ದಿನದ ಸುದ್ದಿ
ವಿಡಿಯೋ | ಶಾಸಕ ಪುಟ್ಟರಾಜು ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಕಸದ ಗುಡ್ಡೆಗೆ
- ವರದಿ – ಗಿರೀಶ್ ರಾಜ್
ಸುದ್ದಿದಿನ,ಮಂಡ್ಯ : ಕಳೆದ ದಿನಗಳ ಹಿಂದೆಯಷ್ಟೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚಿಸಲಿಲ್ಲ ಎಂಬ ಆದೇಶಕ್ಕೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿದ್ದರೆ ಇಂದು ಪಾಂಡವಪುರದ ಉಪ ವಿಭಾಗಾಧಿಕಾರಿ ಕಛೇರಿಯ ಶಾಸಕ ಪುಟ್ಟರಾಜು ಕೊಠಡಿಯಲ್ಲಿ ಇದ್ದ ಅಂಬೇಡ್ಕರ್ ಅವರ ಪೋಟೋವನ್ನು ನವೀಕರಣದ ಹಿನ್ನಲೆಯಲ್ಲಿ ಕಸದ ಮೂಲೆಗೆ ಬಿಸಾಡಿ ಅವಮಾನ ಮಾಡಿರುವ ಘಟನೆ ನಡೆದಿದೆ.
ಭಾವಚಿತ್ರಕ್ಕೆ ಗೌರವ ಕೊಡ ಬೇಕಾದ ಅಧಿಕಾರಿಗಳು ಈ ರೀತಿ ಬಿಸಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ಗೆ ಗ್ರಾಸವಾಗಿದೆ ಈ ಸಮಯದಲ್ಲಿ ಯಾವ ಅಧಿಕಾರಿಗಳು ಗಮನಿಸದೇ ಇರೋದು ಶೋಚನಿಯವಾಗಿದ್ದು ಈ ಕೃತ್ಯವನ್ನು ಬೇಕು ಅಂತಲೇ ಅಧಿಕಾರಿಗಳು , ಶಾಸಕರು ಅಂಬೇಡ್ಕರ್ ಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿದ್ದು ಈ ಕೃತ್ಯವನ್ನು ಎಸಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243