ಭಾವ ಭೈರಾಗಿ

ಪ್ರಪಂಚದ ಸಾಮರಸ್ಯವೇ ಭಾವೈಕತೆಯ ಸಂಗಮ

Published

on

  • ಸುಮ ಜಿ. ಬತ್ತಿಕೊಪ್ಪ ಆನಂದಪುರಂ

ನಾದಿಕಾಲದಿಂದಲೂ ದೇಶಗಳ ನಡುವೆ ವ್ಯಾಪಾರ ವ್ಯವಹಾರ ವಿಷಯಗಳಲ್ಲಿ ಮತ್ತು ಸಾರ್ವಭೌಮತ್ವಕ್ಕಾಗಿ ಘರ್ಷಣೆಗಳು ನಡೆಯುತ್ತಲೇ ಇವೆ. ಇದೇ ವೇಳೆ ಪರಸ್ಪರ ಮಿತೃತ್ವದ ಮೂಲಕ ದೇಶಗಳನ್ನು ಬೆಸೆಯುವ ಕಾರ್ಯ ಸಹ ನಡೆಯುತ್ತಿವೆ. ದೇಶಗಳ ವಿಸ್ತರಣೆಗೆ ಅಪಾರ ಪ್ರಮಾಣದ ಸೈನಿಕ ಶಕ್ತಿಯನ್ನು ಕಳೆದುಕೊಂಡು ಕೊನೆಗೆ ಸೋತು ಸುಣ್ಣವಾಗಿ ಒಪ್ಪಂದಗಳ ಮೂಲಕ ಮಿತ್ರರಾಗಿರುವುದನ್ನು ಮತ್ತು ದೇಶ ದೇಶಗಳ ನಡುವೆ ಸಾಮರಸ್ಯವನ್ನ ಬೆಸೆದಿರುವುದನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದಾಗಿದೆ.

ಸರ್ವಾಧಿಕಾರತ್ವ, ರಾಜಕೀಯ ಅಸ್ಥಿರತೆ, ಪ್ರತಿಷ್ಠೆ , ಸಂಪತ್ತಿನ ದಾಹ ಮದವೇರಿದಾಗಲೇ ಮಹಾ ಯುದ್ಧಗಳು ನಡೆದು ಅಪಾರ ಪ್ರಮಾಣದ ಮಾನವ ಹಾನಿ, ನಾಶನಷ್ಟ ಉಂಟಾಗಿರುವುದನ್ನು ಕಾಣಬಹುದು. ಇಂತಹ ಮನುಷ್ಯ ಕುಲದ ಘನ ಘೋರ ಘಟನೆಗಳು ಮರುಕಳಿಸದಂತೆ ಮಾಡಲು, ವೈವಿಧ್ಯತೆಗಳಿದ್ದರೂ, ಜನರ ಮನಸ್ಸುಗಳಲ್ಲಿ ಪರಸ್ಪರರ ಭಾವ, ವೇಷ, ಆಹಾರ ಮತ್ತು ಭೌಗೋಳಿಕ ಸಂಸ್ಕೃತಿ ಬಗ್ಗೆ ಪ್ರೀತಿ ಸಾಮರಸ್ಯವನ್ನು ತುಂಬುವುದೆ ನವೆಂಬರ್-29 ಅಂತರರಾಷ್ಟ್ರೀಯ ಸಾಮರಸ್ಯ ದಿನ ಮಹತ್ವವಾಗಿದೆ.

ಯೇಸು ಕ್ರಿಸ್ತ, ಮಹಮ್ಮದ ಪೈಗಂಬರ್ ಭಗವಾನ ಬುದ್ಧ ಬೇರೆ ಬೇರೆ ಭೌಗೋಳಿಕ ಹಿನ್ನಲೇ ಇದ್ದರೂ ಅವರು ವಿಶ್ವ ತುಂಬ ಹಂಚಿದ ಕರುಣೆ ಪ್ರೀತಿ ಮೈತ್ರಿ ಸಹೋದರತ್ವವನ್ನೂ ಇಂದು ಪ್ರಪಂಚದ ಪಸರಿಸಬೇಕಿದೆ. ಪ್ರಾಕೃತವಾಗಿ ಭಿನ್ನವಾಗಿದ್ದರು ಮನುಷ್ಯನ ಮನಸ್ಸು ಒಂದೆಯೇ ಅಗಿದೇ ಎಂಬುದು ಈ ಮಹಾನ್ ವ್ಯಕ್ತಿಗಳಿಂದ ತಿಳಿಯಬಹುದಾಗಿದೆ.
ಅಂತರಿಕವಾಗಿ ನಮ್ಮ ದೇಶದ ಒಳಗೂ ವಿವಿಧ ಮತ, ಧರ್ಮ ಜಾತಿ, ವಿಭಿನ್ನ ರೀತಿಯ ಭಾವ ಇದ್ದರೂ ಕಲೆ, ಸಾಹಿತ್ಯ, ಸಾಂಸ್ಕೃತಿಕ ಭಾವೈಕತೆಯೇ ನಮ್ಮ ಭಾರತ ದೇಶದ ಹಿರಿಮೆ.

ವಿಶಿಷ್ಠ ರಾಜಕೀಯ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕವಾಗಿ ವಿವಿಧ ದೇಶ ವಿದೇಶಗಳ ನಡುವೆ ತನ್ನ ಏಕತೆಗೆ ದಕ್ಕೆಯಾಗದ ರೀತಿಯಲ್ಲಿ ಸಾಮರಸ್ಯವನ್ನ ಬೆಸೆಯುತ್ತಿದೆ. ಪ್ರಪಂಚದಲ್ಲಿಯೇ ಆನೇಕ ಧರ್ಮಗಳಿರುವ ಏಕೈಕ ದೇಶ ಭಾರತ.ಅನಾದಿಕಾಲದಿಂದಲೂ ಈ ಕಾಲದವರೆಗೂ ಬೌದ್ಧ, ಜೈನ , ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಧರ್ಮಗಳ ಅದೆನೇ ಆಚಾರ ವಿಚಾರಗಳ ನಡುವೆ ಭಿನ್ನಭಿಪ್ರಾಯಗಳಿದ್ದರು ಪರಸ್ಪರ ಸಹೋದರರಂತೆ ಒಗ್ಗಟ್ಟಿನಿಂದ ಸ್ವತಂತ್ರವಾಗಿ ಬದುಕುತ್ತಿದ್ದಾರೆ.

ಭಾರತ ಸಂವಿಧಾನವು ಸಹ ನಮ್ಮ ದೇಶಕ್ಕೆ ಮತ್ತಷ್ಟು ಮೆರಗು ನೀಡಿದೆ. ಏಕೆಂದರೆ ದೇಶ ವಿದೇಶಿ ರಾಜರ ಆಕ್ರಮಣ ದಾಳಿ ಮತ್ತು ಬ್ರೀಟಿಷರ ದಾಸ್ಯದಲ್ಲಿದ್ದ ದೇಶ ಇಂದು ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ರಚಿಸಿ ಸರ್ವರಿಗೂ ಸಮ ಪಾಲು ಸಮ ಬಾಳು ನೀಡಿ ಪ್ರತಿಯೊಬ್ಬ ಭಾರತಿಯ ನಾಗರಿಕರನ್ನು ಗೌರವಿಸಿದೆ. ಪ್ರತಿಯೊಂದು ಧರ್ಮ ಮತ ಜಾತಿ ಮತ್ತು ಭಾವಗಳಿಗೆ ಸಮಾನವಾಗಿ ಕಾನೂನುತ್ಮಾಕ ರಕ್ಷಣೆ ನೀಡಿ ಪ್ರಜ್ಞಾವಂತರನ್ನಾಗಿಸಿದೆ. ಯಾವುದೆ ಧರ್ಮಗಳ ಭಾವನಾತ್ಮಕ ಭಾವನೆಗಳಿಗೆ ಧಕ್ಕೆಯಾಗದಂತೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ.

ಕೆಲವೇ ತಿಂಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಗಡಿ ಭಾಗದ ವಿಸ್ತಾರಣೆ ಅಕ್ಷರ ಸಹ ಯುದ್ಧ ಸ್ಥಿತಿಯನ್ನ ನಿರ್ಮಾಣವಾಗಿತ್ತು ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಶ್ವ ಸಂಸ್ಥೆ ಮತ್ತು ದೇಶ ವಿದೇಶಗಳ ಮಾತುಕತೆಗಳಿಂದ ಭಾರತ ಪಾಕಿಸ್ತಾನದ ನಡುವೆ ಬಹುಬೇಕು ಸಾಮರಸ್ಯವನ್ನ ಬೆಸೆಯಲಾಯಿತು. ಇತ್ತಿಚಿಗೆ ಸುಪ್ರಿಂ ಕೋರ್ಟ್ ನೀಡಿದ ಐತಿಹಾಸಿಕ ಬಾಬರಿ ಮಸಿದಿ ಮತ್ತು ರಾಮ ಮಂದಿರ ತೀರ್ಪಿಗೆ ದೇಶ ಸ್ಪಂದಿಸಿದ ರೀತಿ ಭಾರತದ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ ಪರಸ್ಪರ ದೇಶ ವಿದೇಶಗಳ ನಡುವೆ ಗೌರವಯುತವಾಗಿ ಮೈತ್ರಿಯಿಂದ ಬಾಳಿ ಬದುಕಬೇಕಿದೆ ಮತ್ತು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿ ಅಗಬೇಕಿದೆ.

ನವೆಂಬರ್ 29ರಂದು ಅಂತಾರಾಷ್ಟ್ರೀಯ ಸಾಮರಸ್ಯ ದಿನಾಚರಣೆ ಅಂಗವಾಗಿ ಲೇಖನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version