ಬಹಿರಂಗ

ಭೂಮಿ ತಾಯಿಯ ಚೊಚ್ಚಲ ಮಗ

Published

on

ದಿದ್ದು ಕಂಗ್ಲೀಷ್ ಮೀಡಿಯಂ,ಸೇರಿದ್ದು ಇಂಜಿನಿಯರಿಂಗ್, ಇವಾಗ ಮಾಡ್ತಿರೋ ಕೆಲಸ ಮಾತ್ರ ಜರ್ನಲಿಸಂ…

ಲೈಫು ಆದ್ರೆ still ವೈಟ್ & ಬ್ಲಾಕ್ screen…

ಅವತ್ ರಾತ್ರಿ…
ಏನ್ ಗುಡುಗು, ಸಿಡಿಲು ಅಂತೀರಾ..!!!
ಯಪ್ಪ ಮಿಂಚು ಪಣಾರ್!!! ಅಂತಾ ಕಿಟಕಿ ಪಕ್ದಲ್ಲೆ ಬರದು.. ನಾನ್ ಅಂತೂ ಕಿಟಕಿ ಅತ್ರಕ್ಕೂ ಹೋಗ್ಲಿಲ್ಲ…ಜೊತೆಗೆ ಸುಯ್ ಸುಯ್ ಅನ್ನೋ ಜೊರು ಗಾಳಿ .ತೆಂಗಿನ ಮರ , ಅಡಿಕೆ ಮರಗಳು 45° ಆಂಗಲ್ ಗೆ ಬಾಗಿದ್ವು ಅನ್ನಿ ಅಷ್ಟೊಂದು ರಭಸವಾದ ಗಾಳಿ..ಉಧೋ ಉಧೋ ಅಂತಾ ಮಳೆ ಬರಕ್ಕೆ ಶುರು ಆಯ್ತು..ಗಾಳಿ ಜೊತೆ ಮಳೆ ಬಂದ್ರೆ ಕೇಳ್ಬೇಕ??
ಅದೇ time ಗೆ ಕರೇಂಟ್ ಹೋಯ್ತು , ಅಕ್ಕಿ ಬೇರೆ ಕಾಲಿ ಆಗಿತ್ತು, , time ಬೇರೆ 10 ಆಗಿತ್ತು , ಸುತ್ತಲೂ ಕತ್ತಲೆ ಆವರಿಸಿತ್ತು, ಜೊತೆಗೆ ಮಳೆ ಬೇರೆ ಬರ್ತಿತ್ತು… ಏನ್ ಮಾಡ್ಲಿ ಸ್ಬಾಮಿ.. ಮಳೆಲಿ ಹೋಗಿ ತರಕ್ಕೆ ಆಗಲ್ಲ ಯಾಕಂದ್ರೆ ನಂಗೆ ಸಿಡಿಲು ಮಿಂಚು ಅಂದ್ರೆ ಭಯ..
ನಾನ್ ಬಾಗ್ಲಲ್ಲೇ ನಿಂತ್ಕೊಂಡು ಹೊದ್ದಾಡ್ತಿದ್ದೆ… ಅವಾಗ ಪಕ್ಕದ ಮನೆ ಅವರ್ಗೆ ನನ್ ಕಷ್ಟ ಗೊತ್ತಾಯ್ತು ಅನ್ಸುತ್ತೆ ಊಟ ಮಾಡು ಬಾರಪ್ಪ ಅಂತ ಬಲವಂತ್ ಮಾಡುದ್ರು , ನಾನು ಇಲ್ಲವ್ವೋ ..ಅಂತ ಹೇಳಿ.‌‌ ಒಂದ್ ಕಪ್ ಅಕ್ಕಿ ಸಾಲ ಕೊಡಿ ಅಂತಾ ಕೇಳ್ದೆ. ಅದಿಕ್ಕೆ ಅವರು ನೋಡಪ್ಪ ನಾವು ಬೆಳೆದಿರೋ ಅಕ್ಕಿ ತಿನ್ನದು , ನೀವೆಲ್ಲಾ ಪ್ಯಾಟೆ ಮಂದಿ ನಿಮ್ ಥರ ಬಾಸುಮತಿ ,ಸೋನಾಮಸುರಿ ಎಲ್ಲಾ ತಿನ್ನಲ್ಲ ಅಂದ್ರೂ .. ಅಯ್ಯೋ ತಾಯಿ ನಾನು ಮಣ್ಣಿನ್ ಮಗ , ನಾನ್ ಇಲ್ಲಿ ತನ್ಕ ತಿಂದಿದ್ದು ಸಿದ್ದರಾಮಯ್ಯ ಕೊಟ್ಟಿದ್ ಒಂದು ರುಪಾಯಿ ಸೋಸೈಟಿ ಅಕ್ಕೀನೆ ಅಂತಾ ಹೇಳಿ ಒಂದು ಕಪ್ಪ ಅಕ್ಕಿ ತಂದೆ..

ಎರಡು ಈರುಳ್ಳಿ, ಎರಡು ಮೆಣಸಿನ ಕಾಯಿ , ಒಂದ್ ಟೊಮೋಟೊ ಹಾಕಿ ಚಿತ್ರನ್ನ ಮಾಡಿದೆ, ಘಮ್ ಅನ್ಲಿ ಅಂತಾ ಚಿಕನ್ ಬಿರಿಯಾನೆ ಪೌಡರ್ ಬೇರೆ ಹಾಕಿದ್ದೆ..
ಜೊತೆಗೆ ಇರ್ಲಿ ಅಂತಾ ಎರಡು ಕೋಳಿ ಮೊಟ್ಟೆ ಬೇಯಿಸ್ಕೊಂಡು ಫುಲ್ ಮೀಲ್ಸ್ ರೇಡಿ ಮಾಡ್ಕೊಂಡು ಕೂತ್ಕೊಂಡೆ.. ಏನ್ ಘಮಲು ಅಂತಿರಾ…. ಆಹಾ.. !!
ಪಕ್ಕದ್ ಮನೆ ಆಂಟಿ ಕೂಡ ಏನಪ್ಪ ಸೋಮವಾರ ಅಂತನೂ ನೊಡ್ದಲೆ, ಬಿರಿಯಾನಿ ಮಾಡಿದ್ದೀಯ ಅಂದ್ರೂ… ಆ ರೇಂಜ್ಗೆ ನಾನು ಕೂಡ ನಳ ಮಹಾರಾಜ ಆದ್ನಲ್ಲ ಅಂನ್ಕೊಂಡು ಕನ್ನಡಿಲ್ಲಿ ನನ್ನ ನಾನೆ ನೋಡ್ಕೊಂಡೆ…ಬೆಳಗ್ಗೆ 8ಆಗಿತ್ತು ಇನ್ನು ಹಾಸಿಗೆ ಮೇಲೆ ಹೊದ್ದಾಡ್ತಿದ್ದೆ… ಅವಾಗ ಇದ್ದಕ್ಕಿದಂತೆ ಪಕ್ಕದ್ ಮನೆಲೆ ಅಳ್ತಿರೋ ದನಿ ಕೇಳಿಸ್ತು… ಏನು ಆಯ್ತಪ್ಪ ಅಂತಾ ಎದ್ದಂಗೆನೆ ಹೋದೆ…

ಒಂದ್‌‌ ಕಡೆ ಯಜಮಾನ ತಲೆಮೇಲೆ ಬಟ್ಟೆ ಹಾಕೊಂಡು ಸರ ಸರ ಅಂತಾ ಆಚೆಗಡೆ ಹೊರಟ, ಇನ್ನೊಂದ್ ಕಡೆ ಆ ತಾಯಿ ದೇವರಿಗೆ ಇಡಿ ಶಾಪ ಹಾಕೊಂಡು , ಬರ್ತೀರೋ ಕಣ್ಣೀರನ್ನ ತಡಿಲಾರ್ದೆ ತನ್ನ ಸೆರಗಲ್ಲಿ ಹೊರೆಸ್ಕೊಂಡು ಅಡುಗೆ ಮನೆ ಕಡೆ ಹೋದ್ರು.. ನಾನು ಇಂತ timeನಲ್ಲಿ ಯಾರನ್ನ ಏನಂತ ಕೇಳನ‌‌ ಅನ್ಕೊಂಟು , ಆ ತಾಯಿನ‌ ಕೇಳ್ದೆ, ಯಾಕಮ್ಮ ಏನಾಯ್ತು ಹೇಳಿ ನಾವ್ ಇದೀವಿ ಅಂತಾ… ಅದಕ್ಕೆ ಅವರು ಹೇಳುದ್ರು ರಾತ್ರಿ ಇಡೀ ಸುರಿದಿದ್ದ ಬಾರಿ ಗಾಳಿ ಮಳೆಗೆ 500 ಅಡಿಕೆ ಮರ, 15 ಎಕ್ಕರೆ ಭತ್ತದ ಬೆಳೆ, 5 ತೆಂಗಿನ ಮರ ಎಲ್ಲಾ ನೆಲಕ್ಕೆ ಉರುಳಿ ನಾಶ ಆಯ್ತಂತೆ ಅಂದ್ರೂ..
Just ಒಂದ್ ಕ್ಷಣ ನೀವು imagine ಮಾಡ್ಕೊಳಿ .. ನೀವು ಇಷ್ಟ ಪಟ್ಟಿರೋ Dairy Milk ಚಾಕೊಲೇಟ್ ನ cover ತೆಗೆದು ಇನ್ನೇನು ತಿನ್ಬೇಕು ಅನ್ನೋ time ನಲ್ಲಿ ಕೆಳಗಡೆ ಬಿದ್ದಾಗ ನಮ್ reactions ಹೆಂಗ್ ಇರ್ಬೇಡ…
ಕೈಗೆ ಬಂದಿರೋ ತುತ್ತು ಬಾಯಿಗೆ ಬರ್ಲಿಲ್ಲ ಅಂದಾಗ ಆ‌ ಅನ್ನದಾತರ ಸ್ಥಿತಿ ಎಂತಾ ಶೋಚನೀಯ ಅಂತಾ…

ಅವರ ತೋಟದ ಬಳಿ ಸುದ್ದಿ ಮಾಡನ‌ ಅಂತಾ ನಾನು ನಮ್ ಕ್ಯಾಮೆರಾ ಮ್ಯಾನ್ ಜೊತೆಲೆ ಹೊರಟ್ವಿ… ದಾರಿ ಉದ್ದಕ್ಕೂ ಭತ್ತದ ಘಮಲು ಆಹಾ.. ಏನ್ ಸುವಾಸನೆ ಅಂತಿರಾ ಒಂದ್‌ಕ್ಷಣ ನಮ್‌ ಮಂಡ್ಯ ಸೀಮೆ ನೆನೆಪಾಗೋಯ್ತು… ಅಂತಾ ಅದ್ಭುತ ಹಸಿರು ಸಾಲು ಎಲ್ಲಿ ನೋಡಿದ್ರು ಅಲ್ಲಿ ತನಕವೂ ಭತ್ತದ ಗದ್ದೆಗಳು.. ಒಂಥರಾ ಮಲೆನಾಡ ಅನುಭವ .


ಇನ್ನೇನು ಸಮೀಪ ಅವರ ತೋಟಕ್ಕೆ ಹೋಗ್ಬೇಕು , ಅನ್ನೋವಾಗ್ಲೆ ಕಂಡಿದ್ದು …. ನೆಲಕ್ಕೆ ಬಿದ್ದಿರೋ ವಿದ್ಯುತ್ ಕಂಬಗಳು.. ದನ ಕರುಗಳಿಗೆ ಅಂತಾ ಕಟ್ಸಿದ್ದ ಮನೆಗೆ ರೋಡ್ ಸೈಡಲ್ಲಿ ಬಿದ್ದಿದ್ದ ಚಾವಣಿ ಗಳು ‌,
ರಸ್ತೆ ಬದಿಲಿ ಸೀಳಾಗಿ ಬಿದ್ದಿರೋ ಮರಗಿಡಗಳು… ಒಂದು ಕಡೆ ಬೇರು ಸಮೇತ ಬಿದ್ದಿರುವ ತೆಂಗಿನಮರಗಳು… ಅರ್ಧಕ್ಕೆ ಮುರ್ಕೊಂಡು ಬಿದ್ದಿರುವ ತ್ಯಾಗದ ಮರಗಳು ,
ಇನ್ನೊಂದ್ ಕಡೆ ಒಂದ್ ಅಷ್ಟು ಅರ್ಧಕ್ಕೆ ಮುರಿದಿದ್ದ ಅಡಿಕೆ ಮರಗಳು, ಇನ್ನ‌ ಸ್ವಲ್ಪ ಬೇರು ಸಮೇತ ನೆಲ ಕಚ್ಚಿದ ಗಿಡಗಳು. ಹಸಿರಾಗಿ, ಕೇಸರಿ ಬಣ್ಣಕ್ಕೆ ತಿರುಗಿ ಇನ್ನೇನು ಫಲಕ್ಕೆ ಬಂದಿರುವ ಅಡಿಕೆ ಕಾಯಿಗಳು..
ಎಲ್ಲಂದ್ರೆ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಇಟ್ಟಾಟ್ಟ…. ಎಲ್ಲೆ ನೋಟುದ್ರು ಮುರಿದು ಬಿದ್ದಿರೋ ಅಡಿಕೆ ಮರಗಳೆ‌‌‌ ಕಾಣಿಸ್ತಿದ್ವು…

ಮತ್ತೊಂದು ಕಡೆ ನೋಡ್ಬೇಕು ನೀವು‌‌‌ ..!!!

ನಿಮಗೆ ಈ ಗದ್ದೆ ತೋಟ ಅಂದ್ಮೇಲೆ ಒಂದು imagination ಇರುತ್ತೆ ಎಲ್ಲೆಲ್ಲೂ ಹಸಿರು ಹಸಿರಾಗಿರೋ ಭತ್ತದ ಗಿಡ , ಜುಳು ಜುಳು ಹರಿಯೊ ನೀರು …. ತಂಪನೆ ವಾತವರಣ, ನೋಡಿದಷ್ಟು ಹಸಿರಿನ ತೋರಣ‌‌.. ಆದ್ರೆ ಅವತ್ ಏನಾದ್ರು ನೋಡಿದಿದ್ರೆ ನಿಮ್ ಕಣ್ಣಲ್ಲಿ ಅಕ್ಷರಶಃ ನೀರು ಬರದು.‌ ಹತ್ತಾರು ಎಕ್ಕರೆ ಭತ್ತ , ಇನ್ನೇನು ಕುಯ್ಯಲಿಗೆ ಬರುತ್ತೆ .. ಈ ಬಾರಿ ದಾಖಲೆ ಪ್ರಮಾಣದಲ್ಲಿ ಭತ್ತ ಬೆಳೆಯಬೇಕು ಅಂತಾ ಕನಸನ್ನ ಅವರ ಕಣ್ಣಲ್ಲಿ ನಾವು ಕಾಣಬಹುದಿತ್ತು.. ನಿಮ್ಗೆ ಗೊತ್ತಾ ಆ ಕನಸಿನ ಹಿಂದೆ ಎಷ್ಟೊಂದು ಆಸೆಗಳು ಇರ್ತಾವೆ ಅಂತಾ ..????
ಮಕ್ಕಳ higher education ಗೆ ದುಡ್ಡು ಹೊಂದಿಸದು ಇರುತ್ತೋ…?
ಇಲ್ಲಾ ಮಗಳ ಮದ್ವೆ ಇರುತ್ತೋ..?
ಇಲ್ಲಾ ಆಸ್ಪತ್ರೆನಲ್ಲಿ ಯಾರದ್ರು ಚಿಕಿತ್ಸಾ ಪಡಿತಿದ್ರೋ… ??
ಇಷ್ಟು ಬೆಳೆ ಬೆಳೆಯೊಕ್ಕೇ ಯಾರತ್ರ ಎಷ್ಟು ಸಾಲ ಮಾಡಿದ್ರೋ ??
ಎಲ್ಲಾ ಅವರಿಗೆ ಮಾತ್ರ ಗೊತ್ತಿರುತ್ತೆ.‌‌‌…
ನಿಮಗೆ ಇನ್ನೊಂದು ಗೊತ್ತಿರಲಿ ಒಂದು KG ಅಕ್ಕಿ ಬೆಳೆದು ನಾವು ಅನ್ನ ತಿನ್ನಬೇಕು ಅಂದರೆ ಸತತ ಐದಾರು ತಿಂಗಳಾದ್ರು ಬೇಕು… ಒಂದು ಎಕ್ಕರೆ ಗದ್ದೆ ಅಚ್ಚುಕಟ್ಟು ಮಾಡಬೇಕು ಅಂದ್ರೆ ಏನೆಲ್ಲಾ ಪರಿಶ್ರಮ ಅಂದ್ರು 25ಸಾವಿರ ದುಡ್ಡು ಖರ್ಚು ಮಾಡಬೇಕು…
ಮೊದಲು ಗದ್ದೆ ಉಳುಮೆ ಮಾಡ್ಸಿ… ನೀರ್ ಕಟ್ಟಿ ಹದ ಮಾಡಿ… ಭತ್ತದ ಸಸಿಗಳನ್ನ ನಾಟಿ ಮಾಡಿ… ವಾರ ವಾರಕ್ಕೂ ನೀರು ಕಟ್ಬೇಕು‌‌…. ಅವನು ಟೈಮಿಗೆ ಸರಿಯಾಗಿ ಊಟ ನೀರು ಕುಡಿತಾನೋ ಗೊತ್ತಿಲ್ಲ ಆದ್ರೆ ಬೆಳೆಗೆ ಮಾತ್ರ ಇನ್‌ಟೈಮ್ನಲ್ಲಿ ಮಾಡ್ಬೇಕು.. ನೀರಿಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೋರ್ ವೆಲ್ ಹಾಕ್ಸಿರ್ಬೇಕು ..

ಅದೃಷ್ಟ ಚೆನ್ನಾಗಿದ್ರೆ ನೀರು ಬರುತ್ತೆ , ಇಲ್ಲಾ ಅಂದ್ರೆ ಅದೂ ಕೂಡ ಮಣ್ಣಪಾಲು‌.. 15ದಿನಕೊಮ್ಮೆಯಂತೆ ಗೊಬ್ಬರ ಹಾಕಿ… ಕಳೆ ಗಿಡಗಳು ಬರಬಾರದು ಅಂತಾ ದಿನ ಎಲ್ಲಾ ಔಷಧಿ ಹೊಡೆದು… ತಾಯಿ 9ತಿಂಗಳು ನಮ್ಮನ‌ ಹೇಗೆ ಕಾಪಾಡಿದ್ಲೋ ಹಂಗೆ ಬೆಳೆನು ಕೂಡ ಕಾಯಬೇಕು.‌.
ಫಸಲು ಬಿಟ್ಟಗಾ ಕುಯ್ಸಿ ಭತ್ತ ತೆಗೆದು ಅಕ್ಕಿ ಮಾಡ್ಸೋ ಅಷ್ಟ್ರಲ್ಲಿ ಒಂದ್ ರೌಂಡ್ ನರಕ ದರ್ಶನ ಆಗಿರುತ್ತೆ…ಆದ್ರೆ ಅವತ್ ಬಂದಿದ್ದ ಒಂದು‌ಮಳೆ ಯಿಂದಾಗಿ ಇರೋ ಬರೋ ಗದ್ದೆ ಎಲ್ಲಾ ನೆಲ ಕಚ್ಚಿ ಭತ್ತದ ಕಾಳುಗಳು ಕೆಸರಲ್ಲಿ ಹೊರಳಾಡ್ತಿದ್ದೋ… ಕಷ್ಟ ಪಟ್ಟು 5 ತಿಂಗಳು ಮಗು ಥರ ಕಾಪಾಡ್ಕೊಂಡು ಬಂದಿದ್ದ ಫಸಲು ಅವತ್ತು ಮಣ್ಣು ಪಾಲಾಗಿದ್ದು ಮಾತ್ರ ಘೋರ ಕೃತ್ಯ…‌ಸೊಂಟದ ಎತ್ತರಕ್ಕೆ ‌ಬೆಳೆದಿದ್ದ ಭತ್ತದ ಗಿಡಗಳು ನೆಲಸಮ ಆಗಿದ್ವು… ಇಷ್ಟು , ಕೇವಲ‌ 15 ಎಕ್ರೆ ಮಾತಲ್ಲ !! ಅಲ್ಲಿ ಸುತ್ತಾ ಮುತ್ತಾ ಇರೋ 150ಕ್ಕೂ ಹೆಚ್ಚಿನ ರೈತರ ಪಾಡು ಕೂಡ ಇದೆ ಆಗಿತ್ತು..‌ ಸುದ್ದಿ ಮಾಡ್ತೀನಿ ಅಂತಾ ಹೋಗಿ ಸೈಲೆಂಟ್ ಹಾಗಿ ಬಂದೆ… ಎಲ್ಲಾ ಭತ್ತದ ಗದ್ದೆಗಳು ಕೂಡ ಇನ್ನೇನು ಎರಡೇ ದಿನದಲ್ಲಿ ಫಸಲು ಕಟಾವಿಗೆ ಬರಬೇಕು, ಅನ್ನೋ ಅಷ್ಟ್ರಲ್ಲಿ ಪ್ರಕೃತಿ ವಿಕೋಪಕ್ಕೆ ಮುಗ್ದ ರೈತ ಬಲಿಯಾಗಿದ್ದ….ಯಜಮಾನ‌ ತಲೆ ಮೇಲೆ ಟವಲ್ ಸುತ್ಕೊಂಡು.. ಗಣೇಶ ಬೀಡಿ ಸೇದ್ಕೊಂಡು ಯೋಚನೆ ಮಾಡ್ಕೊಂಡು ಕುಂತಿದ್ರು…ಇದೇನಪ್ಪ ಮಳೆ ಇಂಗು ಬರುತ್ತಾ ಅಂತಾ ಅವತ್ತೆ ಗೊತ್ತಾಗಿದ್ದು…‌ಇದು ಕೇವಲ ಭತ್ತದ ಮಾತದ್ರೆ… ಇನ್ನು 500 ಅಡಿಕೆ ಮರಗಳ ಶ್ರಮ ಎಷ್ಟು ಅಂತಾ ಗೊತ್ತ.. ಫಸ್ಟ್ 4‌ವರ್ಷ school ಮಕ್ಕಳು ಥರ ಕಾಪಾಡ್ಬೇಕು‌..ನಾವೇ ಊಟ ಮಾಡ್ಸಿ time to time ನೀರು ಕುಡಿಸ್ಬೇಕು…ಅದಾದ್ಮೇಲೆನೆ ಪರಿಶ್ರಮಕ್ಕೆ ತಕ್ಕ ಫಲ‌ಸಿಗದು.. ಏನಿಲ್ಲಾ ಅಂದ್ರು 500ಅಡಿಕೆ ಮರದ ಬೆಳೆಗೆ 5-6 ಲಕ್ಷ ಸಂಪಾದನೆ ಆಗ್ತಿತ್ತು ಪ್ರತಿ ವರ್ಷಕ್ಕೇ ಹಾಗೆನೆ ಲಕ್ಷಾಂತರ ರುಪಾಯಿ ಖರ್ಚು ಕೂಡ ಮಾಡ್ಬೇಕಿತ್ತು… ಆದ್ರೆ ಅವತ್ತಿನ ವಿಧಿ ಆಟನೇ ಬೇರೆ ಆಗಿತ್ತು…

ಇವಿಷ್ಟು ನಮ್ ರೈತ ಪಡೋ ಪಾಡು ಇನ್ನೂ ಇಷ್ಟೆಲ್ಲಾ ಬೆಳೆಗಾಗಿ ಕೆಲವರು ಬೇರೆ ಕಡೆಯಿಂದ ಬ್ಯಾಂಕುಗಳಲ್ಲಿ ಸಾವಿರಾರು ರುಪಾಯಿ ಸಾಲ ಮಾಡಿರ್ತಾರೆ… ಆದ್ರೆ ಅವರು ಬೆಳೆಯೋ ಬೆಳೆಗೆ ಸರಿಯಾದ ಬೆಂಬಲ ಬೆಲೆನೇ ಸಿಕ್ಕಿರಲ್ಲ…ಇಷ್ಟೆಲ್ಲಾ‌ ತಾಪತ್ರಾಯ ಇದ್ರು ಮನೆ , ಮಕ್ಕಳು, ಸಂಸಾರದ ದೊಡ್ಡ ಜವಾಬ್ದಾರಿ ಹೆಗಲ ಮೇಲಿರುತ್ತೆ‌‌‌.. ಕೊನೆಗೊಮ್ಮೆ ಬ್ಯಾಂಕ್ ಅಧಿಕಾರಿಗಳು, ಸಾಲ ಕೊಟ್ಟವರ ಹಣ ತೀರಿಸಕ್ಕೇ ಆಗ್ದೆ ಅವರ ಕಿರುಕೊಳದಿಂದ ಸಾವೇ ಗತಿ ಅಂತಾ ಹೊಲದಲ್ಲೇ ವಿಷ ತಗೊಂಡೋ , ಮರಕ್ಕೆ‌ ನೇಣು ಬಿಗಿದುಕೊಂಡೋ ತನ್ನ ಪ್ರಾಣಾನ ಬಿಟ್ಟೀರ್ತಾನೆ…ನಾನ್ ಇಷ್ಟಲ್ಲಾ ನಿಮ್ಗೆ ಯಾಕೆ‌ ಹೇಳ್ತಿದ್ದೀನಿ ಗೊತ್ತಾ… ???ಈ ದೊಡ್ಡ ದೊಡ್ಡ ಸಿಟಿ ಗಳ ಕಡೆ ಕೆಲವರು ಒಪ್ಪತ್ತಿನಾ ಊಟಕ್ಕೂ ಪಡಬಾರದ ಕಷ್ಟನೇ ಪಡ್ತಾರೆ…ಆದ್ರೆ ಇವಾಗಿನ forward people’s ಇದಾರಲ್ಲ ಹಾಳಾದ ಹೋಟೇಲ್ಗೆ ಊಟಕ್ಕೆ ಅಂತಾ ಹೋಗ್ತಾರೆ..ಅಲ್ಲು ಕೂಡ ತಿರ್ಕೆ ಶೋಕಿ ಮಾಡ್ತಾರೆ‌.. ಚಾಲುಕ್ಯ ಹೋಟೆಲ್ಗೆ ಕಾಫಿ ಕುಡಿಯಕ್ ಹೋದ್ವಿ , ಪಕ್ಕದ್ table ನಲ್ಲಿ ಎರಡು ಜೋಡಿ ಬಂದ್ರು ಕೂತ್ರು.. ಸೌತ್ ಇಂಡಿಯನ್ ಮಿಲ್ಸ್ ನ order ಮಾಡಿ ಹರಟೆ ಹೊಡಿತಿದ್ರು.. ಊಟ ಬಂದ್ಮೇಲೆ ಅರ್ಧಂಬರ್ದ ತಿಂದು ಊಟದ್ ಮೇಲೆನೆ ಕೈ ತೊಳೆದು ಕೊಂಡು ಹೋದ್ರು.. ಅವರಿಗೆ ಅನ್ನದ ಬೆಲೆ ಗೊತ್ತಾಗಿಲ್ಲ , ಯಾರೋ ದುಡ್ಡು ಕೊಡ್ತಾರೆ , ಇನ್ಯಾರೋ ತಿಂದು ಶೋಕಿ ಮಾಡ್ತಾರೆ…

ಕಷ್ಟ ಪಟ್ಟು ದುಡಿದು ತಿನ್ನೋವರ್ಗು ಅವರಿಗೆ ತುತ್ತಿನ ಬೆಲೆ ತಿಳಿಯಲ್ಲ ..
ಅದು ರಾತ್ರಿ 11ಹಾಗಿತ್ತು ಬುಲ್ ಟೆಂಪಲ್ ರೋಡ್ ಹೋಟೆಲ್ ಎಲ್ಲಾ close ಹಾಗಿತ್ತು ಇನ್ನೇನ್ ಮಾಡದು ಅಂತಾ ಅಲ್ಲೆ ಇದ್ದ Domino’s pizza ಸೆಂಟರ್ ಗೆ ಹೋದೆ ಅಲ್ಲೂ ಅಷ್ಟೇ ರೀ ಬೇಕಾ ಬಿಟ್ಟಿ ತಿಂದು ಮಿಕ್ಕಿದ್ನೆಲ್ಲಾ plate ನಲ್ಲೇ ಬಿಡ್ತಿದ್ರು … ಪಾಪ ಅಲ್ಲೆ ಆಚೆಕಡೆ ಒಬ್ಬ ಅನಾಥ ಹುಡ್ಗ ಅದನ್ನೆ ನೋಡ್ಕೊಂಡು ನಿಂತಿದ್ದ .. ಆ ಸರ್ವರ್ ಬಂದು ಮಿಕ್ಕಿರದ್ನೆ ಪಾಕೇಟ್ ಕಟ್ಟಿ ಆ ಹುಡುಗನಿಗೆ ಕೊಟ್ಟ‌‌‌… ನಾನ್ ಕೇಳ್ದಾಗ daily ಇದೇ ಸಾರ್ ಇವರ್ಗಳು ಬರ್ತಾರೆ, ಮಿಕ್ಕಿದ್ನೆ ತಿನ್ಕೊಂಡು ಖುಷಿ ಪಡ್ತಾರೆ ಅಂದ…
ಎಷ್ಟೋ ಜನ ಇವತ್ತಿಗೂ ಕೂಡ, ವಾಸ ಮಾಡಕ್ಕೆ ಮನೆ ಇಲ್ದಲೆ, ತಿನ್ನಕ್ಕೆ ಅನ್ನಾ ಇಲ್ದಲನೆ ಸಾಯ್ತಿದ್ದಾರೆ…
ಇಷ್ಟೇ ನೋಡಿ ಬದುಕು ಹಲ್ಲು ಇದ್ದೋನ್ಗೆ ಕಡ್ಲೆ ಇಲ್ಲಾ‌, ಕಡ್ಲೆ ಇದ್ದೋನ್ಗೆ ಹಲ್ಲೆ ಇಲ್ಲಾ‌‌..
ದುಡ್ಡು ಇದ್ದೋನು ಪೂರ್ತಿ ತಿನ್ನಲ್ಲ..
ದುಡ್ ಇಲ್ದೋನು ಸಿಕ್ಕಿದ್ನೆ ಬಿಡಲ್ಲ‌..
ಇನ್ನು ಕೆಲ ಜನ ಮಕ್ಕಳ ಮದುವೇನ ಧಾಮ್ ಧೂಮ್ ಅಂತಾ ಜೋರಾಗ ಮಾಡ್ತಾರೆ ಹತ್ತಾರು variety ಊಟ ಮಾಡ್ಸಿರ್ತಾರೆ… ಮಿಕ್ಕಿದ್ ಊಟನ corporation ಗಾಡೀಲಿ ಕಸದ ರಾಶಿಲಿ ಹಾಕಿ ಕೈ ಸೀಟ್ಕೋತಾರೆ..
ಅದೇ ಕಸದಲ್ಲಿ ಹಾಕೋ ಬದ್ಲು ಯಾವುದಾದ್ರು ಅನಾಥ ಆಶ್ರಮಕ್ಕೋ ಇಲ್ಲಾ ಹಸಿದು ಬೀದಿನಲ್ಲಿ ಬಂದೋರ್ಗೆ ಕೊಟ್ರೆ ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದು ಇಲ್ಲಾ ಅನ್ನೋ ಭಾವನೆ ನಂದು…

ಇನ್ನೂ ಕೆಲವರು ರಾತ್ರಿ ಮಾಡಿದ್ದ ಅನ್ನ ಮಿಕ್ಕಿದ್ರೆ ಬೆಳಗ್ಗೆ ತಿನ್ನದೆ ಬಿಸಾಕ್ತಾರೆ , ನಾನ್ ತಂಗಳು ತಿನ್ನಲ್ಲ ಅಂತ ಧಿಮಾಕ್ ತೋರುಸ್ತಾರೆ…. ಕೆಲವರು ಮನೆ ಮುಂದೆ ಭಿಕ್ಷುಕ ಬಂದ್ರೆ ಅವನ ಪಾತ್ರೆಗೆ ಹಾಕ್ತರೆ , ಕೆಲವರು ಬೀದಿ ಹಸುಗಳು ತಿನ್ತವೆ ಅಂತಾ ಮುಸರೆಗೆ ಹಾಕ್ತಾರೆ..
ಇಲ್ಲಾ ಅಂದ್ರೆ ನಮ್ ಥರ ಮೋಸ್ಟ್ ವಾಂಟೆಡ್ ಬ್ಯಾಚುಲರ್ಸ್ ಆದ್ರೆ ಬೆಳಗ್ಗೆಗೆ ಅದೇ ಒಗ್ಗರಣೆ ರೈಸ್ …ಇವತ್ತು ರೈತ ಒಂದು ತುತ್ತು ಅನ್ನ ಬೆಳೆದು ನಮಗೆ ನೀಡಬೇಕು ಅಂದ್ರೆ ಅವನು ಪಡುವ ಕಷ್ಟ ಅಷ್ಟಿಷ್ಟಲ್ಲ..so ಎಲ್ಲರೂ ದಯಮಾಡಿ ತಿನ್ನುವ ಅಗಳನ್ನು waste ಮಾಡ್ಬೇಡಿ… ಒಂದೊಂದು ಕಾಳಿನಲ್ಲೂ ನೂರಾರು ಮಣ್ಣಿನ ಮಕ್ಕಳ‌ ಬೆವರು ಹನಿ ಇರುತ್ತೆ…

ಹಾಗಾಗಿ ರೈತನ ಪರಿಶ್ರಮ ಕ್ಕೆ ಬೆಲೆ ನೀಡಿ .. ಇವತ್ತು ಕಾವೇರಿ ಇರ್ಬೋದು , ಮಹದಾಯಿ ಇರ್ಬೋದು … ಆ ತಾಯಿನ‌ ನೆಚ್ಕೊಂಡು ಎಷ್ಟೋ ಕುಟುಂಬ ಗಳು ಜೀವನ ಸಾಗಿಸ್ತಿವೆ , ಕೃಷಿನೇ ಜೀವನ ಅನ್ಕೊಂಡು ಹೊದ್ದಾಡ್ತಿವೆ.‌ ನೀವೇನು ಇವತ್ IT BT ನಲ್ಲಿ ಟೈಮ್ – ಟೈಮ್ ಗೆ ತಿನ್ಕೊಂಡು , ಕುಡ್ಕೊನಮಡು ಲೈಪ್ ಲೀಡ್ ಮಾಡ್ತಿದ್ದೀರ ಇದ್ಕೆಲ್ಲಾ ನಮ್ ರೈತರೆ ಕಾರಣ..
ಹಾಗಾಗಿ ತಾವೆಲ್ಲ
ಅನ್ನದಾತನ ಬೆಂಬಲಕ್ಕೆ ಸದಾ ಮುನ್ನುಗ್ಗಿ ಬನ್ನಿ‌‌‌…
ಅವನ ಸಂಕಷ್ಟಕ್ಕೆ ಸದಾ ಕೈ ಜೋಡಿಸಿ .

ಜೈ ಜವಾನ್ ಜೈ ಕಿಸಾನ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version