸ್ವಾಭಿಮಾನ ಬಿತ್ತಿ ಶೋಷಣೆಯ ಅರಿವನ್ನು ಶರಣರಿಗೆ ಸಾರಿಹೇಳುತ್ತಾರೆ.
ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಾಲುಸಾಲಾಗಿ ಹತ್ಯೆಗಳಾಗುತ್ತಿವೆ.ಆದರೆ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ “ಅನುಭವ ಮಂಟಪ” ನಿರ್ಮಿಸಿ ಪ್ರತಿಯೊಬ್ಬರ ಅನುಭವ ಹಾಗು ಅಭಿವ್ಯಕ್ತಿ ಗೌರವಯುತವಾದದ್ದು.ಎಲ್ಲಾರು ಅನಭವ ಮಂಟಪದಲ್ಲಿ ಜಾತಿಎಲ್ಲೆಯಿಲ್ಲದೆ. ಮೇಲುಕೀಳೆನ್ನದೆ.ಬಡವಬಲ್ಲಿದ. ಸ್ತ್ರೀ ಪುರುಷ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರೂ ಸಮಾಜಲ್ಲಿ ಬೇರೊರಿದ್ದ ಕಂದಾಚಾರ ಮೌಡ್ಯವನ್ನು ವಿರೋಧಿಸುತ್ತಾ ಸನಾತನವಾದಿಗಳ ಪೈಶಾಚಿಕ ರೀತಿನೀತಿಗಳನ್ನು ತಮ್ಮ ವಚನದ ಮೂಲಕ ಕಟುವಾಗಿ ಟೀಕಿಸುತಿದ್ದರು.
“ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅನುಭವ ಮಂಟಪ ನಿರ್ಮಿಸಿದ ಬಸವಣ್ಣ ಅದರ ಇಡೀ ನಾಯಕತ್ವವನ್ನು ತಳಸಮುದಾಯಗಳಿಗೆ ನೀಡುತ್ತಾನೆ. 770 ಪ್ರತಿನಿಧಿಗಳು (ಶರಣರು) ಇದ್ದ ಈ ಅನುಭವ ಮಂಟಪ ಒಂದು ರೀತಿಯಲ್ಲಿ ವಿಶ್ವದ ಮೊದಲನೆ ಪಾರ್ಲಿಮೆಂಟ್ ಆಗಿ ಕಂಡುಬರುತ್ತದೆ.ಅನುಭವ ಮಂಟಪದ ಶೂನ್ಯ ಪೀಠಾಧ್ಯಕ್ಷಾರದ ಅಲ್ಲಮ ಪ್ರಭಗಳು(ದಲಿತ) ಮೊದಲ ಸ್ಪೀಕರ್ ಆಗಿ ಕಾಣುತ್ತಾರೆ.ಅಲ್ಲಿ ಅಕ್ಕಮಹಾದೇವಿ. ಗಂಗಾಂಬಿಕೆ.ನೀಲಾಂಬಿಕೆ.ಸೂಳೆಸಂಕವ್ವ.ದಾನಮ್ಮ.ಕಲ್ಯಾಣವ್ವ.ಆಯ್ದಕ್ಕಿ ಲಕ್ಕಮ್ಮ.ಸತ್ಯಕ್ಕ.ಮುಂತಾದ ಮಹಿಳಾ ಶರಣೆಯರು.ಮಾದರ ದೂಳಯ್ಯ .ಮಡಿವಾಳ ಮಾಚಯ್ಯ.ಸಮಗಾರ ಹರಳಯ್ಯ.ಚನ್ನಬಸವಣ್ಣ.
ಡೋಹಾರ ಕಕ್ಕಯ್ಯ.ಅಜಗಣ್ಣ.ಕುರಬರ ಬೊಮ್ಮಣ್ಣ.ಬ್ರಾಹ್ಮಣರ ಮದುವರಸ.ನೂರಾರು ಜಾತಿಯ ಶರಣರು ಒಂದೆಡೆ ಸೇರಿ ತಮ್ಮ ಕಾಯಕನಿರತ ಅನಭವಗಳು ಹಾಗು ಸಮಾಜದ ಅಂಕುಡೊಂಕು. ದೇಶದ ಸಮಸ್ಯೆಗಳು ಅವುಗಳಿಗೆ ಪರಿಹಾರಗಳನ್ನು ಸೂಚಿಸುತ್ತ ಅಧಿವೇಶನದಲ್ಲಿ ಚರ್ಚಿಸುತಿದ್ದರು.
ಮಹಿಳೆಯರಿಗೆ ಮೊದಲು ವಿಶ್ವದಲ್ಲೆ ರಾಜಕೀಯ ಪ್ರಜ್ಞೆ ಹಾಗು ಸಮಾನತೆ ಸ್ವಾತಂತ್ರ್ಯಗಳನ್ನು ನೀಡಿದ ಏಕೈಕ ವ್ಯಕ್ತಿ ಬಸವಣ್ಣ.ಅಲ್ಲದೆ ಶ್ರಮಿಕವರ್ಗವನ್ನು ಒಂದೆಡೆ ಸೇರಿಸಿ ವೈಜ್ಞಾನಿಕ ಕ್ರಾಂತಿಗೆ ಅನುಗೊಳಿಸಿದ ವಿಶ್ವದ ಮೂದಲ ಸಂಘಟಕ ಬಸವಣ್ಣ .
ಬಸವಣ್ಣ ವಯಸ್ಕರ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದಿರುವುದು ಕೆಲವು ತಳಸಮುದಾಯಗಳು ಶರಣರು ಅನುಭವ ಮಂಟಪದಲ್ಲಿ ಅಕ್ಷರ ಕಲಿತು ವಚನಗಳ ರಚನೆಗೆ ಮುಂದಾಗುತ್ತಾರೆ. ಅಲ್ಲದೆ ದಲಿತರಿಗು ಮಹಿಳೆಯರಿಗು ಅಕ್ಷರದ ಅರಿವು ನೀಡುತಿದ್ದ ಬಸವಣ್ಣ ಜ್ಞಾನಕ್ಕೆ ಜಾತಿಭೇಧವಿಲ್ಲ ಎಂಬ ಮಾತನ್ನು ಸಾಬೀತು ಮಾಡಿದ್ದರು.ಹಾಗಾಗಿ ಬಹುಸಂಖ್ಯಾತ ವಚನಕಾರರು ದಲಿತರು .ಮಹಿಳೆಯರು ಹಾಗು ಹಿಂದುಳಿದ ವರ್ಗದವರಾಗಿದ್ದಾರೆ.ಇದು ಇಡೀ ಭಾರತದಲ್ಲೆ ಒಂದು ಹೊಸ ವಿಶಿಷ್ಟ ಪ್ರಯೋಗವಾಗಿದೆ.
ಈ ದಲಿತರು.ಮಹಿಳೆಯರು.ಹಿಂದುಳಿದವರು ವಚನಗಳ ಮೂಲಕ ಕನ್ನಡದಲ್ಲಿ ಬರೆದ ವಿಶ್ವದ ಮೂದಲ ಸಾಹಿತ್ಯವಾಗುತ್ತದೆ.ಏಕೆಂದರೆ ಈ ಸಂಧರ್ಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇಡೀ ವಿಶ್ವದಲ್ಲಿನ ಯಾವ ದೇಶದಲ್ಲೂ ಸಂವಿಧಾನ ರಚನೆಯಾಗದ ದಿನಮಾನಗಳಲ್ಲಿ ಕನ್ನಡದ ಶರಣರು ಸಮಾನತೆ. ಸಹೋದರತೆ.ಸ್ವಾತಂತ್ರ್ಯ. ಭ್ರಾತೃತ್ವ.ಮೀಸಲಾತಿ.ಧಾರ್ಮಿಕ ಹಕ್ಕು.ಮುಂತಾದವುಗಳ ಕುರಿತು ವೈಜ್ಞಾನಿಕ ವೈಚಾರಿಕ ವಚನಗಳನ್ನು ರಚಿಸಿದ್ದರು.
1215ರಲ್ಲಿ ಇಂಗ್ಲೆಂಡ್ ನಲ್ಲಿ ಕಿಂಗ್ ಜಾನ್ ಮತ್ತು ಜಮಿನ್ದಾರರ ನಡುವೆ ಒಂದು ಬಹುಮುಖ್ಯ ಒಪ್ಪಂದವಾಗುತ್ತದೆ.ರಾಜನ ಅಧಿಕಾರವನ್ನು ಮೊಟಕುಗೊಳಿಸಿದಂಥ ವಿಶ್ವದ ಮೂದಲ ಒಪ್ಪಂದಕ್ಕೆ”ಮ್ಯಾಗ್ನಾಕಾಟ್” ಮಹಾ ಒಪ್ಪಂದ ಎಂದುಕರೆಯುತ್ತಾರೆ. 13 ನೇ ಶತಮನದಲ್ಲಿ ನಡೆದ ಈ ಒಪ್ಪಂದ “ಜಗತ್ತಿನ ಸಂವಿಧಾನಗಳ ತಾಯಿ” ಎಂದು ಇತಿಹಾಸತಜ್ಞರ ಅಭಿಪ್ರಾಯವಾಗಿದೆ. ಇದಕ್ಕಿಂತ ಮುಂಚೆ ಮಾನವ ಹಕ್ಕುಗಳ ಘನತೆ ಗೌರವಗಳಿಂದ ತುಂಬಿರುವ ವಚನಗಳನ್ನು ವಿಶ್ವಕ್ಕೆ ಅರ್ಥಮಾಡಿಸಿಕೊಡುವಲ್ಲಿ ಇಂಡಿಯಾ ಸೋತಿರುವುದು ನಮ್ಮ ದುರಂತವಾಗಿದೆ.
ಕೇವಲ ಒಂದೆ ಒಂದು ತಲೆಮಾರಿನ ಶ್ರಮಿಕರ ವರ್ಗ ಬಸವಣ್ಣನವರ ನೇತೃತ್ವದಲ್ಲಿ ಏನೆಲ್ಲಾ ಕ್ರಾಂತಿ ಮಾಡಿತು ಎಂಬುದು ನಿಜಕ್ಕು ಅಚ್ಚರಿಯಾಗುತ್ತದೆ.
ಬಸವಣ್ಣ ಮತ್ತು ಅಲ್ಲಮಾದಿ ಶರಣರ ಚಳುವಳಿಯು ಕಾಯಕ ಸಿದ್ದಾಂತಕ್ಕೆ ಬದ್ದವಾಗಿದೆ.” ಕಾಯಕವೆ ಕೈಲಾಸವೆಂಬ” ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತಿದೆ.ದುಡಿಮೆಯೆ ದೇವರು ಎಂಬ ಸತ್ವ ಶರಣರ ಸಿದ್ದಾಂತದಲ್ಲಿದೆ.
“ಕ್ರೈಸ್ತರು ಯುರೋಪಿಯನಲ್ಲಿ ಸೃಷ್ಟಿಸಿದ್ದಕ್ಕಿಂತಲು ಭಯಂಕರವಾದ ನರಕವನ್ನು ಬ್ರಾಹ್ಮಣರು ಭಾರತದಲ್ಲಿ ಸೃಷ್ಟಿಸಿದ್ದಾರೆ” ಎಂದು ಕಾರ್ಲ್ ಮಾರ್ಕ್ಸ್ ಸುಮಾರು 150ವರ್ಷಗಳ ಹಿಂದೆ ಬರೆದ “ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್” ಗ್ರಂಥದಲ್ಲಿ ಹೇಳಿದ್ದಾರೆ.ಇದು ಸತ್ಯವೂ ಕೂಡ.ಆದರೆ ನಮ್ಮ ಬಸವಾದಿ ಪ್ರಮಥರು ಈ ಅಸಮಾನತೆಯ ನರಕವನ್ನು ಅರಿವುಗಳ ಮೂಲಕ ಸಡುತ್ತಾರೆ. ಬ್ರಾಹ್ಮಣ್ಯದ ಹಾಗು ಹಿಂದುತ್ವದ ವಿರುದ್ದ ಹುಟ್ಟಿಕೊಂಡ ಕಾಯಕ ಸಿದ್ದಾಂತ ಜಾತಿವಿನಾಶಕ್ಕಾಗಿ ಅಣಿಯಾಯಿತು.
ಮನುಧರ್ಮ ಸೃಷ್ಟಿಸಿದ ವರ್ಣವ್ಯವಸ್ಥೆಯನ್ನು ಕಟ್ಟಕಡೆಯ ಅಸ್ಪೃಶ್ಯ ದಲಿತ ಜಾತಿಯ ಸಮಗಾರ ಹರಳಯ್ಯ ಇಷ್ಟ ಲಿಂಗ ದೀಕ್ಷೆಯ ನಂತರ ಲಿಂಗವಂತರಾದರು.ಅಲ್ಲದೆ ಬಿಜ್ಜಳನ ಆಸ್ಥಾನದಲ್ಲಿದ್ದ ಮದುವರಸ ತಮ್ಮ ಪೂರ್ವಿಕರು ಮಾಡಿದ ಮೋಸದ ಅರಿವಾಗಿ ಬಸವನ ಬಳಿಗೆ ಬಂದು ಲಿಂಗದೀಕ್ಷೆ ಪಡೆದು ಲಿಂಗವಂತನಾಗುತ್ತಾನೆ.ಕೊನೆಗೆ ಶರಣ ಸಂಗಮದಲ್ಲಿ ಒಂದಾಗಿ ಸಹಸಧಸ್ಯರಾಗುತ್ತಾರೆ. ಜಾತಿವಿನಾಶಕ್ಕೆ ಮುನ್ನುಡಿ ಬರೆಯಲು ಬಸವಣ್ಣ ಮತ್ತು ಶರಣರು ಸಿದ್ದರಾದರು. ಸಮಗಾರ ಹರಳಯ್ಯನ ಹಾಗು ಬ್ರಾಹ್ಮಣರ ಮದುವರಸನ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದರು.ನಾವು ಜಾತಿ ತೊಳೆದು ಲಿಂಗವಂತರಾಗಿದ್ದೇವೆ ಎಂಬುದು ಅವರ ವಾದವಾಗಿತ್ತು.ಅಲ್ಲದೆ ಮಾನವ ಹಕ್ಕುಗಳ ಉಳಿವಿಗೋಸ್ಕರ ಜಾತಿನಾಶಕ್ಕಾಗಿ ಈ ಮದುವೆಯನ್ನು ಏರ್ಪಡಿಸಿದಾಗ ಕೆಲವು ಬ್ರಾಹ್ಮಣಪಟ್ಟಭದ್ರ
ಹಿತಾಸಕ್ತಿಗಳು ರಾಜ್ಯಾದ್ಯಂತ ಸುಳ್ಳು ಮೋಸವನ್ನು ಸತ್ಯವೆಂದು ನಂಬಿಸಿ ನೂರಾರು ಶರಣನ್ನು ಕಗ್ಗೊಲೆ ಮಾಡುತ್ತಾರೆ ಸತ್ಯಜ್ವಾಲೆಯಂತೆ ಪ್ರಜ್ವಲಿಸುತಿದ್ದ ವಚನಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ.
1939 ರಿಂದ 1945 ರವರೆಗೆ ನಡೆದ ಎರಡನೆ ಮಹಾಯುದ್ದದಲ್ಲಿ ಕೋಟ್ಯಾಂತರ ಜನರು ಸಾಯುತ್ತಾರೆ. ಆಗ 1945 ರಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಉಳಿವಿಗಾಗಿ ಸ್ಥಾಪನೆಯಾಗುತ್ತದೆ.ಆದರೆ ಹನ್ನೆರಡನೆ ಶತಮಾನದಲ್ಲಿ ನೂರಾರು ಶರಣ ಹತ್ಯೆಯು ಮಾನವ ಹಕ್ಕುಗಳಿಗೆ.ಹಾಗು ಅಸಮಾನತೆಯ ವಿರುದ್ದ ನಡೆದ ಚಳುವಳಿಯಾಗಿದೆ.ಹರಳಯ್ಯ ಮದುವರಸರು ಲಿಂಗವಂತರಾಗುವ ಮೂಲಕ ಮನುಧರ್ಮದಿಂದ ಸೇರಿಕೊಂಡಿದ್ದ ವರ್ಣ. ಜಾತಿಸಂಕೋಲೆಯನ್ನು ಮೀರಿದ್ದರು ಮನುಷ್ಷತ್ವದ ಉಳಿವಿಗೆ ಮನುಷ್ಯರಾಗಿ ಚಿಂತಿಸಿದ್ದರು.ಹರಳಯ್ಯನವರ ಮಗ ಶೀಲವಂತ ಮದುವರಸರ ಮಗಳು ಲಾವಣ್ಯವತಿ ಇವರು ಲಿಂಗವಂತರಾಗಿದ್ದರಿಂದ ಇವರ ಮದುವೆ ಸಹಜ ಸ್ಥಿತಿಯಲ್ಲಿರಬೇಕಿತ್ತು.ಆದರೆ ಮನುವಾದಿಗಳ ಯಥಾಸ್ಥಿತಿವಾದಕ್ಕೆ ಇಷ್ಟವಾಗಿರಲಿಲ್ಲ.
ಹಾಗಾಗಿ ಈ ಮೂಲಕ ಧರ್ಮನಾಶಕ್ಕೆ.
ಸಂಪ್ರದಾಯಗಳ ದಿಕ್ಕರಿಸುವಿಕೆ.ಈ ದೇಶದ ನಾಶಕ್ಕೆ.ಹಾಗು ರಾಜಧರ್ಮದ ವಿರುದ್ದವಾದ ಮದುವೆಯೆಂದು ಸನಾತನವಾದಿಗಳು ಸುಳ್ಳಬ್ಬಿಸಿ ಗದ್ದಲ ಗಲಾಟೆ ಅಚ್ಚುತ್ತಾರೆ. ಆದರೆ ಶರಣರ ಅಭಿಪ್ರಾಯದಲ್ಲಿ ಧರ್ಮಬಾಹಿರ.ಮನುಷ್ಯರ.ನಾಗರೀಕ.ಲಿಂಗವಂತರ ಮದುವೆಯಾಗಿತ್ತು. ಒಂದು ರೀತಿಯಲ್ಲಿ ಈ ಶರಣ ಚಳುವಳಿ ಎಂಬುದು ಮೇಲುಕೀಳು ಎಂದು ಪ್ರತಿಪಾದಿಸುವ ಹಾಗು ಮೇಲುಕೀಳಿನ ಅಸಮಾನತೆಯ ಬೆನ್ನುಮೂಳೆ ಮುರಿದ ಲಿಂಗಾಯ್ತಧರ್ಮಕ್ಕು ನಡುವೆ ನಡೆವ ಸಮರವಾಗಿತ್ತು. ಮನುವಾದದ ಕ್ರೌರ್ಯದ ವಿರುದ್ದ ಚಳುವಳಿ ರೂಪಿಸಿದ್ದ ಶರಣರು ತಮ್ಮ ಕಾಯಕ ಬೆವರಿನ ಸಮಾನತೆಯ ಸಿದ್ದಾಂತಕ್ಕೆ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಸಿದ್ದರಾದರು.
“ನಾಳೆ ಬಪ್ಪುದು ಇಂದೆ ಬರಲಿ
ಇಂದು ಬಪ್ಪುದು ಇಗೆ ಬರಲಿ”..ಎಂದು
ಕ್ರಾಂತಿಗೆ ಎದೆಕೊಟ್ಟು ನಿಂತರು.ಮಾನವೀಯತೆಯ ಕೊಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೊದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು.ಸನಾತನಿ ವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.
ಸಮಾನತೆಗಾಗಿ ಹುತಾತ್ಮ ರಾದರು.
ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ ತತ್ವ ಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ “ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ.ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.
ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.
ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇಧಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು. ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪವಾಗಿತ್ತು.
ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.
ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಕೆಸರೆರೆಚುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.
ಈ ಬಸವಾದಿ ಶರಣರ ಹತ್ಯೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳ ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.
ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು ಮತ್ತೊಮ್ಮೆ ಕಲ್ಯಾಣವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.ಮಾನವೀಯತೆಯ ಕೊಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೂದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.
ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು. ಹಿಂದುತ್ವದವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.ಸಮಾನತೆಗಾಗಿ
ಹುತಾತ್ಮ ರಾದರು.
ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ
ತತ್ವಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ ”
ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ. ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.
ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.
ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇದಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು.
ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೂದಲ ಪಾರ್ಲಿಮೆಂಟ್ ಎಂಬುದು ಅನುಭವ ಮಂಟಪವಾಗಿತ್ತು.
ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.
ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು
ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು
ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಮಸಿಬಳಿಯುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.
ಈ ಬಸವಾದಿ ಶರಣರ ಹತ್ಯಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯೆಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳು ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.
ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು “ಮತ್ತೊಮ್ಮೆ ಕಲ್ಯಾಣ”ವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.
–ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು
ಈ ಲೇಖನ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದು, ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ಓದಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243